Home / ಕವನ / ಕವಿತೆ / ಕವಿಗೆ ಕಿವಿಗೊಡದಿಹರೆ ಎದೆಯುಳ್ಳವರು?

ಕವಿಗೆ ಕಿವಿಗೊಡದಿಹರೆ ಎದೆಯುಳ್ಳವರು?

ಇರುವಿಗರಿವೇ ಮರೆವು, ಮರೆವಿಗೆ
ಅರಿವೆ ಇರುವಿನ ಪರಿಯು, ಈ ಪರಿ
ಹರಿವ ಇರುವಿನ ಅರಿವೆ ಹಿಗ್ಗಿನ
ಸಮರಸದ ಬಾಳು!

ಈ ಘನದ ನೆಲೆ ಪಿಂಡಗೊಂಡಿಹ
ಆ ಮಹತ್ತಿನ ಉಂಡೆ ಗರ್ಭೀ-
ಕರಿಸಿ ಮೊಗ್ಗಾಗಿಹುದು ಮನದುನ್ಮನದ ಬಯಲಿನಲಿ ॥೧॥

ಮನದ ಶೂನ್ಯ ಸ್ಥಿತಿಯು ಪೂರ್ಣದ
ವರ್ಣಗಳನಳವಡಿಸಿ ಪ್ರಾಣಕೆ
ಮಂತ್ರಮಾಲೆಯ ತೊಡಿಸಿ ದೇಹಕೆ ರೂಪು-
ಗೊಡುತಿಹುದು|

ಇದು ವಿರಾಟದ ಆಟ ಉತ್ತರ
ವೀರನಾ ಬಯಲಾಟವಲ್ಲವು
ಪ್ರಾಜ್ಞನಿಪ್ಪತ್ತಾರು ಪಕಳೆಯ ಕಮಲದರಳುವಿಕೆ ॥೨॥

ಒಂದರಲಿ ಎಂಟುಂಟು ಇಪ್ಪ-
-ತೇಳನೆಯ ಭೌತಿಕದ ಗಂಟಿನ
ಬಂಧಗಳೆ ಮನದಾಚೆ ಆ ಸಂಬಂಧ
ಪತಿಕರಿಸಿ|

ಮಹದ ಪದದಲಿ ಮನೆಯ ಹೂಡಲು
ಅತ್ತ ಘನವೋ ಇತ್ತ ಘನ ಎ-
-ತ್ತೆತ್ತು ಘನವೆನೆ ನರನ ನಾರಾಯಣತೆ ಮೆರೆಯುವವು ॥೩॥

ಮಾತು ಮಾತಿನ ಹೂತ ಬಯಲಲಿ
ಈ ಪದಾರ್ಥವೆ ಬದುಕು ಮಾಡಿದೆ
ಅದರ ರುಚಿಯನೆ ಹದವಗೊಳಿಸಲು
ಪಾಕ ಮಾಡುತಿವೆ |

ಡಂಭಕದ ಮಾತೇಕೆ ಆಡಂ-
ಬರದ ನಟನೆಯೆ ಬೇಕೆ, ಸಾಕೋ
ಆ ದಿಗಂಬರ ಭಾವ ಶಂಬರನಗರ ಸಂಹರಿಸೆ ॥೪॥

ಮಾತು ಭಾವದ ಕೀಲ, ರೂಪವು
ಸ್ಫುರಣ ಸ್ಫುರಣದ ಶೀಲ, ಛಂದವೊ
ಅಚ್ಚ ಸ್ವಚ್ಛಂದಕ್ಕೆ ಹೊದಿಸಿದ ಮೇಲುದದ
ತಾಲ |

ಮೌನ ಬ್ರಹ್ಮದ ಭಾಲ ಷಟ್ಪದಿ
ಬ್ರಹ್ಮಲಿಪಿ ಬರೆದಿಹುದು, ಅದ ನಿ-
-ರ್ವಚಿಸಲೆಂದೇ ಧ್ವನಿಸುತಿದೆ ಭಾರತಿಯ ಟೇಂಕಾರ ॥೫॥

ಇಳೆಗೆ ಭಾರತ ಮಹಿಮೆ ಅವತರಿ-
-ಸುತ್ತಿರಲು, ಕನ್ನಡದ ಹೊಕ್ಕರ-
-ಣೆಯಲಿ ಘನಸೋಪಾನ ರಚನೆಗೆ ಇಂಬು
ದೊರೆಕೊಳಿಸಿ |

ಸಾವಿರದ ಕೊರಳಿಂದ ಹೊರಟಿದೆ
ತಾನ ತಾನ ವಿತಾನ ಸುಭಗತೆ
ಕವಿಗೆ ಕಿವಿಗೊಡದಿಹರೆ ಎದೆಯುಳ್ಳವರು ಅರುಳಿನಲಿ ॥೬॥
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...