Home / ಕವನ / ಕವಿತೆ / ಕವಿಗೆ ಕಿವಿಗೊಡದಿಹರೆ ಎದೆಯುಳ್ಳವರು?

ಕವಿಗೆ ಕಿವಿಗೊಡದಿಹರೆ ಎದೆಯುಳ್ಳವರು?

ಇರುವಿಗರಿವೇ ಮರೆವು, ಮರೆವಿಗೆ
ಅರಿವೆ ಇರುವಿನ ಪರಿಯು, ಈ ಪರಿ
ಹರಿವ ಇರುವಿನ ಅರಿವೆ ಹಿಗ್ಗಿನ
ಸಮರಸದ ಬಾಳು!

ಈ ಘನದ ನೆಲೆ ಪಿಂಡಗೊಂಡಿಹ
ಆ ಮಹತ್ತಿನ ಉಂಡೆ ಗರ್ಭೀ-
ಕರಿಸಿ ಮೊಗ್ಗಾಗಿಹುದು ಮನದುನ್ಮನದ ಬಯಲಿನಲಿ ॥೧॥

ಮನದ ಶೂನ್ಯ ಸ್ಥಿತಿಯು ಪೂರ್ಣದ
ವರ್ಣಗಳನಳವಡಿಸಿ ಪ್ರಾಣಕೆ
ಮಂತ್ರಮಾಲೆಯ ತೊಡಿಸಿ ದೇಹಕೆ ರೂಪು-
ಗೊಡುತಿಹುದು|

ಇದು ವಿರಾಟದ ಆಟ ಉತ್ತರ
ವೀರನಾ ಬಯಲಾಟವಲ್ಲವು
ಪ್ರಾಜ್ಞನಿಪ್ಪತ್ತಾರು ಪಕಳೆಯ ಕಮಲದರಳುವಿಕೆ ॥೨॥

ಒಂದರಲಿ ಎಂಟುಂಟು ಇಪ್ಪ-
-ತೇಳನೆಯ ಭೌತಿಕದ ಗಂಟಿನ
ಬಂಧಗಳೆ ಮನದಾಚೆ ಆ ಸಂಬಂಧ
ಪತಿಕರಿಸಿ|

ಮಹದ ಪದದಲಿ ಮನೆಯ ಹೂಡಲು
ಅತ್ತ ಘನವೋ ಇತ್ತ ಘನ ಎ-
-ತ್ತೆತ್ತು ಘನವೆನೆ ನರನ ನಾರಾಯಣತೆ ಮೆರೆಯುವವು ॥೩॥

ಮಾತು ಮಾತಿನ ಹೂತ ಬಯಲಲಿ
ಈ ಪದಾರ್ಥವೆ ಬದುಕು ಮಾಡಿದೆ
ಅದರ ರುಚಿಯನೆ ಹದವಗೊಳಿಸಲು
ಪಾಕ ಮಾಡುತಿವೆ |

ಡಂಭಕದ ಮಾತೇಕೆ ಆಡಂ-
ಬರದ ನಟನೆಯೆ ಬೇಕೆ, ಸಾಕೋ
ಆ ದಿಗಂಬರ ಭಾವ ಶಂಬರನಗರ ಸಂಹರಿಸೆ ॥೪॥

ಮಾತು ಭಾವದ ಕೀಲ, ರೂಪವು
ಸ್ಫುರಣ ಸ್ಫುರಣದ ಶೀಲ, ಛಂದವೊ
ಅಚ್ಚ ಸ್ವಚ್ಛಂದಕ್ಕೆ ಹೊದಿಸಿದ ಮೇಲುದದ
ತಾಲ |

ಮೌನ ಬ್ರಹ್ಮದ ಭಾಲ ಷಟ್ಪದಿ
ಬ್ರಹ್ಮಲಿಪಿ ಬರೆದಿಹುದು, ಅದ ನಿ-
-ರ್ವಚಿಸಲೆಂದೇ ಧ್ವನಿಸುತಿದೆ ಭಾರತಿಯ ಟೇಂಕಾರ ॥೫॥

ಇಳೆಗೆ ಭಾರತ ಮಹಿಮೆ ಅವತರಿ-
-ಸುತ್ತಿರಲು, ಕನ್ನಡದ ಹೊಕ್ಕರ-
-ಣೆಯಲಿ ಘನಸೋಪಾನ ರಚನೆಗೆ ಇಂಬು
ದೊರೆಕೊಳಿಸಿ |

ಸಾವಿರದ ಕೊರಳಿಂದ ಹೊರಟಿದೆ
ತಾನ ತಾನ ವಿತಾನ ಸುಭಗತೆ
ಕವಿಗೆ ಕಿವಿಗೊಡದಿಹರೆ ಎದೆಯುಳ್ಳವರು ಅರುಳಿನಲಿ ॥೬॥
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...