Home / ಕವನ / ಕವಿತೆ / ನರಗುಂದ

ನರಗುಂದ

ಹೆಸರೀಗೆ ನರಗುಂದ, ಮೊಸರೀಗೆ ನೀರಿಲ್ಲ
ಕುಸುರದ ಸಿಂಬಿ ಬರಿಗೊಡ | ಇಟಗೊಂಡು
ಉಸರಂತ ಬಾವಿ ಇಳಿದಾರೊ ೧

ನರಗುಂದ ಕಾಳವನ, ಮರಿಗುದರಿ ಸಾಯಽಲಿ
ಚದರಂಗ ಮಾಲ ಮುರಿಯಽಲಿ | ಸೊರಟೂರ
ಸದರೀಗೆ ಸುದ್ದಿ ಹರಿಯಽಲಿ ೨

ನರಗುಂದವೆಂಬೂದು, ಅರಗಿಣಿ ಪಟ್ಟಣ
ಕೆರೆ ಕಡಿಸಿ ನೀರ ಕುಡಿಲಿಲ್ಲ | ಬಾಬಣ್ಣ
ತಿರುಗಿ ನರಗುಂದ ಹೊಗಲಿಲ್ಲ ೩

ಕೆಂಪು ಮಾರಿಯ ದಂಡು, ಗುಂಪಾಗಿ ಮುತ್ತ್ಯಾರೊ
ಕಂಪಿಸಿಹೋತೊ ನರಗುಂದೊ | ಬಾಬಸಾಬ
ಹಂಪಿಹೊಳಿ ಮುಂದ ತಡವ್ಯಾನೊ ೪

ಹಂಡಬಂಡದ ಕುದುರಿ, ಗೊಂಡೆ ಲಾಗಾಮನ್ಹಾಕಿ
ದಂಡು ಇಳದೀತೊ ನರಗುಂದೊ | ಬಾಬಾಸಾಬ
ಗುಂಡಿಲಿಕ್ಕ್ಯಾನೊ ಗುಡಿಯಾಗೊ ೫

ವಿಣ್ಣ್ಯಾ ತಾಂಡದ ಬಂಟ, ಕಣ್ಣಿಟ್ಟ ಸಿರಕೊಯ್ದು
ಮಣ್ಣ ಪಾಲಾದ ಮೆಣಸನ್ನ | ನರಗುಂದ
ಅಣ್ಣ ಕೂಗ್ಯಾನೊ ಕಾಳಗೊ ೬

ಮುಂಡರಗಿ ಭೀಮಣ್ಣ, ಬಂಡಾಯ ಎಬ್ಬಿಸಿದ
ದಂಡ ಕೂಡ್ಯಾನೊ ನರಗುಂದ | ಬಾಬಣ್ಣ
ಕೆಂಡ ಕಾರ್ಯಾನೊ ಕುಂವಣಿಗೊ ೭

ಮಾಲಕಮಸಾಹೇಬ, ಕೇಳಿ ಮೆಣಸನ ಸಾವ
ಗಾಳಿ ಬಂದ್ಹಾಂಗ ಮುತ್ತ್ಯಾನೊ | ನರಗುಂದ
ತಾಳ ಬಾಸ್ವಾತೊ ಚಣದಾಗೊ ೮

ಬಾಪು ವಂತರ ಸಂಚು, ಘಾತ ನರಗುಂದಾತೊ
ಹೋತೊ ಹಾಳಾಗಿ ನಿಪ್ಪತಗಿ| ನರಗುಂದ
ಖ್ಯಾತಿ ಜನದಾಗ ಕಡೆತನಕ ೯

ಹಾರೂರು ಹಾವಾಗಿ ಕೋರ್ಯಾರೊ ಒಳಸಂಚು
ಗಾರಗಾರಾತೊ ನರಗುಂದೊ | ಬಾಬಾಸಾಬ
ಕಾರ ಮಳಿಯಾಗ ಮನಿಬಿಟ್ಟ ೧೦

ಕಾಡೆಲ್ಲ ಕತ್ತರಿಸಿ, ನಾಡೆಲ್ಲ ತತ್ತರಿಸಿ
ಬಾಡುಗಳ್ಳರು ಹಾರೂರ | ತಾ ನಂಬಿ
ಕಾಡಿಗೀಡಾದ ಬಾಬಣ್ಣ ೧೧

ಮಡದಿ ಮಕ್ಕಳ ಬಿಟ್ಟ, ಹಡದ ತಾಯಿಯ ಬಿಟ್ಟ
ಕಡೆಗಾತ ಬಿಟ್ಟ ನಾಡಾಸೆ | ಬಾಬಾಸಾಬ
ಕೇಡಿಗೆ ಬಿಟ್ಟ ನರಗುಂದ ೧೨

ದೇಶಽವ ಕಡೆಮಾಡಿ, ಆಶೆಽಗೆ ಈಡಾಗಿ
ಕಾಸು ಕವಡಿಽಗೆ ಕಡೆಯಾಗಿ | ಹಾರೂರು
ಹಾಸಿ ಬೆಂಕ್ಯಾಗ ಬೂದ್ಯಾಗಿ ೧೩

ನರಗುಂದ ಅರಸನಿಗೆ, ವನವಾಸ ಬಂದೀತೊ
ತಿರುಗ್ಯಾನೊ ಕಾಡ ಪಾಲಾಗಿ | ಸೂಟರಗ
ತೊರಗಲ ಸಿಮ್ಯಾಗ ಕೈಸಿಕ್ಕೊ ೧೪

ಮಾಳಿಮ್ಯಾಗಿನ ಹುಲ್ಲ, ಗಾಳಿಗ್ಹಾರಿದರೇನು
ಗಾಲ ಮೇಲಾತೊ ನರಗುಂದೊ | ಬಾಬಾಸಾಬ
ಗಾಳೀಗಿ ಬಾಯ ಬಿಡತಾನೊ ೧೫

ಹೂಲಿ ಸಾಮಿಯು ಕೊಟ್ಟ, ಕೊಲ ಮಿಂಚಿನ ಸಾಪ
ಗಾಲ ಮೇಲಾತೊ ನರಗುಂದೊ | ಮರುವರುಷ
ಕೂಲಿ ಕುಂಬಳಿಗೆ ಎರುವಾತೊ ೧೬
*****

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...