Home / ಕಥೆ / ಕಿರು ಕಥೆ / ನೆಲೆ ಇರುವುದು ಎಲ್ಲಿ?

ನೆಲೆ ಇರುವುದು ಎಲ್ಲಿ?

ವೃಕ್ಷವನ್ನು ನೋಡುತ್ತಾ ಅದರ ಭೂಗತ ನೆಲೆಯನ್ನು ಕಂಡುಕೊಂಡಿರುವೆ. ಆಗಸದಲೆಲ್ಲಾ ರೆಕ್ಕೆ ಬಡಿದು ಅಳೆಯುವ ಪಕ್ಷಿಯು ನೆಲೆ ಗೂಡೆಂದು ಕಂಡು ಕೊಂಡಿರವೆ. “ಶಿಷ್ಯನೆ! ಈಗ ನಿನ್ನ ಸರದಿ, ನೀನು ನಿನ್ನ ನೆಲೆ ಇರುವುದು ಎಲ್ಲಿ ಎಂದು ಹೇಳಬಲ್ಲೆಯಾ?” ಎಂದರು ಗುರುಗಳು.

“ಗುರುಗಳೇ! ಅದು ಬಹಳ ಕಷ್ಟ, ನಮಗೆ ಕ್ಷಣಕ್ಕೊಂದು ನೆಲೆ ಮನದಲ್ಲಿ ನೆಲೆಸಿರುವ ನನಗೆ ಮನವು ಓಡುವೆಡೆ ಕ್ಷಣಕ್ಕೊಂದು ನೆಲೆ” ಎಂದ ಶಿಷ್ಯ.

“ಅದೇನು ಎಂಬುದನ್ನು ತಿಳಿಯ ಹೇಳು” ಎಂದರು ಗುರುಗಳು.

“ಮನದಲ್ಲಿ ನೆಲೆಸಿರುವೆನೆಂದು ತಿಳಿಯುವಾಗ ಮನೆಯಲ್ಲಿ ನೆಲೆಸಿರುವೆ. ಚಿಂತನೆಯಲ್ಲಿ ತೇಲಿರುವೆ ಎನ್ನುವಾಗ ಚಿಂತೆಯಲ್ಲಿ ಕಾಲ ನೂಕಿರುವೆ. ನಕ್ಷತ್ರ ನೋಡುವಾಗ ಆಗಸದಲ್ಲಿ ನೆಲೆ ಇರುವೆ. ಗುಡುಗನ್ನು ಆಲಿಸುವಾಗ ಮೋಡದಲ್ಲಿ ನೆಲೆಸಿರುವೆ. ಬೆಳದಿಂಗಳನ್ನು ಸವಿಯುವಾಗ ಚಂದ್ರಮನಲ್ಲಿ ನೆಲಸಿರುವೆ, ನಾವೆಯಲ್ಲಿ ತೇಲುವಾಗ ನದಿಯಲ್ಲಿ ನೆಲೆಸಿರುವೆ. ಹೂವನ್ನು ನೋಡುವಾಗ ವನದಲ್ಲಿ ನೆಲಸಿರುವೆ. ಭಾವದಲ್ಲಿರುವಾಗ ಭಕ್ತಿಯಲ್ಲಿ, ಬೆಳಕಿನಲ್ಲಿರುವಾಗ ಜ್ಞಾನದಲ್ಲಿ, ಕರ್ಮದಲ್ಲಿರುವಾಗ ಕ್ರಿಯೆಯಲ್ಲಿ, ಸತೃಕತಿಯಲ್ಲಿರುವಾಗ ಸಂಸ್ಕೃತಿಯಲ್ಲಿ, ಕಾಮನೆಯಲ್ಲಿರುವಾಗ ಕಾಮನಬಿಲ್ಲಿನಲ್ಲಿ, ಧೃತಿಯಲ್ಲಿರುವಾಗ ಕೃತಿಯಲ್ಲಿ, ಗೀತದಲ್ಲಿರುವಾಗ ಸಂಗೀತದಲ್ಲಿ, ಶ್ವಾಸದಲ್ಲಿರುವಾಗ ವಿಶ್ವಾಸದಲ್ಲಿ, ಮಾತಿನಲ್ಲಿರುವಾಗ ಮೌನದಲ್ಲಿ, ಬೇಸರದಲ್ಲಿರುವಾಗ ಆಸರದಲ್ಲಿ, ಆಶೆಯಲ್ಲಿರುವಾಗ ಬಯಕೆಯಲ್ಲಿ, ಸಂಗದಲ್ಲಿರುವಾಗ ಏಕಾಂತದಲ್ಲಿ, ಜಗದಲ್ಲಿರುವಾಗ ಅಂತರಂಗದಲ್ಲಿ, ಪ್ರಾಣನಲ್ಲಿರುವಾಗ ಪ್ರಜ್ಞೆಯಲ್ಲಿ, ಹಾದಿಯಲ್ಲಿರುವಾಗ ಆದಿ ಅಂತ್ಯದಲ್ಲಿ, ರಾಗದಲ್ಲಿರುವಾಗ ಅನುರಾಗ ವಿರಾಗದಲ್ಲಿ, ತಾಳದಲ್ಲಿರುವಾಗ ನರ್ತನದಲ್ಲಿ, ವಿಚಾರದಲ್ಲಿರುವಾಗ ಆಚಾರ ಪ್ರಚಾರದಲ್ಲಿ, ನಿಲುವಿನಲ್ಲಿರುವಾಗ ನಿರ್ಣಯದಲ್ಲಿ, ಗುರುವೊಡನೆ ಇರುವಾಗ ಗುರುತರದಲ್ಲಿ, ದಿಗಂತದಲ್ಲಿರುವಾಗ ಅನಂತದಲ್ಲಿ, ಸಂತ ರೋಡರಿರುವಾಗ ಭಗವಂತನಲ್ಲಿ, ಆತ್ಮನಲ್ಲಿರುವಾಗ ಪರಮಾತ್ಮನಲ್ಲಿ ನೆಲೆಗೊಂಡಿರುವೆ. ನೋಡಿದಿರಾ! ಗುರುಗಳೇ! ಕ್ಷಣಕ್ಕೊಂದು ನೆಲೆ ಈ ಮನಕ್ಕೆ”- ಎಂದ ಶಿಷ್ಯ.

“ಆತ್ಮವು ಪರಮಾತ್ಮನಲ್ಲಿ ನೆಲೆಗೊಂಡಿರುವುದು ಎಂಬುದು ತಿಳಿಯಲು ನಿನ್ನ ಮನವು ನಡೆದು ಬಂದು ಕೊನೆ ಮುಟ್ಟುವ ಘಟ್ಟ ಅದೇ ಸತ್ಯದ ಹುಟ್ಟು, ಅದೇ ಎಲ್ಲರ ನೆಲೆ ಎಂದಾಗ ಗುರು ಶಿಷ್ಯರ ಹೃದಯ ನೆಲೆ ಒಂದಾಯಿತು.
*****

Tagged:

Leave a Reply

Your email address will not be published. Required fields are marked *

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೀಲಿಕರಣ: ಎಂ ಎನ್ ಎಸ್ ರಾವ್