Home / ಕಥೆ / ಕಿರು ಕಥೆ / ನೆಲೆ ಇರುವುದು ಎಲ್ಲಿ?

ನೆಲೆ ಇರುವುದು ಎಲ್ಲಿ?

ವೃಕ್ಷವನ್ನು ನೋಡುತ್ತಾ ಅದರ ಭೂಗತ ನೆಲೆಯನ್ನು ಕಂಡುಕೊಂಡಿರುವೆ. ಆಗಸದಲೆಲ್ಲಾ ರೆಕ್ಕೆ ಬಡಿದು ಅಳೆಯುವ ಪಕ್ಷಿಯು ನೆಲೆ ಗೂಡೆಂದು ಕಂಡು ಕೊಂಡಿರವೆ. “ಶಿಷ್ಯನೆ! ಈಗ ನಿನ್ನ ಸರದಿ, ನೀನು ನಿನ್ನ ನೆಲೆ ಇರುವುದು ಎಲ್ಲಿ ಎಂದು ಹೇಳಬಲ್ಲೆಯಾ?” ಎಂದರು ಗುರುಗಳು.

“ಗುರುಗಳೇ! ಅದು ಬಹಳ ಕಷ್ಟ, ನಮಗೆ ಕ್ಷಣಕ್ಕೊಂದು ನೆಲೆ ಮನದಲ್ಲಿ ನೆಲೆಸಿರುವ ನನಗೆ ಮನವು ಓಡುವೆಡೆ ಕ್ಷಣಕ್ಕೊಂದು ನೆಲೆ” ಎಂದ ಶಿಷ್ಯ.

“ಅದೇನು ಎಂಬುದನ್ನು ತಿಳಿಯ ಹೇಳು” ಎಂದರು ಗುರುಗಳು.

“ಮನದಲ್ಲಿ ನೆಲೆಸಿರುವೆನೆಂದು ತಿಳಿಯುವಾಗ ಮನೆಯಲ್ಲಿ ನೆಲೆಸಿರುವೆ. ಚಿಂತನೆಯಲ್ಲಿ ತೇಲಿರುವೆ ಎನ್ನುವಾಗ ಚಿಂತೆಯಲ್ಲಿ ಕಾಲ ನೂಕಿರುವೆ. ನಕ್ಷತ್ರ ನೋಡುವಾಗ ಆಗಸದಲ್ಲಿ ನೆಲೆ ಇರುವೆ. ಗುಡುಗನ್ನು ಆಲಿಸುವಾಗ ಮೋಡದಲ್ಲಿ ನೆಲೆಸಿರುವೆ. ಬೆಳದಿಂಗಳನ್ನು ಸವಿಯುವಾಗ ಚಂದ್ರಮನಲ್ಲಿ ನೆಲಸಿರುವೆ, ನಾವೆಯಲ್ಲಿ ತೇಲುವಾಗ ನದಿಯಲ್ಲಿ ನೆಲೆಸಿರುವೆ. ಹೂವನ್ನು ನೋಡುವಾಗ ವನದಲ್ಲಿ ನೆಲಸಿರುವೆ. ಭಾವದಲ್ಲಿರುವಾಗ ಭಕ್ತಿಯಲ್ಲಿ, ಬೆಳಕಿನಲ್ಲಿರುವಾಗ ಜ್ಞಾನದಲ್ಲಿ, ಕರ್ಮದಲ್ಲಿರುವಾಗ ಕ್ರಿಯೆಯಲ್ಲಿ, ಸತೃಕತಿಯಲ್ಲಿರುವಾಗ ಸಂಸ್ಕೃತಿಯಲ್ಲಿ, ಕಾಮನೆಯಲ್ಲಿರುವಾಗ ಕಾಮನಬಿಲ್ಲಿನಲ್ಲಿ, ಧೃತಿಯಲ್ಲಿರುವಾಗ ಕೃತಿಯಲ್ಲಿ, ಗೀತದಲ್ಲಿರುವಾಗ ಸಂಗೀತದಲ್ಲಿ, ಶ್ವಾಸದಲ್ಲಿರುವಾಗ ವಿಶ್ವಾಸದಲ್ಲಿ, ಮಾತಿನಲ್ಲಿರುವಾಗ ಮೌನದಲ್ಲಿ, ಬೇಸರದಲ್ಲಿರುವಾಗ ಆಸರದಲ್ಲಿ, ಆಶೆಯಲ್ಲಿರುವಾಗ ಬಯಕೆಯಲ್ಲಿ, ಸಂಗದಲ್ಲಿರುವಾಗ ಏಕಾಂತದಲ್ಲಿ, ಜಗದಲ್ಲಿರುವಾಗ ಅಂತರಂಗದಲ್ಲಿ, ಪ್ರಾಣನಲ್ಲಿರುವಾಗ ಪ್ರಜ್ಞೆಯಲ್ಲಿ, ಹಾದಿಯಲ್ಲಿರುವಾಗ ಆದಿ ಅಂತ್ಯದಲ್ಲಿ, ರಾಗದಲ್ಲಿರುವಾಗ ಅನುರಾಗ ವಿರಾಗದಲ್ಲಿ, ತಾಳದಲ್ಲಿರುವಾಗ ನರ್ತನದಲ್ಲಿ, ವಿಚಾರದಲ್ಲಿರುವಾಗ ಆಚಾರ ಪ್ರಚಾರದಲ್ಲಿ, ನಿಲುವಿನಲ್ಲಿರುವಾಗ ನಿರ್ಣಯದಲ್ಲಿ, ಗುರುವೊಡನೆ ಇರುವಾಗ ಗುರುತರದಲ್ಲಿ, ದಿಗಂತದಲ್ಲಿರುವಾಗ ಅನಂತದಲ್ಲಿ, ಸಂತ ರೋಡರಿರುವಾಗ ಭಗವಂತನಲ್ಲಿ, ಆತ್ಮನಲ್ಲಿರುವಾಗ ಪರಮಾತ್ಮನಲ್ಲಿ ನೆಲೆಗೊಂಡಿರುವೆ. ನೋಡಿದಿರಾ! ಗುರುಗಳೇ! ಕ್ಷಣಕ್ಕೊಂದು ನೆಲೆ ಈ ಮನಕ್ಕೆ”- ಎಂದ ಶಿಷ್ಯ.

“ಆತ್ಮವು ಪರಮಾತ್ಮನಲ್ಲಿ ನೆಲೆಗೊಂಡಿರುವುದು ಎಂಬುದು ತಿಳಿಯಲು ನಿನ್ನ ಮನವು ನಡೆದು ಬಂದು ಕೊನೆ ಮುಟ್ಟುವ ಘಟ್ಟ ಅದೇ ಸತ್ಯದ ಹುಟ್ಟು, ಅದೇ ಎಲ್ಲರ ನೆಲೆ ಎಂದಾಗ ಗುರು ಶಿಷ್ಯರ ಹೃದಯ ನೆಲೆ ಒಂದಾಯಿತು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...