ಉದಯ


ಉದಯ ಉದಿಸಿ, ಚಲುವ ಹರಿಸಿ, ನಾಡಸೊಬಗ ಮೆರೆಸಿತು;
ಹರುಷ ತಂದು, ವಲಿಸಿ ಮೆರೆದು, ಸ್ವರ್ಣಮೆರಗ ಹೊಳೆಸಿತು;
ಪೂರ್ವತಡಿಯ ವರ್ಣಕಲಿಸಿ,
ಕಿರಣಕಾಂತಿ ಮೆರೆಸಿವಲಸಿ;
ಹೊನಲ ಹೊಳೆಯ ಸರಿಸಿ ನಲಿಸಿ,
ಮೆರಗಿಹರಿದು, ಸಲಿಲಸಂದು, ನಭದ ಅರುಗನೇರಿತು,
ಸ್ಮಿತದ ವದನ, ರವಿಯ ಕಿರಣ, ಭುವಿಯ ಬಯಲ ಸಾರಿತು.


ನೀಲಗಗನ, ಮೇಘಮುಗಿಲು, ಸರಿದು ಕಲಕಿ ಶಿಥಲಿತು;
ಪೂರ್ವತಡಿಯ, ಉದಯಭಾನು, ನಡುವೆದೂರಿವಲೆಸಿತು;
ಮಾಯರಂಗನೇರಿಹಕ್ಕಿ,
ಉದಯ ಚಲುವ ಸರಿಸಿನಕ್ಕಿ;
ಗೆಲುವ ಮೊಗವಬೀರಿ ಕುಕ್ಕಿ,
ಬನದ ಸಿರಿಯ, ಸೊಗವ ತೋರಿ, ಮೆರೆದು ಭರದಿ ಸಾಗಿತು,
ಸಲಿಲಸೊಂಪು, ರವದಗುಂಪು, ನೆರೆಯಮರೆಯ ತಾಕಿತು.


ಹಸುರು ಹೊಲದ, ಮೇಳೆಮುಗುಳು, ಬಿರಿದು ಅರಳಿ ಒಡೆಯಿತು;
ಅನಿಲ ಬೆರೆದು, ಮುಗುಳಕಂಪು, ಸವಿಯಸೊಂಪು ತಂದಿತು;
ಮುಗುಳು ಅರಳಿ ಭ್ರಮರಹಾರಿ,
ಸುಧೆಯಹೀರಿ ರಕ್ಕೆ ಬೀರಿ;
ಗೆಲುವಿನಿಂದ ಮುಗಿಲನೇರಿ,
ಅರಳುಮುಗುಳು, ಸವಿಯಹಸುರು, ಹೊಳೆಸಿ ಸೆಳೆಸಿ ನುಗ್ಗಿತು,
ಪರಿಯಪುಷ್ಪ, ತೆನೆಯತೂಗು, ಹಲವು ಫಲವು ಜಗ್ಗಿತು.


ಭುವಿಯಬಣ್ಣ, ಉದಯಜನ್ಮ, ಧರೆಯ ಬೆಳಗಿ ನೆಲೆಸಿತು;
ಬಾಹ್ಯರಂಗ, ಜ್ಯೋತಿಮಿನುಗಿ, ಇಳೆಯ ಒಲುಮೆದಳಿಸಿತು;
ರಾಗದೊಲುಮೆ ತಂತಿಮೀಟಿ,
ಎದೆಯಹರುಷ ತೋರಿ ಈಟಿ;
ಮೊಗದನಲ್ಮೆ ಪಠಿಸಿದಾಟಿ,
ಕಾಂತಿ ಶಾಂತಿ, ಪೀಠತೋರಿ, ಪ್ರಭೆಯಹೆಮ್ಮೆ ಹಾಡಿತು,
ಫುಲಭಕ್ತಿ, ಮಯದನಲ್ಮೆ, ಯಶದಮೇಲ್ಮೆ ತೋಡಿತು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...