Home / ಕವನ / ಕವಿತೆ / ಸ್ವಪ್ನಹರಿಣ!

ಸ್ವಪ್ನಹರಿಣ!

ಸ್ವಪ್ನಹರಿಣ ಚಪಲ ಚರಣ
ಕಂಗಳಲ್ಲಿ ಇಳಿಯೆ ಹರಣ
ಓಡುತಿಹುದು ವಿಧಿಗೆ ಭೀತ
ಎದೆಯ ಕಾಡೊಳು!

ಜೀವನ ನಿರ್ದಯ ನಿಷಾದ
ದುರ್ದೈವದ ಧನು ಸಜ್ಜಿತ
ಚಿಂತೆಯ ನಂಜಲಗ ತಿವಿದು
ಬೆನ್ನ ಹತ್ತಿದ!

ಭೀತಿಯಿಂದ ತನುಕಂಪಿತ
ನಯನಂಗಳು ಅಶ್ರುಭರಿತ
ಬಂದಿತೆಂದಿತದೊ ಸಮೀಪ
ಕೊನೆಯಗಳಿಗೆಯು

ಕರುಣಾಶ್ರಯವಿಲ್ಲದಾಯ್ತು
ನಿಷ್ಕರುಣಿಯ ಜಗವಾಯಿತು
ಕೆನ್ನೀರಿನ ಮಡುವಾಯಿತು
ಮೃದುಲ ದೇಹವು!

ಕಂಗಳ ಬಟ್ಟಲುಗಳಲ್ಲಿ
ಜಗದಾಸೆಯ ಮದಿರೆಯಲ್ಲಿ
ತುಂಬಿದರೂ ತುಳುಕಿ ತಿಂದು
ದುಃಖಸಾಗರ!

ಪ್ರಕೃತಿಯೆಲ್ಲ ಪ್ರತಿಬಿಂಬಿತ
ನಯನಂಗಳಲತಿ ರಂಜಿತ
ಅದನೊರಸುತ ತೇಲಿ ಬಂತು
ದುಗುಡ ಬೆಂತರ!

ಓಡಿದತ್ತ ಬೆಂಬತ್ತಿದೆ
ನೋಡಿದತ್ತ ನೆಗೆದೆದ್ದಿದೆ
ಮೂರ್ತಿಮಂತ ಮರಣದಂತೆ
ಬಾಳ ರಕ್ಕಸ!

ಸ್ವಪ್ನಹರಿಣ, ನಿಲ್ಲರೆ ಚಣ,
ದಿನ ಸತ್ತಿತು ಇದೆ ಈ ಕ್ಷಣ
ಬಿಸಿಲು ಬಾಣ ತಾಗೆ, ಬಾನ್ಗೆ-
ರಕ್ತ ಚಿಮ್ಮಿತು!

ಕಲ್ಪನೆಯುತ್ತುಂಗ ಶಿಖರ
ಮನದಾಸೆಯ ಸೌಖ್ಯ ಶಿಬಿರ
ಕೈಯ ಚಾಚಿ ಕರೆಯುತಿಹುದು
ತನ್ನ ಎಡೆಯಲಿ!

ಇರುಳಿನ ತೋಳ್‌ ತೊಟ್ಟಿಲಲ್ಲಿ
ಬೆಳುಂದಿಗಳ ಸೆರಗಿನಲ್ಲಿ
ವಿರಮಿಸಿ ಆ ಕರುಣೆಯಲ್ಲಿ
ಬೆಳೆಸು ಬಲವನು.

ನೀನಿರುತಿರೆ ಇದೆ ಸಂಸ್ಕೃತಿ
ನೀ ಬೆಳೆದರೆ ಅವ ಸಾಹಿತಿ
ಮನ ಮಂದಿರದಲಿ ಮೂರುತಿ
ಚೆಲುವು ನಿನ್ನದು!

ಮುನ್ನಡೆಯಲಿ ನೀ ಪ್ರೇರಣೆ
ಪ್ರತಿ ಯತ್ನಕೆ ನೀ ಚೇತನೆ
ನಿತ್ಯ ನೂತ್ನ ರಮ್ಯವದನೆ
ಕಹಿಯ ಕಳೆಯುವೆ!

ಸಾಯಬಾರದೆಂದು ನೀನು
ಕರಿಯಿರುಳಲಿ ಬೆಳಕು ನೀನು
ಬೆಂದ ಬಾಳ ಹಾಳಿನಲ್ಲಿ
ತಣಿವಿನೂಟೆಯು!

ನಿನ್ನುಳಿಸಲು ಜನ ಕೂಡಿದೆ
ದೇವರನ್ನು ಜಗ ಬೇಡಿದೆ
ಚಿಂತಾಕುಲ ಜೀವಿತದಲಿ
ನಿನಗೆ ಕಾದಿದೆ!

ಕ್ಷುಬ್ಬವಿದ್ಧ ಮಾನವ ಕುಲ
ಅದರ ದುಃಖವಾಯಿತಚಲ
ಅದಕ ಯತ್ನವೆಲ್ಲ ವಿಫಲ
ವಿರಸ ಬಾಳುವೆ!

ಪಾಪದ ಕೋಳ್‌ ಗೋಣ್‌ ಬಿಗಿಯಲು
ಶಾಪದ ಕೈ ಅಲುಗಿರಿಯಲು
ನಿನ್ನೊಡಲಿನ ಕಸ್ತೂರಿಯು
ಪ್ರಾಣದಾನ ಮಾಡಲಿ!

ನಮ್ಮೊಡಲಿನ ಚಿಂತೆಯನ್ನು
ನೀಗದಿರುವ ಶಂಕೆಯನ್ನು
ಸ್ವಪ್ನ ಸಜಲ ನಯನ ನೀರ
ತಣಿವ ತೋರಲಿ!

ಚೆಲುವದೋರು ಒಲವನೀಡು
ಕೆಡುಕಳಿಯುವ ಹಾಗೆ ಮಾಡು
ಚಿರಮಂಗಲ ಸುರಸುಂದರ
ಬಾಳ ಕೊನರಿಸು.
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...