Home / ಕಥೆ / ಕಿರು ಕಥೆ / ನೆಲೆ ಇರುವುದು ಎಲ್ಲಿ?

ನೆಲೆ ಇರುವುದು ಎಲ್ಲಿ?

ವೃಕ್ಷವನ್ನು ನೋಡುತ್ತಾ ಅದರ ಭೂಗತ ನೆಲೆಯನ್ನು ಕಂಡುಕೊಂಡಿರುವೆ. ಆಗಸದಲೆಲ್ಲಾ ರೆಕ್ಕೆ ಬಡಿದು ಅಳೆಯುವ ಪಕ್ಷಿಯು ನೆಲೆ ಗೂಡೆಂದು ಕಂಡು ಕೊಂಡಿರವೆ. “ಶಿಷ್ಯನೆ! ಈಗ ನಿನ್ನ ಸರದಿ, ನೀನು ನಿನ್ನ ನೆಲೆ ಇರುವುದು ಎಲ್ಲಿ ಎಂದು ಹೇಳಬಲ್ಲೆಯಾ?” ಎಂದರು ಗುರುಗಳು.

“ಗುರುಗಳೇ! ಅದು ಬಹಳ ಕಷ್ಟ, ನಮಗೆ ಕ್ಷಣಕ್ಕೊಂದು ನೆಲೆ ಮನದಲ್ಲಿ ನೆಲೆಸಿರುವ ನನಗೆ ಮನವು ಓಡುವೆಡೆ ಕ್ಷಣಕ್ಕೊಂದು ನೆಲೆ” ಎಂದ ಶಿಷ್ಯ.

“ಅದೇನು ಎಂಬುದನ್ನು ತಿಳಿಯ ಹೇಳು” ಎಂದರು ಗುರುಗಳು.

“ಮನದಲ್ಲಿ ನೆಲೆಸಿರುವೆನೆಂದು ತಿಳಿಯುವಾಗ ಮನೆಯಲ್ಲಿ ನೆಲೆಸಿರುವೆ. ಚಿಂತನೆಯಲ್ಲಿ ತೇಲಿರುವೆ ಎನ್ನುವಾಗ ಚಿಂತೆಯಲ್ಲಿ ಕಾಲ ನೂಕಿರುವೆ. ನಕ್ಷತ್ರ ನೋಡುವಾಗ ಆಗಸದಲ್ಲಿ ನೆಲೆ ಇರುವೆ. ಗುಡುಗನ್ನು ಆಲಿಸುವಾಗ ಮೋಡದಲ್ಲಿ ನೆಲೆಸಿರುವೆ. ಬೆಳದಿಂಗಳನ್ನು ಸವಿಯುವಾಗ ಚಂದ್ರಮನಲ್ಲಿ ನೆಲಸಿರುವೆ, ನಾವೆಯಲ್ಲಿ ತೇಲುವಾಗ ನದಿಯಲ್ಲಿ ನೆಲೆಸಿರುವೆ. ಹೂವನ್ನು ನೋಡುವಾಗ ವನದಲ್ಲಿ ನೆಲಸಿರುವೆ. ಭಾವದಲ್ಲಿರುವಾಗ ಭಕ್ತಿಯಲ್ಲಿ, ಬೆಳಕಿನಲ್ಲಿರುವಾಗ ಜ್ಞಾನದಲ್ಲಿ, ಕರ್ಮದಲ್ಲಿರುವಾಗ ಕ್ರಿಯೆಯಲ್ಲಿ, ಸತೃಕತಿಯಲ್ಲಿರುವಾಗ ಸಂಸ್ಕೃತಿಯಲ್ಲಿ, ಕಾಮನೆಯಲ್ಲಿರುವಾಗ ಕಾಮನಬಿಲ್ಲಿನಲ್ಲಿ, ಧೃತಿಯಲ್ಲಿರುವಾಗ ಕೃತಿಯಲ್ಲಿ, ಗೀತದಲ್ಲಿರುವಾಗ ಸಂಗೀತದಲ್ಲಿ, ಶ್ವಾಸದಲ್ಲಿರುವಾಗ ವಿಶ್ವಾಸದಲ್ಲಿ, ಮಾತಿನಲ್ಲಿರುವಾಗ ಮೌನದಲ್ಲಿ, ಬೇಸರದಲ್ಲಿರುವಾಗ ಆಸರದಲ್ಲಿ, ಆಶೆಯಲ್ಲಿರುವಾಗ ಬಯಕೆಯಲ್ಲಿ, ಸಂಗದಲ್ಲಿರುವಾಗ ಏಕಾಂತದಲ್ಲಿ, ಜಗದಲ್ಲಿರುವಾಗ ಅಂತರಂಗದಲ್ಲಿ, ಪ್ರಾಣನಲ್ಲಿರುವಾಗ ಪ್ರಜ್ಞೆಯಲ್ಲಿ, ಹಾದಿಯಲ್ಲಿರುವಾಗ ಆದಿ ಅಂತ್ಯದಲ್ಲಿ, ರಾಗದಲ್ಲಿರುವಾಗ ಅನುರಾಗ ವಿರಾಗದಲ್ಲಿ, ತಾಳದಲ್ಲಿರುವಾಗ ನರ್ತನದಲ್ಲಿ, ವಿಚಾರದಲ್ಲಿರುವಾಗ ಆಚಾರ ಪ್ರಚಾರದಲ್ಲಿ, ನಿಲುವಿನಲ್ಲಿರುವಾಗ ನಿರ್ಣಯದಲ್ಲಿ, ಗುರುವೊಡನೆ ಇರುವಾಗ ಗುರುತರದಲ್ಲಿ, ದಿಗಂತದಲ್ಲಿರುವಾಗ ಅನಂತದಲ್ಲಿ, ಸಂತ ರೋಡರಿರುವಾಗ ಭಗವಂತನಲ್ಲಿ, ಆತ್ಮನಲ್ಲಿರುವಾಗ ಪರಮಾತ್ಮನಲ್ಲಿ ನೆಲೆಗೊಂಡಿರುವೆ. ನೋಡಿದಿರಾ! ಗುರುಗಳೇ! ಕ್ಷಣಕ್ಕೊಂದು ನೆಲೆ ಈ ಮನಕ್ಕೆ”- ಎಂದ ಶಿಷ್ಯ.

“ಆತ್ಮವು ಪರಮಾತ್ಮನಲ್ಲಿ ನೆಲೆಗೊಂಡಿರುವುದು ಎಂಬುದು ತಿಳಿಯಲು ನಿನ್ನ ಮನವು ನಡೆದು ಬಂದು ಕೊನೆ ಮುಟ್ಟುವ ಘಟ್ಟ ಅದೇ ಸತ್ಯದ ಹುಟ್ಟು, ಅದೇ ಎಲ್ಲರ ನೆಲೆ ಎಂದಾಗ ಗುರು ಶಿಷ್ಯರ ಹೃದಯ ನೆಲೆ ಒಂದಾಯಿತು.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...