Home / ಲೇಖನ / ಹಾಸ್ಯ / ಕನಸು ನನಸಾಯಿತು

ಕನಸು ನನಸಾಯಿತು

ಆಗ ಮಲೆನಾಡಿನ ಕೇಂದ್ರವಾದ ಸಾಗರದಲ್ಲಿ ಬ್ಯಾಂಕ್ ನೌಕರಿಯಲ್ಲಿದ್ದೆ. ಸಾಗರದಲ್ಲಿನ ಜಡಿಮಳೆಯಿಂದ ಬೇಸತ್ತ ನಾನು ಮೈಸೂರಿಗೆ ವರ್‍ಗವಾಗುವ ಬಗ್ಗೆ ಮನದಲ್ಲಿಯೇ ಕಲ್ಪನೆ ಮಾಡಿಕೊಂಡು ಮಂಡಿಗೆ ಮೆಯ್ಯುತ್ತಿದ್ದೆ.

ಅದೊಂದು ದಿನ ಚಿಂತೆ ಮಾಡುತ್ತಲೇ ನಿದ್ದೆ ಆವರಿಸಿತ್ತು. ನನಗೆ ಮೈಸೂರಿಗೆ ವರ್‍ಗವಾಗಿ ರೈಲಿನಲ್ಲಿ ನಾನು ನನ್ನವಳ ಸಂಗಡ ಪ್ರಯಾಣಿಸಿ ಮೈಸೂರು ನಿಲ್ದಾಣದಲ್ಲಿ ಇಳಿದೆ. ನಮ್ಮ ಮಾವನವರು ನಮ್ಮನ್ನು ಸ್ವಾಗತಿಸಲು ಫ್ಲಾಟ್ ಫಾರಂನಲ್ಲಿ ಕಾಯುತ್ತಿರುವುದರ ಬಗ್ಗೆ ಕನಸು ಕಂಡೆ.

ಬೆಳಗ್ಗೆ ಎದ್ದೊಡನೆ ಕನಸಿನ ಬಗ್ಗೆ ನನ್ನವಳಿಗೆ ಹೇಳಿದೆ. “ರ್ರೀ, ನೀವು ಈಗಲೇ ಬೆಂಗಳೂರಿಗೆ ಹೋಗಿ ಹೆಡ್ ಆಫೀಸ್ನಲ್ಲಿ ಮೇಲಧಿಕಾರಿಯನ್ನು ಕಂಡು ಸಾಗರದ ಹವಾ ನನಗೆ ಒಗ್ಗುತ್ತಿಲ್ಲ. ಮೈಸೂರಿಗೆ ವರ್‍ಗಾ ಮಾಡಿ” ಎಂದು ಕೇಳಿಕೊಳ್ಳಿ ಎಂದು ಆಕೆ ಸಲಹೆ ನೀಡಿದಳು.

ಅವಳು ಹೇಳಿದ್ದು ಸರಿ ಎಂದೆನಿಸಿ ಕೂಡಲೇ ಬೆಂಗಳೂರಿಗೆ ಹೊರಟೆ. ಮೇಲಧಿಕಾರಿಗಳಲ್ಲಿ ವಿನಂತಿಸಿದೆ.

“ಏನು? ನಿಮಗೆ ಮೈಸೂರೇ ಆಗ ಬೇಕೋ? ನಿಮಗಿಂತ ಸೀನಿಯರ್ ಎಷ್ಟೋ ಜನ ವರ್‍ಗ ಬೇಕೆಂದು ಹಾರಾಡುತ್ತಿದ್ದಾರೆ. ಅದೆಲ್ಲ ಆಗೋದಿಲ್ಲ ಬೇಕಾದರೆ ಹತ್ತಿರದ ಯಾವುದಾದರೂ ಹಳ್ಳಿಗೆ ಹಾಕೋಣ” ಎಂದು ಆಧಿಕಾರಿ ಗುಡುಗಿದರು.

ಕನಸು ನನಸಾಗಿದ್ದರೆ, ಎಷ್ಟು ಚಿನ್ನಾಗಿರುತ್ತಿತ್ತು. ಬಂದ ದಾರಿಗೆ ಸುಂಕವಿಲ್ಲವಾಯಿತಲ್ಲ ಎಂದುಕೊಂಡು ಸಾಗರಕ್ಕೆ ಮರಳಿದೆ. ಒಂದು ವಾರ ಕಳದಿರ‍ಬಹುದು. ಬೆಳಿಗ್ಗ ಬ್ಯಾಂಕಿಗೆ ಹೋದಾಗ ಅಚ್ಚರಿಯೊಂದು ಕಾದಿತ್ತು. ಮ್ಯಾನೇಜರ್ ನನ್ನನ್ನು ಕರೆದು “ಎಲ್ಲರಿಗೂ ಸ್ವೀಟ್ ತರಿಸಿ” ಎಂದರು. ನನಗೆ ತಳಬುಡ ಏನೂ ತಿಳಿಯಲಿಲ್ಲ.

“ನೋಡಿ ನಿಮ್ಮ ವರ್‍ಗದ ಆರ್‍ಡರ್” ಎನ್ನುತ್ತಾ ನನ್ನ ಕೈಯಲ್ಲಿತ್ತರು. ನನಗೆ ಮೈಸೂರು ಹತ್ತಿರದ ಹಳ್ಳಿ ಯಾವುದಾದರೂ ಇರಬಹುದು ಎಂಬ ಆತಂಕ ಅದರೆ ದೈವವಶಾತ್ ಮೈಸೂರಿಗೇ ವರ್‍ಗವಾಗಿತ್ತು! ಮನಸ್ಸಿನಲ್ಲಿ ಮೇಲ್ನೋಟಕ್ಕೆ ತೀಕ್ಷ್ಣವಾಗಿ ಅಂತರಂಗದಲ್ಲಿ ಮೃದುವಾಗಿಯೂ ಇದ್ದ ಅಧಿಕಾರಿಯನ್ನು ಮನಸಾರೆ ವಂದಿಸಿದೆ.
*****

Tagged:

Leave a Reply

Your email address will not be published. Required fields are marked *

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೀಲಿಕರಣ: ಎಂ ಎನ್ ಎಸ್ ರಾವ್