Home / ಕವನ / ಕವಿತೆ / ಹಿಮ ಸಮಾಧಿ

ಹಿಮ ಸಮಾಧಿ

ಹೇಮ೦ತ ಋತುಯೋಗಿ ಮೌನದಲಿ ಘನ-ಸಾಂದ್ರ
ಹಿಮ ಸಮಾಧಿ ಸ್ಥಿತಿಯೊಳೊಪ್ಪಿಹನು; ನಿಶ್ಚಿಂತ
ನಿಶ್ಚಲ ಧ್ಯಾನ ಸನ್ಮುದ್ರೆಯಲಿ ತಪವಾ೦ತ
ಯತಿಯ ರೀತಿಯನೋತು ನಿಂತಿಹನು! ಹಿಮ ರುಂದ್ರ

ಭಾವದಲಿ ಸಕಲ ಭೂಮಿ-ವ್ಯೋಮ ಕರಗಿಹುದು
ಬೂದು ಬಣ್ಣದ ಲೀಲೆಯಲಿ ವ್ಯಾಪ್ತವಾಗಿರುವ
ಸಾಮಸ್ತ್ಯ ಸೂತ್ರದಲಿ ನಿಸ್ಯೂತವೀ ವಿಶ್ವ.
ಪ್ರಾಣಿ ಸಂತತಿಯೆಲ್ಲ ಕುಳಿರ ಕಡಲಿನೊಳಾಳ್ದು.

ಭೂತದಾವೇಶವ೦ತಂತೆ ‘ಗಡಗಡ’ ನಡುಗಿ,
ಬೆಕ್ಕಸಂ ಬಡುತಿಹುದು-ಇದನಾವುದನು ಕೂಡ
ಗಣಿಸದಿಹ ಹಿಮಪುರುಷನಿರವಿನದ್ಭುತ ನೋಡ-
ಅವ್ಯಕ್ತ ಶಕ್ತಿಯಿಂ ವ್ಯೋಮ ವಕ್ಷವನುಡುಗಿ,

ಗಿರಿ-ಶೃಂಗ-ಕಾಂತಾರ-ಭೂಮಿಗಳನಾವರಿಸಿ.
ನಿಂತಿಹನು ವರ ವಿರಾಷಾಕಾರವನು ವಹಿಸಿ.
*****
೧೯೩೫

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...