Home / ಕವನ / ಕವಿತೆ / ಐವರೊಳಗಿನ ನಾವು

ಐವರೊಳಗಿನ ನಾವು

ಐವರು
ಯಾವ ಕಂಪನಿಯ ಮೇಕಪ್‌ಗಳಿರಬೇಕಿವು!
ಇಪ್ಪತ್ನಾಲ್ಕೂ ತಾಸು ಆಕಾಶ
ಏನೆಲ್ಲ ಬಣ್ಣ ಹಚ್ಚಿಕೊಳ್ಳುತ್ತದಲ್ಲ,
ಕಾಲೇಜಿಗೊ, ಕ್ಲಬ್ಬಿಗೊ ಮದುವೆಗೊ ಮಸಣಕೊ
ಹೋಗುವಂತೆ ಅದೆಷ್ಟು ಬಣ್ಣಗಳದಕೆ

ಅರೆರೆ! ಇದಾವ ಸರಕಾರಿ ಪೋಸ್ಟ್‌ಮ್ಯಾನ್
ಹೊಳೆಹಳ್ಳ ಕೆರೆಬೆಟ್ಟ ಗುಡ್ಡ
ಸಮುದ್ರಗಳ ಮೇಲೆಲ್ಲ ಬಿನ್‌ದಾಸಾಗಿ
ಅಡ್ಡಾಡುತ ಎಲ್ಲರನೂ ತಲುಪಿ
ಉಸಿರುಕೊಟ್ಟು ನಕ್ಕು ನಲಿಸುವವ

ಯಾರು ಬಸಿರುಮಾಡಿದ್ದಾರು!
ನವಮಾಸದ ಮೋಡಗಳಿಗೆ ಪ್ರಸವವೇದನೆ ಏನೋ
ಅಬ್ಬಬ್ಬಾ! ಎಷ್ಟೊಂದು ಅರ್ಭಟ ಕಿರುಚಾಟ
ಹನಿ ಹನಿಯಾಗಿ ಹೆರುತ್ತಲೇ ಕೆರೆಕೊಳ್ಳ ಸಮುದ್ರಗಳ
ತುಂಬಿಸಿ ಸಂತೃಪ್ತಿಯ ಚಿಗುರುಮೊಳಕೆಯೊಡೆಸುವುದು

ಅದ್ಭುತ, ಅದ್ಭುತ ! ಶಕ್ತಿಸಹನೆಯ ಮೂರ್ತಿ
ಎಷ್ಟೊಂದು ಭಾರ ಹೊತ್ತಿರುವಿಯಲ್ಲೆ !
ಹುಟ್ಟು ಸಾವು ನೋವುಗಳು ದಕ್ಕಿಸಿಕೊಳ್ಳುತ್ತಲೇ
ಮತ್ತೆ ಮತ್ತೆ ನೆಲಕ್ಕಿಳಿವ
ಬೇರುಗಳಿಗೆ ಸೀಮಂತಿಸುವ ಜೀವದಾಯಿ

ಕತ್ತಲೆಯಿಂದ ಬೆಳಕಿನೆಡೆಗೆ
ಕುರುಡನಿಗೆ ಬೆಚ್ಚನೆಯ ಊರುಗೋಲು
ಗುಮ್ಮಾಗಿ ಪ್ರೀತಿಗೆ ಕಾವು ಕೊಟ್ಟು
ಕೆನ್ನಾಲಿಗೆಯಲಿ ಕಲ್ಮಷಗಳ ಸುಟ್ಟು
ಬೇಕೆಂದಾಗ ದೀಪದ ಕುಡಿ
ಬೇಡವಾದಾಗ ಜ್ವಾಲಾಮುಖಿಯಾಗುವ
ಯಾರು ಯಾರೀಭೂಪ

ನಾವುಗಳು
ಚಂದ್ರ ಚುಕ್ಕೆಯರ ಆಕಾಶನೋಡಲು ತಾರಾಲಯ
ಗಾಳಿ ಸೇವನೆಗೆ ಪಾರ್ಲರ್
ನೀರಡಿಕೆಗೆ ಕೋಲಾ, ಪೆಪ್ಸಿ, ಕಿಂಗ್ ಫಿಶರ್,
ಅಂತರೀಕ್ಷದ ಕೃತಕ ಗಾರ್ಡನ್, ಪ್ಲಾಸ್ಟಿಕ್ ಹೂವು
ಇಲೆಕ್ಟ್ರಿಕ್ ಬೆಳಕು ಬೆಂಕಿ
ಮರುಳಾದದ್ದೇ ಮರುಳು ಬೆರಗು ಹಸಿವು

ಏನಿಷ್ಟೊಂದು ಹುಡುಕಾಟ ಯಾಕೆ ತಾಕಲಾಟ
ಇದ್ದುದೆಲ್ಲವ ಬಿಟ್ಟು ಇಲ್ಲದರೆಡೆಗೆ ಹಪಹಪಿಸಿ
ಸೋಲುವುದು ದೇಹ, ಮನಸು,
ನೂರೆಂಟು ರೋಗರಾಗ ಹೊತ್ತು
ಮತ್ತೆ ನಿಸರ್ಗಧಾಮಕೆ
ತೆರಳಿ ಪಂಚಭೂತದೊಳಗೆ ಓಂ
ಶಾಂತಿ ಭಜಿಸುವ ನಾವುಗಳು
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...