Home / ಕವನ / ಕವಿತೆ / ಹಂಬಲು

ಹಂಬಲು

ದೇಗುಲದಿ ನಿನ್ನ ಶಿಲೆಯಮೂರುತಿಯ ಮುಂದೆ
ಬಾರಿಸುವ ಜೇಗಟೆಯದನಿಗೆ ದೇವ!
ಮರೆತು ನಿದ್ದೆಯಮಾಡುತಿಹ ಎನ್ನ ಹೃದಯದಲಿ
ಅರಿವಿಲ್ಲ! ಎಚ್ಚರಿಸು ಪರಮಾತ್ಮನೆ! ೧

ಕಂದದಯೆ ಕುಂದದೆಯೆ ನಿನ್ನ ಬಿಂಬದ ಮುಂದೆ
ನಿಂದು ಉರಿಯುತಿಹ ನಂದಾದೀಪವು
ಹರಿಸಲಾರದೆದೆಯಲಿಹ ಗಾಢಾಂಧತೆಯ
ತೋರು ನೀಂ ಜ್ಞಾನಜೋತಿಯನು ದೇವ! ೨

ಹೊಳೆಯುತಿಹ ನಿನ್ನ ವಿಗ್ರಹದ ಮುಂಗಡೆಯಲ್ಲಿ
ಬೆಳಗುತಿಹೆ ಕಪ್ಪುರಾರತಿಯು ಮತ್ತೆ
ಘಮಘಮಿಪ ಧೂಪಧೂಮದ ಕಂಪು ಎನ್ನೆದೆಯ
ಕಲುಷಿತವ ಹರಿಸಲಳವಲ್ಲ ದೇವ! ೩

ಪಂಡಿತರು ಘೋಷಿಸುವ ವೇದಮಂತ್ರಗಳೆಲ್ಲ
ಮಂದಮತಿಯಾದೆನಗೆ ನಿಲುಕಲಾರ
ವೆಂದೆನ್ನೆದೆಯ ಒಳದನಿಯು ನುಡಿಯುತಿದೆ ದೇವ!
ಮನದ ಬಂಧನ ಹರಿಸು ಗುರುದೇವನೆ! ೪

ಬಾರಿಸುವ ಜೇಗಟೆಯು ಉರಿವ ನಂದಾದೀಪ
ಬೆಳಗುತಿಹ ಕಪ್ಪುರಾರತಿಯು ಮತ್ತೆ
ಧೂಪಧೂಮದ ಕಂಪು ಪಂಡಿತರ ಮಂತ್ರಗಳು
ಬರಿಯ ಬಯಲಾಟದಂತಿಹವು ದೇವ! ೫

ತಿಳಿನೀರಕೊಳದ ಮೇಗಡೆಯಲ್ಲಿ ಮುಸುಕಿರುವ
ಶೈಲೂಷವನು ಕಲ್ಲೆಸೆದು ಹರಿಸು
ವಂತೆನ್ನ ಹೃದಯ ಕಾಸಾರ ಕಲುಷಹಿತವ ಹರಿ
ಸಲಾರದು ನಾನೆಸಗುತಿಹ ಕರ್ಮವು ೬

ಕರ್ಮವೆಂತೆಸಗಿದರು ಫಲವೇನು? ಗುರುದೇವ!
ಮರ್ಮವರಿಯದೆ ತೊಳಲುವೆನೆಲ್ಲೆಲ್ಲು!
ಜ್ಞಾನದಾಹದಿ ಬಳಲಿರುವ ಎನಗೆ ನಿಜತತ್ವ
ಪೀಯೂಷಪಾನವನು ನೀಡು ದೇವ! ೭

ಕಾನನದ ಮಧ್ಯದಲಿ ಕಾರಿರುಳ ಕೊನೆಯಲ್ಲಿ
ಅರಳುತಿಹ ಸುಮದಂತೆ ಅರಳಿಸೆನ್ನ
ಒಳಗಣ್ಣ ಹೂವನು ಕಾರುಣ್ಯ ಮೂರುತಿಯೆ!
ಬಗೆಹರಿಸು ಮನದ ತೊಡಕನ್ನು ದೇವ! ೮
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...