Home / ಕವನ / ಕವಿತೆ / ದೀಪಾಳಿಯ ಕೋಟೆಯಾಟವು

ದೀಪಾಳಿಯ ಕೋಟೆಯಾಟವು

ಬಸವಕ ಬಸವೆನ್ನಿರೇ, ಬಸವನ ಪಾದಕೆ ಶರಣೆನ್ನಿರೇ |
ಒಂದು ಸುತ್ತಿನ ಕೋಟಿ, ಅದರೊಳಗೊಂದು ಚಂದದ ಬಸವ || ೧ ||

ಬಸವನು ಸ್ವರ್ಗದೊಳೂ ಬೆನ್ನೊಳು ಪರಶಿವನನು ಹೊರುವಾ |
ಬಸವನಮೇಲ್ಹತ್ತಿ, ಪರಶಿವಮೂಜಗವನು ಪೊರೆವಾ || ೨ ||

ಪರಶಿವನಾಜ್ಞೆಯಲೀ, ಬಸವನು ಜನಿಸಿದ ಭೂಮಿಯಲಿ |
ಪರಶಿವನಾಜ್ಞೆಯನೂ, ಬಸವನು ಬೀರಿದ ಭೂಮಿಯಲಿ || ೩ ||

ಬಸವನು ಮಾದರಸ, ಮನೆಯೊಳು ಜನಿಸಿದಮಗನಾಗಿ |
ಬಸವನು ತಾಪೊರೆದಾ, ಪತಿತರ ಪಾವನ ಮಾಡುತಲೀ || ೪ ||

ಬಸವನು ಜನಿವಾರ, ಬಿಸುಟುತೆ ಜಾತಿಯ ಗೂಡಿಸಿದ |
ಬಸವನ ದೆಯೆದಿಂದೇ, ಭಾರತ ಜನಗೂಡಿತುವೊಂದೇ || ೫ ||

ಋಷಿವರ ಬಸವಂಣಾ, ಸಂಗಮಕ್ಷೇತ್ರದಿತಪಿಸುತ್ತೇ |
ಕೃಷಿವಲರುದ್ಧಾರ, ಮಾಡಿದ ಬಸವಜನೋದ್ದಾರಾ || ೬ ||

ಬಸವನು ಭಕುತಿಯಲಿ, ಸಂಗನನರ್ಚಿಸಿ ನಿತ್ಯದಲಿ |
ಎಸೆದನು ಭೂಮಿಯಲಿ, ಭಕ್ತರಮಾಲಿಕೆ ಪದಕದಲಿ || ೭||

ಬಸವನು ತಾಹೊರಟಾ, ಮಂತ್ರಿಯ ಬಳದೇವನ ಮನೆಗೆ |
ಬಸವನ ಮೆಚ್ಚುತಲಿ, ಮಗಳನುಯಿತ್ತನು ಬಳದೇವಾ || ೮ ||

ಬಸವನ ಚಾತುರ್ಯ, ಶೆಳೆಯಿತು ಮನವನು ಬಿಜ್ಜಳನ |
ಬಸವನ ನೇಮಿಸಿದಾ, ಮಂತ್ರಿಯತಾಣದಿ ಬಿಜ್ಜಳನೂ || ೯||

ಬಸವನ ದಯದಿಂದೇ, ಧಾವಿಸಿ ಬಂದುದು ಶರಣಜನಾ |
ಬಸವನ ದರುಶನದೀ, ಹೊಂದಿತು ಸಂತಸ ಸೌಖ್ಯಗಳಾ || ೧೦ ||

ಬಸವನ ಪರಿಕಿಸಲೂ ಹೊರಟನು ಅಲ್ಲಮಪ್ರಭು ತಾನೂ |
ಬಸವನ ನೋಡುತಲಿ, ತುಂಬಿತು ಹರುಷವು ಅವನಲ್ಲೀ || ೧೧ ||

ಊರೂರಿಗೆ ಬಸವಾ, ಕಟ್ಟಿದ ಮಠಗಳನೊಂದೊಂದೂ |
ಬೇರೂರಿದ ಹಳೆಯ, ದೋಷವನೋಡಿಸಿದನು ಬಸವಾ || ೧೨ ||

ಮಠದೊಳಗಯ್ಯನಿಗೆ, ಶಿಶುಗಳನೋದಿಸೆ ವಿಧಿಸಿದನೂ |
ಶಠರನು ದೂಡಿದನೂ, ಧರ್ಮದ ಸೋಗಿಲಿ ಮೆರೆವೆವರಾ || ೧೩ ||

ಅನ್ನವ ನೀಡಿಸಿದಾ, ಮಠದಲಿ ಹಸಿದಿಹ ಜನಪದಕೇ |
ತನ್ನವರೆಲ್ಲರನೂ, ತಿಳಿಯುವ ದಾರಿಯ ತೋರಿಸಿದಾ || ೧೪ ||

ಮಾನವ ಜನವೆಲ್ಲಾ, ಮನುವಿನ ಸಂತತಿ ತಾನೆಂದೂ |
ಬೋಧೆಯ ಮಾಡಿದನೂ, ಜನಗಳನೊಂದನುಗೂಡಿಸುತೇ || ೧೫ ||

ರಾಟಿಯ ತಿರುವುತಲೀ, ನೂಲಲಿ ಬಟ್ಟೆಯ ನೇಯುತಲೀ |
ಥಾಟಿಲಿ ಮೆರೆಯುತಲೀ, ಬಾಳುವ ಧಾಟಿಯ ತೋರಿದನೂ || ೧೬ ||

ಕಾಯಕ ಕೈಲಾಸ, ವೆಂಬುವ ತತ್ವನ ಬೋಧಿಸಿದಾ |
ನಾಯಕ ಬಸವಂಣಾ, ಮಾಡದ ಕಾಯಕವೇನಣ್ಣಾ || ೧೬ ||

ಬಸವನು ಮಾಡಿದುದೇ ಬಸವನ ತಮ್ಮನು ಮೋಹನನೂ |
ಎಸಗುತೆ ಭಾರತಕೇ, ತಂದನು ಸ್ವಾತಂತ್ರದ ಲಕುಮಿ || ೧೮ ||

ಬಸವನು ಮೋಹನರೂ, ಶೇರುತೆ ಪರಶಿವ ಸಾನ್ನಿಧ್ಯಾ |
ಎಸೆವರು ದಿಟ್ಟಿಗಳಾ, ನಮ್ಮೊಳು ಪ್ರೇಮವ ಬೀರುತಲೀ || ೧೯ ||

ಬಸವನ ತತ್ವಗಳಾ, ಜನಗಳು ಪಾಲಿಸೆ ಸಂತತದೀ |
ಬಸವನು ಮೋಹನರೂ, ಮಾಳ್ಪರು ತಾಂಡವ ನೃತ್ಯಗಳಾ || ೨೦ ||

ಬಸವಕ ಬಸವೆನ್ನಿರೇ, ಬಸವನ ಪಾದಕೆ ಶರಣೆನ್ನಿರೇ |
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...