Home / ಕವನ / ಕವಿತೆ / ಕವಿಗೆ ಕಿವಿಗೊಡದಿಹರೆ ಎದೆಯುಳ್ಳವರು?

ಕವಿಗೆ ಕಿವಿಗೊಡದಿಹರೆ ಎದೆಯುಳ್ಳವರು?

ಇರುವಿಗರಿವೇ ಮರೆವು, ಮರೆವಿಗೆ
ಅರಿವೆ ಇರುವಿನ ಪರಿಯು, ಈ ಪರಿ
ಹರಿವ ಇರುವಿನ ಅರಿವೆ ಹಿಗ್ಗಿನ
ಸಮರಸದ ಬಾಳು!

ಈ ಘನದ ನೆಲೆ ಪಿಂಡಗೊಂಡಿಹ
ಆ ಮಹತ್ತಿನ ಉಂಡೆ ಗರ್ಭೀ-
ಕರಿಸಿ ಮೊಗ್ಗಾಗಿಹುದು ಮನದುನ್ಮನದ ಬಯಲಿನಲಿ ॥೧॥

ಮನದ ಶೂನ್ಯ ಸ್ಥಿತಿಯು ಪೂರ್ಣದ
ವರ್ಣಗಳನಳವಡಿಸಿ ಪ್ರಾಣಕೆ
ಮಂತ್ರಮಾಲೆಯ ತೊಡಿಸಿ ದೇಹಕೆ ರೂಪು-
ಗೊಡುತಿಹುದು|

ಇದು ವಿರಾಟದ ಆಟ ಉತ್ತರ
ವೀರನಾ ಬಯಲಾಟವಲ್ಲವು
ಪ್ರಾಜ್ಞನಿಪ್ಪತ್ತಾರು ಪಕಳೆಯ ಕಮಲದರಳುವಿಕೆ ॥೨॥

ಒಂದರಲಿ ಎಂಟುಂಟು ಇಪ್ಪ-
-ತೇಳನೆಯ ಭೌತಿಕದ ಗಂಟಿನ
ಬಂಧಗಳೆ ಮನದಾಚೆ ಆ ಸಂಬಂಧ
ಪತಿಕರಿಸಿ|

ಮಹದ ಪದದಲಿ ಮನೆಯ ಹೂಡಲು
ಅತ್ತ ಘನವೋ ಇತ್ತ ಘನ ಎ-
-ತ್ತೆತ್ತು ಘನವೆನೆ ನರನ ನಾರಾಯಣತೆ ಮೆರೆಯುವವು ॥೩॥

ಮಾತು ಮಾತಿನ ಹೂತ ಬಯಲಲಿ
ಈ ಪದಾರ್ಥವೆ ಬದುಕು ಮಾಡಿದೆ
ಅದರ ರುಚಿಯನೆ ಹದವಗೊಳಿಸಲು
ಪಾಕ ಮಾಡುತಿವೆ |

ಡಂಭಕದ ಮಾತೇಕೆ ಆಡಂ-
ಬರದ ನಟನೆಯೆ ಬೇಕೆ, ಸಾಕೋ
ಆ ದಿಗಂಬರ ಭಾವ ಶಂಬರನಗರ ಸಂಹರಿಸೆ ॥೪॥

ಮಾತು ಭಾವದ ಕೀಲ, ರೂಪವು
ಸ್ಫುರಣ ಸ್ಫುರಣದ ಶೀಲ, ಛಂದವೊ
ಅಚ್ಚ ಸ್ವಚ್ಛಂದಕ್ಕೆ ಹೊದಿಸಿದ ಮೇಲುದದ
ತಾಲ |

ಮೌನ ಬ್ರಹ್ಮದ ಭಾಲ ಷಟ್ಪದಿ
ಬ್ರಹ್ಮಲಿಪಿ ಬರೆದಿಹುದು, ಅದ ನಿ-
-ರ್ವಚಿಸಲೆಂದೇ ಧ್ವನಿಸುತಿದೆ ಭಾರತಿಯ ಟೇಂಕಾರ ॥೫॥

ಇಳೆಗೆ ಭಾರತ ಮಹಿಮೆ ಅವತರಿ-
-ಸುತ್ತಿರಲು, ಕನ್ನಡದ ಹೊಕ್ಕರ-
-ಣೆಯಲಿ ಘನಸೋಪಾನ ರಚನೆಗೆ ಇಂಬು
ದೊರೆಕೊಳಿಸಿ |

ಸಾವಿರದ ಕೊರಳಿಂದ ಹೊರಟಿದೆ
ತಾನ ತಾನ ವಿತಾನ ಸುಭಗತೆ
ಕವಿಗೆ ಕಿವಿಗೊಡದಿಹರೆ ಎದೆಯುಳ್ಳವರು ಅರುಳಿನಲಿ ॥೬॥
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...