Home / ಲೇಖನ / ಸಾಹಿತ್ಯ / ಯಾವ ಮಾದರಿಯೂ ಇಲ್ಲ

ಯಾವ ಮಾದರಿಯೂ ಇಲ್ಲ

ಗುರುವಿಂಗೆ ಗುರುವಿಲ್ಲ
ಲಿಂಗಕ್ಕೆ ಲಿಂಗವಿಲ್ಲ
ಜಂಗಮಕ್ಕೆ ಜಂಗಮವಿಲ್ಲ
ನನಗೆ ನಾನಿಲ್ಲ
ಕಣ್ದೆರೆದು ನೋಡುವಡೆ ಆರಿಗೆ ಆರೂ ಇಲ್ಲ
ಕಪಿಲಸಿದ್ಧಮಲ್ಲಿಕಾರ್ಜುನಾ

ಸಿದ್ಧರಾಮನ ವಚನ ಇದು. ಮಾದರಿಗಳನ್ನು ಅನುಸರಿಸುವವರು ಹೇಳಹೆಸರಿಲ್ಲದಾಗುತ್ತಾರೆ.

ಏಸು ಕ್ರಿಸ್ತ ಕ್ರಿಶ್ಚಿಯನ್ ಅಲ್ಲ, ಬುದ್ಧ ಬೌದ್ಧನಲ್ಲ, ಮಾರ್ಕ್ಸ್ ಮಾರ್ಕ್ಸ್‌ವಾದಿಯಲ್ಲ. ಕ್ರಿಸ್ತನನ್ನು ಅನುಸರಿಸಿದವರು ಕ್ರಿಶ್ಚಿಯನ್ನರು, ಬುದ್ಧನನ್ನು ಅನುಸರಿಸಿದವರು ಬೌದ್ಧರು, ಮಾರ್ಕ್ಸ್‌ನನ್ನು ಅನುಸರಿಸಿದವರು ಮಾರ್ಕ್ಸವಾದಿಗಳಾದರು. ನಾವು ಯಾರನ್ನು ಮಹಾಪುರುಷರು ಎಂದು ಗುರುತಿಸಿಕೊಂಡಿದ್ದೇವೆಯೋ ಅವರೆಲ್ಲರ ಮೇಲೂ ಇತರರ ಪ್ರಭಾವಗಳಿದ್ದರೂ ಅವರು ಯಾವ ಮಾದರಿಯನ್ನೂ ಅನುಕರಿಸದೆ, ಯಾರಂತೆಯೋ ಅಗಲು ಬಯಸದೆ ಬೆಳೆದವರು.

ಹಾಗೆಯೇ ಗುರು ಎಂಬ ಗುರುವಿಗೆ ಗುರುವೂ ಇಲ್ಲ. ಲಿಂಗ ಅನ್ನುವ ಲಿಂಗಕ್ಕೆ ಲಿಂಗವೂ ಇಲ್ಲ, ಜಂಗಮಕ್ಕೆ ಬೇರೆ ಇನ್ನೊಬ್ಬ ಜಂಗಮವಿಲ್ಲ. ಗುರು, ಲಿಂಗ ಮತ್ತು ಜಂಗಮ ಎಂಬವು ಮನುಷ್ಯ ವ್ಯಕ್ತಿಯಾಗಲೀ ವಸ್ತುವಾಗಲೀ ಅಲ್ಲ. ಅವು ಪರಿಕಲ್ಪನೆಗಳು. ಹಾಗೆಯೇ ನಾನು ಎಂಬುದು ಕೂಡ ಕಲ್ಪನೆಯೇ, ನಾನು ಎಂಬ ಕಲ್ಪನೆಗೆ ಬದ್ಧವಾಗಿರುವಷ್ಟು ಕಾಲವೂ ನನಗೆ ಒಂದು ಮಾದರಿ ಬೇಕು ಎಂದು ಹುಡುಕುತ್ತಲೇ ಇರುತ್ತೇನೆ. ನಿಜವಾಗಿ ಕಣ್ತೆರೆದು ನೋಡಿದರೆ ನಾನು ಎಂಬ ಕಲ್ಪನೆಗೆ ಆಧಾರವೇ ಇಲ್ಲ ಎಂಬುದು ಹೊಳೆದೀತು. ಅಷ್ಟೇ ಯಾಕೆ, ಯಾರಿಗೆ ಯಾರೂ ಇಲ್ಲ ಅನ್ನುವುದೂ ಅರಿವಿಗೆ ಬಂದೀತು. ಮಾದರಿಗಳ ನಿರಾಕಣೆಯ ಜೊತೆಗೇ `ನನಗೆ ನಾನಿಲ್ಲ’ ಅನ್ನುವ ಮಾತು `ನಾನೇ, ಎಲ್ಲವೂ ನನ್ನಿಷ್ಟದಂತೆಯೇ’ ಅನ್ನುವ ಭ್ರಮೆಯ ಅಹಂಕಾರವನ್ನೂ ನಿರಾಕರಿಸುವುದನ್ನು ಗಮನಿಸಿ, ಯಾರ ಹಾಗೆಯೋ ಆಗುವುದೂ ಅಲ್ಲ, `ನಾನೇ’ ಆಗುವುದೂ ಅಲ್ಲ, ಅಂದಮೇಲೆ ದಾರಿ ಯಾವುದು ಎಂಬ ಹುಡುಕಾಟಕ್ಕೆ ತೊಡಗಿಸುವಂತೆ ಇದೆ ಸಿದ್ಧರಾಮನ ಈ ವಚನ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...