Home / ಕವನ / ಕವಿತೆ / ಅಭಿಸಾರಿಕೆಯು

ಅಭಿಸಾರಿಕೆಯು

ನಾನಭಿಸಾರಿಕೆ ಹೊರಟಿಹೆನೂ ನಲ್ಲನಕೂಡಲು ರಾತ್ರಿಯೊಳೂ
ರಾಧೆಯು ಕೃಷ್ಣನ ಸಂಗದೊಳೂ, ಕೂಡಿದವೋಲ್ನಾ ಕೂಡುವೆನೂ ||

ಕೂಡುತೆಸಂಗದ ಸುಖವನ್ನೂ, ಪಡೆಯುವೆ ನತಿಶಯ ನಾನಿಂದೂ |
ಪಡೆಯುತೆ ಸುಖವನು ನಾನಿಂದೂ, ಮೆರೆಯುವೆ ನತಿಶಯಬಿಂಕದೊಳೂ ||

ಬಿಂಕವ ಮೆರೆಯಲು ನಾನಿಂದೂ, ಶಂಕಿಸುವುದು ಜನಜಾರಿಣಿಯೂ |
ಶಂಕಿಪಜನರ ಕಣ್ಣೊಳಗೇ, ತೂರುವೆ ಮಣ್ಣನು ನಾನಿಂದೂ ||

ದ್ರೌಪದಿಯೈವರ ವರಿಸಿದಳೂ, ನನ್ನಯಗಂಡರು ಮೂರೆರಡೂ
ಪತಿಯರು ದೇಹವಕೊಂಡಿಹರೂ, ಮನವನು ಕದ್ದಿಹ‌ಮಾರಮಣಾ ||

ಪತಿಯರು ಮನವನು ಕಳವುದಕೇ, ಸತತದಿ ಯತ್ನವಮಾಡುವರೂ |
ಪತಿಯರ ಮೂಲೆಗೆಯೊತ್ತುತ್ತೇ, ನಡೆದಿಹೆನೆಲ್ಲನ ಕೂಡ್ವುದಕೇ ||

ಕಾಮನು ಕ್ರೋಧನು ಮೋಹನನೂ, ಮತ್ಸರ ಮದದಂಭಾದಿಗಳೂ |
ಪತಿಗಳು ನನ್ನನು ಶೆಳೆಯುವರೂ, ಗತಿಕಾಣಸದೆ ನಾಹೊರಟಿಹೆನೂ ||

ಅತಿ ದಾರುಣವಿದು ಕಾಯಕವೂ, ಪತಿಗಳ ಮೋಸವಗೊಳಿಸುವದೂ |
ಸೂಳಿಯರೋಣಿಗೆ ಹೊರಟಿಹೆನೂ, ಸೂಳರಿಯುತೆ ನಾಜಾರುನೆನೂ ||

ಖೂಳರ ಕಣ್ಣಿಗೆ ಬೀಳದಲೇ, ಜಾಳವನೊಡ್ಡುತೆ ಕುಶಲದಲೀ |
ಬಾಳಿಗೆ ಮಣ್ಣನು ಎರಚತ್ತೇ ಗೋಳಿನ ಮಾಯವ ದೂಡುವೆನೂ ||

ಮದಿರೆಯ ಕುಡಿಯುತೆ ಮದಿಸುವೆನೂ, ಮದವೇರುತೆ ನಾಕುಣಿಯುವೆನೂ |
ಮದಿರೆಯ ಭಟ್ಟಿಯು ಮನದೊಳಗೇ, ಮಧುರಿಪುವಿನ ನಾಮಾಮೃತವು ||

ಶಾಸನವಿದ ತಾಬಂಧಿಸದೂ ಶೋಷಿಸದಿದು ತಾದೇಹಗಳಾ |
ಈಶನ ಕೃಪೆಯಿಂದೆಲ್ಲರಿಗೆ, ತೋಷನೀಡ್ವುದು ಸಂತತದೀ ||

ಮದಿರೆಯ ಕುಡಿಯುತೆ ಮೋಹನನೂ ಕಡುಮದದಿಂದಲಿ ತಾಕುಣಿದೂ|
ಭಜಿಸಿದ ಸಂತತ ಹರಿನಾಮಾ, ಭಜಿಸುತ ಶೇರಿದ ವೈಕುಂಠಾ ||
*****

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...