Home / ಕವನ / ಕವಿತೆ / ಐವರೊಳಗಿನ ನಾವು

ಐವರೊಳಗಿನ ನಾವು

ಐವರು
ಯಾವ ಕಂಪನಿಯ ಮೇಕಪ್‌ಗಳಿರಬೇಕಿವು!
ಇಪ್ಪತ್ನಾಲ್ಕೂ ತಾಸು ಆಕಾಶ
ಏನೆಲ್ಲ ಬಣ್ಣ ಹಚ್ಚಿಕೊಳ್ಳುತ್ತದಲ್ಲ,
ಕಾಲೇಜಿಗೊ, ಕ್ಲಬ್ಬಿಗೊ ಮದುವೆಗೊ ಮಸಣಕೊ
ಹೋಗುವಂತೆ ಅದೆಷ್ಟು ಬಣ್ಣಗಳದಕೆ

ಅರೆರೆ! ಇದಾವ ಸರಕಾರಿ ಪೋಸ್ಟ್‌ಮ್ಯಾನ್
ಹೊಳೆಹಳ್ಳ ಕೆರೆಬೆಟ್ಟ ಗುಡ್ಡ
ಸಮುದ್ರಗಳ ಮೇಲೆಲ್ಲ ಬಿನ್‌ದಾಸಾಗಿ
ಅಡ್ಡಾಡುತ ಎಲ್ಲರನೂ ತಲುಪಿ
ಉಸಿರುಕೊಟ್ಟು ನಕ್ಕು ನಲಿಸುವವ

ಯಾರು ಬಸಿರುಮಾಡಿದ್ದಾರು!
ನವಮಾಸದ ಮೋಡಗಳಿಗೆ ಪ್ರಸವವೇದನೆ ಏನೋ
ಅಬ್ಬಬ್ಬಾ! ಎಷ್ಟೊಂದು ಅರ್ಭಟ ಕಿರುಚಾಟ
ಹನಿ ಹನಿಯಾಗಿ ಹೆರುತ್ತಲೇ ಕೆರೆಕೊಳ್ಳ ಸಮುದ್ರಗಳ
ತುಂಬಿಸಿ ಸಂತೃಪ್ತಿಯ ಚಿಗುರುಮೊಳಕೆಯೊಡೆಸುವುದು

ಅದ್ಭುತ, ಅದ್ಭುತ ! ಶಕ್ತಿಸಹನೆಯ ಮೂರ್ತಿ
ಎಷ್ಟೊಂದು ಭಾರ ಹೊತ್ತಿರುವಿಯಲ್ಲೆ !
ಹುಟ್ಟು ಸಾವು ನೋವುಗಳು ದಕ್ಕಿಸಿಕೊಳ್ಳುತ್ತಲೇ
ಮತ್ತೆ ಮತ್ತೆ ನೆಲಕ್ಕಿಳಿವ
ಬೇರುಗಳಿಗೆ ಸೀಮಂತಿಸುವ ಜೀವದಾಯಿ

ಕತ್ತಲೆಯಿಂದ ಬೆಳಕಿನೆಡೆಗೆ
ಕುರುಡನಿಗೆ ಬೆಚ್ಚನೆಯ ಊರುಗೋಲು
ಗುಮ್ಮಾಗಿ ಪ್ರೀತಿಗೆ ಕಾವು ಕೊಟ್ಟು
ಕೆನ್ನಾಲಿಗೆಯಲಿ ಕಲ್ಮಷಗಳ ಸುಟ್ಟು
ಬೇಕೆಂದಾಗ ದೀಪದ ಕುಡಿ
ಬೇಡವಾದಾಗ ಜ್ವಾಲಾಮುಖಿಯಾಗುವ
ಯಾರು ಯಾರೀಭೂಪ

ನಾವುಗಳು
ಚಂದ್ರ ಚುಕ್ಕೆಯರ ಆಕಾಶನೋಡಲು ತಾರಾಲಯ
ಗಾಳಿ ಸೇವನೆಗೆ ಪಾರ್ಲರ್
ನೀರಡಿಕೆಗೆ ಕೋಲಾ, ಪೆಪ್ಸಿ, ಕಿಂಗ್ ಫಿಶರ್,
ಅಂತರೀಕ್ಷದ ಕೃತಕ ಗಾರ್ಡನ್, ಪ್ಲಾಸ್ಟಿಕ್ ಹೂವು
ಇಲೆಕ್ಟ್ರಿಕ್ ಬೆಳಕು ಬೆಂಕಿ
ಮರುಳಾದದ್ದೇ ಮರುಳು ಬೆರಗು ಹಸಿವು

ಏನಿಷ್ಟೊಂದು ಹುಡುಕಾಟ ಯಾಕೆ ತಾಕಲಾಟ
ಇದ್ದುದೆಲ್ಲವ ಬಿಟ್ಟು ಇಲ್ಲದರೆಡೆಗೆ ಹಪಹಪಿಸಿ
ಸೋಲುವುದು ದೇಹ, ಮನಸು,
ನೂರೆಂಟು ರೋಗರಾಗ ಹೊತ್ತು
ಮತ್ತೆ ನಿಸರ್ಗಧಾಮಕೆ
ತೆರಳಿ ಪಂಚಭೂತದೊಳಗೆ ಓಂ
ಶಾಂತಿ ಭಜಿಸುವ ನಾವುಗಳು
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...