Home / ಕವನ / ಕವಿತೆ / ಅಭಿಸಾರಿಕೆಯು

ಅಭಿಸಾರಿಕೆಯು

ನಾನಭಿಸಾರಿಕೆ ಹೊರಟಿಹೆನೂ ನಲ್ಲನಕೂಡಲು ರಾತ್ರಿಯೊಳೂ
ರಾಧೆಯು ಕೃಷ್ಣನ ಸಂಗದೊಳೂ, ಕೂಡಿದವೋಲ್ನಾ ಕೂಡುವೆನೂ ||

ಕೂಡುತೆಸಂಗದ ಸುಖವನ್ನೂ, ಪಡೆಯುವೆ ನತಿಶಯ ನಾನಿಂದೂ |
ಪಡೆಯುತೆ ಸುಖವನು ನಾನಿಂದೂ, ಮೆರೆಯುವೆ ನತಿಶಯಬಿಂಕದೊಳೂ ||

ಬಿಂಕವ ಮೆರೆಯಲು ನಾನಿಂದೂ, ಶಂಕಿಸುವುದು ಜನಜಾರಿಣಿಯೂ |
ಶಂಕಿಪಜನರ ಕಣ್ಣೊಳಗೇ, ತೂರುವೆ ಮಣ್ಣನು ನಾನಿಂದೂ ||

ದ್ರೌಪದಿಯೈವರ ವರಿಸಿದಳೂ, ನನ್ನಯಗಂಡರು ಮೂರೆರಡೂ
ಪತಿಯರು ದೇಹವಕೊಂಡಿಹರೂ, ಮನವನು ಕದ್ದಿಹ‌ಮಾರಮಣಾ ||

ಪತಿಯರು ಮನವನು ಕಳವುದಕೇ, ಸತತದಿ ಯತ್ನವಮಾಡುವರೂ |
ಪತಿಯರ ಮೂಲೆಗೆಯೊತ್ತುತ್ತೇ, ನಡೆದಿಹೆನೆಲ್ಲನ ಕೂಡ್ವುದಕೇ ||

ಕಾಮನು ಕ್ರೋಧನು ಮೋಹನನೂ, ಮತ್ಸರ ಮದದಂಭಾದಿಗಳೂ |
ಪತಿಗಳು ನನ್ನನು ಶೆಳೆಯುವರೂ, ಗತಿಕಾಣಸದೆ ನಾಹೊರಟಿಹೆನೂ ||

ಅತಿ ದಾರುಣವಿದು ಕಾಯಕವೂ, ಪತಿಗಳ ಮೋಸವಗೊಳಿಸುವದೂ |
ಸೂಳಿಯರೋಣಿಗೆ ಹೊರಟಿಹೆನೂ, ಸೂಳರಿಯುತೆ ನಾಜಾರುನೆನೂ ||

ಖೂಳರ ಕಣ್ಣಿಗೆ ಬೀಳದಲೇ, ಜಾಳವನೊಡ್ಡುತೆ ಕುಶಲದಲೀ |
ಬಾಳಿಗೆ ಮಣ್ಣನು ಎರಚತ್ತೇ ಗೋಳಿನ ಮಾಯವ ದೂಡುವೆನೂ ||

ಮದಿರೆಯ ಕುಡಿಯುತೆ ಮದಿಸುವೆನೂ, ಮದವೇರುತೆ ನಾಕುಣಿಯುವೆನೂ |
ಮದಿರೆಯ ಭಟ್ಟಿಯು ಮನದೊಳಗೇ, ಮಧುರಿಪುವಿನ ನಾಮಾಮೃತವು ||

ಶಾಸನವಿದ ತಾಬಂಧಿಸದೂ ಶೋಷಿಸದಿದು ತಾದೇಹಗಳಾ |
ಈಶನ ಕೃಪೆಯಿಂದೆಲ್ಲರಿಗೆ, ತೋಷನೀಡ್ವುದು ಸಂತತದೀ ||

ಮದಿರೆಯ ಕುಡಿಯುತೆ ಮೋಹನನೂ ಕಡುಮದದಿಂದಲಿ ತಾಕುಣಿದೂ|
ಭಜಿಸಿದ ಸಂತತ ಹರಿನಾಮಾ, ಭಜಿಸುತ ಶೇರಿದ ವೈಕುಂಠಾ ||
*****

Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...