Home / ಕವನ / ಕವಿತೆ / ಯಾರ ಮೂರ್ತಿ, ಅವರ ಕೀರ್ತಿ?

ಯಾರ ಮೂರ್ತಿ, ಅವರ ಕೀರ್ತಿ?

ಜಾಣ ತನ್ನ ಚಾಣದಿಂದ
ಕಟೆಯುತಿದ್ದ ಕಲ್ಲ!
ಯಾರ ಮೂರ್ತಿ, ಅವರ ಕೀರ್ತಿ…
…………………
ಕಾಣದವನೇ ಕಲ್ಲ? ಕಂಡವನೆ ಬಲ್ಲ!
…………………
ಕನಸು ಮೋಸದ ಸಿಪ್ಪೆ–
ತಿರುಳು?
ಇರಬಹುದು ತಿಪ್ಪೆ!
ಒಟರುಗುಡುತಿದೆ ಕಪ್ಪೆ
‘ಮಳೆ ತಂದ ಮಂತ್ರವೋ ತನ್ನ ಮಾಟ’
ರಾಕ್ಷಸನ ಮಾಲಿಕನು
ಭಕ್ಷ-ಭೋಜ್ಯ.
ನಮಗೆ ಬೇಕಾಗಿಹುದು; ಅನ್ನಛತ್ರ.
ಇದು ಪ್ರಜಾರಾಜ್ಯ.
ಮೇಲೊಂದು ಹುಡುಗಾಟ
ಇಲ್ಲವೇ ಹುಚ್ಚಾಟ
ಅನ್ನದಮಲಿಗೆ ಮುಖ್ಯ ನಿದ್ದೆ ಬೇಕು
ಮ್ಯಾಗ್ಝಿಮಮ್‌ ಗೊರ್ಕೆಯೇ ನಮ್ಮ ಆದರ್ಶ.
ಕನಸಿನಂತಹ ಸತ್ಯ ನಾಟಕವೆ ಇಲ್ಲ
ಎಚ್ಚರವೇ ನಮ್ಮ ರೋಗ

ಇರಬಹುಹು ಔಷಧವು ಅದಕು ಎಲ್ಲೋ
ಬುರುಸುಗಟ್ಟಿದ ಯಾವ ಸೆಗಣಿಯಲ್ಲೋ
ಕ್ರಿಮಿಗೆ ಕ್ರಿಮಿಯೇ ವೈರಿ, ಕ್ರಿಮಿಯೆ ಮಿತ್ರ
ಇದು ಮುಖ್ಯ ಸೂತ್ರ
ಕೆಲಸವಾಯಿತೆ ಪೂರ್ತಿ-ಓ ಜಾಣ-ಮೂರ್ತಿ
ಕೊಳೆ ಇಲ್ಲ ಕಲ್ಲಿಗೆ
ಅದು ಮಣ್ಣ ಬಿರುಸು, ನೀರಿನಿಂದದನು ಒರೆಸು
ಆ ಮೇಲೆ ಕಣ್ಣು ಕೊರೆಸು.
*****

Tagged:

Leave a Reply

Your email address will not be published. Required fields are marked *

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೀಲಿಕರಣ: ಎಂ ಎನ್ ಎಸ್ ರಾವ್