Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಬುಧವಾರ, ೨೪ ಜೂನ್, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಬುಧವಾರ, ೨೪ ಜೂನ್, ೧೯೪೨

ಪ್ರೀತಿಯ ಕಿಟಿ,

ಅಂದು ಕುದಿಯುತ್ತಿರುವ ಧಗೆ. ಆ ಸೆಖೆಗೆ ನಾವೇ ಕರಗುತ್ತಿದ್ದೆವು. ಅಂತಹ ಸೆಖೆಯಲ್ಲಿ ನನಗೆ ಎಲ್ಲ ಕಡೆ ಓಡಾಡುವ ಕೆಲಸ. ಟ್ರಾಮ ಗಾಡಿಯಲ್ಲಿನ ಪ್ರಯಾಣ ಎಷ್ಟು ಚೆನ್ನ ಎಂದು ನಾನೀಗ ಹೊಗಳಬಲ್ಲೆ. ಆದರೆ ಅದನ್ನು ಯಹೂದಿಗಳಿಗೆ ನಿಷೇಧಿಸಲಾಗಿತ್ತು. ಕನಸಿನ ಕುದುರೆಗೆ ನಾವು ತೃಪ್ತರಾಗಬೇಕಿದೆ. ನಿನ್ನೆ ಊಟದ ಸಮಯದಲ್ಲಿ ನನಗೆ ಜಾನ್ ಲೆಕೆನಸ್ಟ್ರಾಟ್‌ನಲ್ಲಿನ ಹಲ್ಲಿನ ವೈದ್ಯರ ಬಳಿ ಹೋಗಬೇಕಿತ್ತು.

ಅದು Stamïdsstimmertuinen[ಫ್ರಾಂಕಳ ಸ್ಕೂಲು ಇದ್ದ ಊರು] ನಲ್ಲಿಯ ನಮ್ಮ ಶಾಲೆಯಿಂದ ತುಂಬಾ ದೂರವಿದೆ. ಆ ದಿನ ಹೆಚ್ಚು ಕಮ್ಮಿ ಮಧ್ಯಾಹ್ನ ನಾನು ಪೂರ್ತಿ ಮಲಗಿಬಿಟ್ಟಿದ್ದೆ. ಆದರೆ ಪುಣ್ಯಕ್ಕೆ ಡೆಂಟಿಸ್ಟ್‌ನ ಸಹಾಯಕಳು ಒಳ್ಳೆಯವಳಾಗಿದ್ದಳು. ನನಗಾಕೆ ಕುಡಿಯಲು ಪಾನೀಯ ಕೊಟ್ಟಳು.

ನಮಗೆ ದೋಣಿ ಪ್ರಯಾಣಕ್ಕೆ ಅನುಮತಿ ಇತ್ತು ಅಷ್ಟೇ. ಒಮ್ಮೆ ಜೊಸೆಫ ಇಸ್ರೇಲ್ಸ್ಕೇಡ್ ಎಂಬಾತ ತನ್ನ ಚಿಕ್ಕ ದೋಣಿಯಲ್ಲಿ ನಾವೆಲ್ಲ ಕೇಳಿದ ಮೇಲೆ ನಮ್ಮನ್ನು ಕರೆದೊಯ್ದಿದ್ದ. ನಮಗೊದಗಿದ ದುಸ್ಥಿತಿಗೆ ಡಚ್ ಜನರದೇನೂ ತಪ್ಪಿರಲಿಲ್ಲ.

ಈಸ್ಟರ ಹಾಲಿಡೇ ದಿನಗಳಲ್ಲಿ ನಾನು ಶಾಲೆಗೆ ಹೋಗಬೇಕಾಗಿಲ್ಲ ಎಂದುಕೊಳ್ಳುವೆ. ಕಾರಣ ನನ್ನ ಬೈಸಿಕಲ್ಲು ಕಳುವಾಗಿತ್ತು. ಅದಕ್ಕಾಗಿ ಡ್ಯಾಡಿ ಜಾಗ್ರತೆಯಾಗಿ ಇಟ್ಟುಕೊಳ್ಳುವ ಸಲುವಾಗಿ ಮಮ್ಮಿಯ ಸೈಕಲ್ಲನ್ನು ಕೂಡಾ ಕ್ರೈಸ್ತ ಕುಟುಂಬವೊಂದಕ್ಕೆ ಕೊಟ್ಟಿದ್ದಾರೆ. ದೇವರೇ! ನಿನಗೆ ಥಾಂಕ್ಸ್! ರಜಾದಿನಗಳು ಹತ್ತಿರವೇ ಇವೆ. ಒಂದೇ ವಾರವಿದೆ. ಸಂಕಟವೆಂದರೆ ನಿನ್ನೆ ಅದೇನೋ ಮೋಜಿನ ಸಂಗತಿ ನಡೆಯಿತು. ನಾನು ಬೈಸಿಕಲ್ ಶೆಡ್‌ಗಳನ್ನು ದಾಟಿ ಹೋಗುತ್ತಿದ್ದಾಗ ಅದ್ಯಾರೋ ನನ್ನನ್ನು ಕರೆದರು. ಸುತ್ತಲೂ ನೋಡಿದೆ. ಅಲ್ಲೊಬ್ಬ ಸುಂದರ ಹುಡುಗ ನಿಂತಿದ್ದ, ಅದೇ ನಿನ್ನೆ ಸಂಜೆ ನನ್ನ ಗೆಳತಿ ಇವಾಳ ಮನೆಯಲ್ಲಿ ಭೇಟಿ ಮಾಡಿದವನಾಗಿದ್ದ. ನಾಚಿಕೆಯಿಂದಲೇ ನನ್ನತ್ತ ಬಂದು ತನ್ನನ್ನು ಹ್ಯಾರಿ ಗೋಲ್ಡಬರ್ಗ ಎಂದು ಪರಿಚಯಿಸಿಕೊಂಡ. ಆತನೇನು ಬಯಸುತಿದ್ದ ಎಂಬುದರ ಕುರಿತು ನನಗೆ ಕುತೂಹಲವಿರಲಿಲ್ಲ. ಹಾಗಾಗಿ ನಾನು ಆಶ್ಚರ್ಯಗೊಳ್ಳಲಿಲ್ಲ. ಆದರೆ ನನಗೆ ಬಹಳ ಹೊತ್ತು ಅಲ್ಲಿ ನಿಲ್ಲಲು ಸಾಧ್ಯವಿರಲಿಲ್ಲ. ನಾನು ಅತನಿಗೆ ಶಾಲೆವರೆಗೂ ಕಂಪನಿ ಕೊಡುವಂತೆ ಕೇಳಿದ. ನಾನು ಹೋಗುವ ದಾರಿಯಲ್ಲಿ ಬರುತ್ತಿಯಾದರೆ, ನಾನು ಬರುವೆ ನಾನು ಉತ್ತರಿಸಿದೆ. ಹಾಗೆ ನಾವಿಬ್ಬರೂ ಜೊತೆಯಾಗಿ ಹೊರೆಟೆವು. ಹ್ಯಾರಿ ಹದಿನಾರು ವರ್ಷದವ. ಮತ್ತು ಎಲ್ಲ ರೀತಿಯ ರಂಜನೀಯ ಕಥೆಗಳನ್ನು ಹೇಳಬಲ್ಲ. ಈ ದಿನ ಮುಂಜಾನೆ ಕೂಡಾ ಆತ ನನಗಾಗಿ ಕಾಯುತ್ತಿದ್ದ. ಇನ್ನು ಮುಂದೆ ಕೂಡಾ ಆತನನ್ನು ನಾನು ನಿರೀಕ್ಷಿಸುತ್ತೇನೆ.

ನಿನ್ನ
ಆನ್
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...