Home / ಕಥೆ / ಕಿರು ಕಥೆ / ನೆಲೆ ಇರುವುದು ಎಲ್ಲಿ?

ನೆಲೆ ಇರುವುದು ಎಲ್ಲಿ?

ವೃಕ್ಷವನ್ನು ನೋಡುತ್ತಾ ಅದರ ಭೂಗತ ನೆಲೆಯನ್ನು ಕಂಡುಕೊಂಡಿರುವೆ. ಆಗಸದಲೆಲ್ಲಾ ರೆಕ್ಕೆ ಬಡಿದು ಅಳೆಯುವ ಪಕ್ಷಿಯು ನೆಲೆ ಗೂಡೆಂದು ಕಂಡು ಕೊಂಡಿರವೆ. “ಶಿಷ್ಯನೆ! ಈಗ ನಿನ್ನ ಸರದಿ, ನೀನು ನಿನ್ನ ನೆಲೆ ಇರುವುದು ಎಲ್ಲಿ ಎಂದು ಹೇಳಬಲ್ಲೆಯಾ?” ಎಂದರು ಗುರುಗಳು.

“ಗುರುಗಳೇ! ಅದು ಬಹಳ ಕಷ್ಟ, ನಮಗೆ ಕ್ಷಣಕ್ಕೊಂದು ನೆಲೆ ಮನದಲ್ಲಿ ನೆಲೆಸಿರುವ ನನಗೆ ಮನವು ಓಡುವೆಡೆ ಕ್ಷಣಕ್ಕೊಂದು ನೆಲೆ” ಎಂದ ಶಿಷ್ಯ.

“ಅದೇನು ಎಂಬುದನ್ನು ತಿಳಿಯ ಹೇಳು” ಎಂದರು ಗುರುಗಳು.

“ಮನದಲ್ಲಿ ನೆಲೆಸಿರುವೆನೆಂದು ತಿಳಿಯುವಾಗ ಮನೆಯಲ್ಲಿ ನೆಲೆಸಿರುವೆ. ಚಿಂತನೆಯಲ್ಲಿ ತೇಲಿರುವೆ ಎನ್ನುವಾಗ ಚಿಂತೆಯಲ್ಲಿ ಕಾಲ ನೂಕಿರುವೆ. ನಕ್ಷತ್ರ ನೋಡುವಾಗ ಆಗಸದಲ್ಲಿ ನೆಲೆ ಇರುವೆ. ಗುಡುಗನ್ನು ಆಲಿಸುವಾಗ ಮೋಡದಲ್ಲಿ ನೆಲೆಸಿರುವೆ. ಬೆಳದಿಂಗಳನ್ನು ಸವಿಯುವಾಗ ಚಂದ್ರಮನಲ್ಲಿ ನೆಲಸಿರುವೆ, ನಾವೆಯಲ್ಲಿ ತೇಲುವಾಗ ನದಿಯಲ್ಲಿ ನೆಲೆಸಿರುವೆ. ಹೂವನ್ನು ನೋಡುವಾಗ ವನದಲ್ಲಿ ನೆಲಸಿರುವೆ. ಭಾವದಲ್ಲಿರುವಾಗ ಭಕ್ತಿಯಲ್ಲಿ, ಬೆಳಕಿನಲ್ಲಿರುವಾಗ ಜ್ಞಾನದಲ್ಲಿ, ಕರ್ಮದಲ್ಲಿರುವಾಗ ಕ್ರಿಯೆಯಲ್ಲಿ, ಸತೃಕತಿಯಲ್ಲಿರುವಾಗ ಸಂಸ್ಕೃತಿಯಲ್ಲಿ, ಕಾಮನೆಯಲ್ಲಿರುವಾಗ ಕಾಮನಬಿಲ್ಲಿನಲ್ಲಿ, ಧೃತಿಯಲ್ಲಿರುವಾಗ ಕೃತಿಯಲ್ಲಿ, ಗೀತದಲ್ಲಿರುವಾಗ ಸಂಗೀತದಲ್ಲಿ, ಶ್ವಾಸದಲ್ಲಿರುವಾಗ ವಿಶ್ವಾಸದಲ್ಲಿ, ಮಾತಿನಲ್ಲಿರುವಾಗ ಮೌನದಲ್ಲಿ, ಬೇಸರದಲ್ಲಿರುವಾಗ ಆಸರದಲ್ಲಿ, ಆಶೆಯಲ್ಲಿರುವಾಗ ಬಯಕೆಯಲ್ಲಿ, ಸಂಗದಲ್ಲಿರುವಾಗ ಏಕಾಂತದಲ್ಲಿ, ಜಗದಲ್ಲಿರುವಾಗ ಅಂತರಂಗದಲ್ಲಿ, ಪ್ರಾಣನಲ್ಲಿರುವಾಗ ಪ್ರಜ್ಞೆಯಲ್ಲಿ, ಹಾದಿಯಲ್ಲಿರುವಾಗ ಆದಿ ಅಂತ್ಯದಲ್ಲಿ, ರಾಗದಲ್ಲಿರುವಾಗ ಅನುರಾಗ ವಿರಾಗದಲ್ಲಿ, ತಾಳದಲ್ಲಿರುವಾಗ ನರ್ತನದಲ್ಲಿ, ವಿಚಾರದಲ್ಲಿರುವಾಗ ಆಚಾರ ಪ್ರಚಾರದಲ್ಲಿ, ನಿಲುವಿನಲ್ಲಿರುವಾಗ ನಿರ್ಣಯದಲ್ಲಿ, ಗುರುವೊಡನೆ ಇರುವಾಗ ಗುರುತರದಲ್ಲಿ, ದಿಗಂತದಲ್ಲಿರುವಾಗ ಅನಂತದಲ್ಲಿ, ಸಂತ ರೋಡರಿರುವಾಗ ಭಗವಂತನಲ್ಲಿ, ಆತ್ಮನಲ್ಲಿರುವಾಗ ಪರಮಾತ್ಮನಲ್ಲಿ ನೆಲೆಗೊಂಡಿರುವೆ. ನೋಡಿದಿರಾ! ಗುರುಗಳೇ! ಕ್ಷಣಕ್ಕೊಂದು ನೆಲೆ ಈ ಮನಕ್ಕೆ”- ಎಂದ ಶಿಷ್ಯ.

“ಆತ್ಮವು ಪರಮಾತ್ಮನಲ್ಲಿ ನೆಲೆಗೊಂಡಿರುವುದು ಎಂಬುದು ತಿಳಿಯಲು ನಿನ್ನ ಮನವು ನಡೆದು ಬಂದು ಕೊನೆ ಮುಟ್ಟುವ ಘಟ್ಟ ಅದೇ ಸತ್ಯದ ಹುಟ್ಟು, ಅದೇ ಎಲ್ಲರ ನೆಲೆ ಎಂದಾಗ ಗುರು ಶಿಷ್ಯರ ಹೃದಯ ನೆಲೆ ಒಂದಾಯಿತು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...