Home / ಕವನ / ಕವಿತೆ / ಯಾರ ಮೂರ್ತಿ, ಅವರ ಕೀರ್ತಿ?

ಯಾರ ಮೂರ್ತಿ, ಅವರ ಕೀರ್ತಿ?

ಜಾಣ ತನ್ನ ಚಾಣದಿಂದ
ಕಟೆಯುತಿದ್ದ ಕಲ್ಲ!
ಯಾರ ಮೂರ್ತಿ, ಅವರ ಕೀರ್ತಿ…
…………………
ಕಾಣದವನೇ ಕಲ್ಲ? ಕಂಡವನೆ ಬಲ್ಲ!
…………………
ಕನಸು ಮೋಸದ ಸಿಪ್ಪೆ–
ತಿರುಳು?
ಇರಬಹುದು ತಿಪ್ಪೆ!
ಒಟರುಗುಡುತಿದೆ ಕಪ್ಪೆ
‘ಮಳೆ ತಂದ ಮಂತ್ರವೋ ತನ್ನ ಮಾಟ’
ರಾಕ್ಷಸನ ಮಾಲಿಕನು
ಭಕ್ಷ-ಭೋಜ್ಯ.
ನಮಗೆ ಬೇಕಾಗಿಹುದು; ಅನ್ನಛತ್ರ.
ಇದು ಪ್ರಜಾರಾಜ್ಯ.
ಮೇಲೊಂದು ಹುಡುಗಾಟ
ಇಲ್ಲವೇ ಹುಚ್ಚಾಟ
ಅನ್ನದಮಲಿಗೆ ಮುಖ್ಯ ನಿದ್ದೆ ಬೇಕು
ಮ್ಯಾಗ್ಝಿಮಮ್‌ ಗೊರ್ಕೆಯೇ ನಮ್ಮ ಆದರ್ಶ.
ಕನಸಿನಂತಹ ಸತ್ಯ ನಾಟಕವೆ ಇಲ್ಲ
ಎಚ್ಚರವೇ ನಮ್ಮ ರೋಗ

ಇರಬಹುಹು ಔಷಧವು ಅದಕು ಎಲ್ಲೋ
ಬುರುಸುಗಟ್ಟಿದ ಯಾವ ಸೆಗಣಿಯಲ್ಲೋ
ಕ್ರಿಮಿಗೆ ಕ್ರಿಮಿಯೇ ವೈರಿ, ಕ್ರಿಮಿಯೆ ಮಿತ್ರ
ಇದು ಮುಖ್ಯ ಸೂತ್ರ
ಕೆಲಸವಾಯಿತೆ ಪೂರ್ತಿ-ಓ ಜಾಣ-ಮೂರ್ತಿ
ಕೊಳೆ ಇಲ್ಲ ಕಲ್ಲಿಗೆ
ಅದು ಮಣ್ಣ ಬಿರುಸು, ನೀರಿನಿಂದದನು ಒರೆಸು
ಆ ಮೇಲೆ ಕಣ್ಣು ಕೊರೆಸು.
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...