Home / ಕವನ / ಕವಿತೆ / ಐವರೊಳಗಿನ ನಾವು

ಐವರೊಳಗಿನ ನಾವು

ಐವರು
ಯಾವ ಕಂಪನಿಯ ಮೇಕಪ್‌ಗಳಿರಬೇಕಿವು!
ಇಪ್ಪತ್ನಾಲ್ಕೂ ತಾಸು ಆಕಾಶ
ಏನೆಲ್ಲ ಬಣ್ಣ ಹಚ್ಚಿಕೊಳ್ಳುತ್ತದಲ್ಲ,
ಕಾಲೇಜಿಗೊ, ಕ್ಲಬ್ಬಿಗೊ ಮದುವೆಗೊ ಮಸಣಕೊ
ಹೋಗುವಂತೆ ಅದೆಷ್ಟು ಬಣ್ಣಗಳದಕೆ

ಅರೆರೆ! ಇದಾವ ಸರಕಾರಿ ಪೋಸ್ಟ್‌ಮ್ಯಾನ್
ಹೊಳೆಹಳ್ಳ ಕೆರೆಬೆಟ್ಟ ಗುಡ್ಡ
ಸಮುದ್ರಗಳ ಮೇಲೆಲ್ಲ ಬಿನ್‌ದಾಸಾಗಿ
ಅಡ್ಡಾಡುತ ಎಲ್ಲರನೂ ತಲುಪಿ
ಉಸಿರುಕೊಟ್ಟು ನಕ್ಕು ನಲಿಸುವವ

ಯಾರು ಬಸಿರುಮಾಡಿದ್ದಾರು!
ನವಮಾಸದ ಮೋಡಗಳಿಗೆ ಪ್ರಸವವೇದನೆ ಏನೋ
ಅಬ್ಬಬ್ಬಾ! ಎಷ್ಟೊಂದು ಅರ್ಭಟ ಕಿರುಚಾಟ
ಹನಿ ಹನಿಯಾಗಿ ಹೆರುತ್ತಲೇ ಕೆರೆಕೊಳ್ಳ ಸಮುದ್ರಗಳ
ತುಂಬಿಸಿ ಸಂತೃಪ್ತಿಯ ಚಿಗುರುಮೊಳಕೆಯೊಡೆಸುವುದು

ಅದ್ಭುತ, ಅದ್ಭುತ ! ಶಕ್ತಿಸಹನೆಯ ಮೂರ್ತಿ
ಎಷ್ಟೊಂದು ಭಾರ ಹೊತ್ತಿರುವಿಯಲ್ಲೆ !
ಹುಟ್ಟು ಸಾವು ನೋವುಗಳು ದಕ್ಕಿಸಿಕೊಳ್ಳುತ್ತಲೇ
ಮತ್ತೆ ಮತ್ತೆ ನೆಲಕ್ಕಿಳಿವ
ಬೇರುಗಳಿಗೆ ಸೀಮಂತಿಸುವ ಜೀವದಾಯಿ

ಕತ್ತಲೆಯಿಂದ ಬೆಳಕಿನೆಡೆಗೆ
ಕುರುಡನಿಗೆ ಬೆಚ್ಚನೆಯ ಊರುಗೋಲು
ಗುಮ್ಮಾಗಿ ಪ್ರೀತಿಗೆ ಕಾವು ಕೊಟ್ಟು
ಕೆನ್ನಾಲಿಗೆಯಲಿ ಕಲ್ಮಷಗಳ ಸುಟ್ಟು
ಬೇಕೆಂದಾಗ ದೀಪದ ಕುಡಿ
ಬೇಡವಾದಾಗ ಜ್ವಾಲಾಮುಖಿಯಾಗುವ
ಯಾರು ಯಾರೀಭೂಪ

ನಾವುಗಳು
ಚಂದ್ರ ಚುಕ್ಕೆಯರ ಆಕಾಶನೋಡಲು ತಾರಾಲಯ
ಗಾಳಿ ಸೇವನೆಗೆ ಪಾರ್ಲರ್
ನೀರಡಿಕೆಗೆ ಕೋಲಾ, ಪೆಪ್ಸಿ, ಕಿಂಗ್ ಫಿಶರ್,
ಅಂತರೀಕ್ಷದ ಕೃತಕ ಗಾರ್ಡನ್, ಪ್ಲಾಸ್ಟಿಕ್ ಹೂವು
ಇಲೆಕ್ಟ್ರಿಕ್ ಬೆಳಕು ಬೆಂಕಿ
ಮರುಳಾದದ್ದೇ ಮರುಳು ಬೆರಗು ಹಸಿವು

ಏನಿಷ್ಟೊಂದು ಹುಡುಕಾಟ ಯಾಕೆ ತಾಕಲಾಟ
ಇದ್ದುದೆಲ್ಲವ ಬಿಟ್ಟು ಇಲ್ಲದರೆಡೆಗೆ ಹಪಹಪಿಸಿ
ಸೋಲುವುದು ದೇಹ, ಮನಸು,
ನೂರೆಂಟು ರೋಗರಾಗ ಹೊತ್ತು
ಮತ್ತೆ ನಿಸರ್ಗಧಾಮಕೆ
ತೆರಳಿ ಪಂಚಭೂತದೊಳಗೆ ಓಂ
ಶಾಂತಿ ಭಜಿಸುವ ನಾವುಗಳು
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...