Home / ಲೇಖನ / ವಿಜ್ಞಾನ / ಮುಪ್ಪನ್ನು ಮುಂದೂಡವಲ್ಲಿ ಸಫಲರಾದ ವಿಜ್ಞಾನಿಗಳು

ಮುಪ್ಪನ್ನು ಮುಂದೂಡವಲ್ಲಿ ಸಫಲರಾದ ವಿಜ್ಞಾನಿಗಳು

ಮುಪ್ಪು ಯಾರಿಗೆ ತಾನೆ ಇಷ್ಟ? ಯಾವ ಕಾಲದಲ್ಲಿಯೂ ತಾರುಣ್ಯದಿಂದಲೇ ಇರಬೇಕೆಂಬ ಅಭಿಲಾಷೆ ಈ ಮಾನವನದ್ದು ಪೌರಾಣಿಕ ಕಾಲದಲ್ಲಿ ಮಂತ್ರಶಕ್ತಿಯಿಂದ ಮಾಯವಾಗುವುದು. ಮುದುಕ ಯುವಕನಾಗುವುದು, ಗಂಡು ಹೆಣ್ಣಾಗುವುದು ಸರ್ವೆಸಾಮಾನ್ಯ. ಇವೆಲ್ಲ ವೈಜ್ಞಾನಿಕವಾಗಿ ದೂರವಾದವುಗಳು. ಆದರೆ ವಾಸ್ತವವಾಗಿ ವೈಜ್ಞಾನಿಕವಾಗಿ ಸದಾ ತಾರುಣ್ಯದಲ್ಲಿಯೇ ಇರಬೇಕೆನ್ನುವುದು ವಿಜ್ಞಾನಕ್ಕೆ ಸಂಶೋಧನೆಗೆ ಬಿಟ್ಟ ವಿಷಯವಾಗಿದೆ. ಹಾಗೆ ನೋಡಿದರೆ ‘ಕ್ಲೋನಿಂಗ್’ ವಿಷಯ ಬಂದಾಗ ಮರುಸೃಷ್ಟಿ ಸಾಧ್ಯವೆಂದಾದರೂ ಈ ವಯಸ್ಸನ್ನು ಇಳಿಗೊಳಿಸದಿರುವುದು ಅಸಾಧ್ಯದ ಮಾತೆಂದು ಎಲ್ಲರೂ ಭಾವಿಸಿದ್ದರು. ಅಮೇರಿಕದ ಹೊಸ್ಟನ್ನಿನಲ್ಲಿ ಮಿಲ್ಲರ್ ಕ್ಯಾರ್ಲ್ಸ್ ಎಂಬ ೮೧ ವರ್ಷ ವಯೋವೃದ್ಧ ಸದಾ ಯವ್ವನಾವಸ್ಥೆಯಲ್ಲಿಯೇ ಇರಬೇಕೆಂದು ಬಯಸಿ ತನ್ನ ಜೀವಿತಾವಧಿಯಲ್ಲಿಯೇ ಮುಪ್ಪನ್ನು ಬರದಿರುವಂತೆ ಮಾಡುವ ಸಂಶೋಧಕರಿಗೆ ೧ ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ೧೯೯೯ ರಲ್ಲಿ ಘೋಶಿಸಿದ ನಂತರ ಕ್ಯಾರ್ಲ್ಸ್ ಅವರ ಸತತ ಪ್ರಯತ್ನಗಳ ದೆಸೆಯಿಂದ ಹಲವಾರು ವಿಜ್ಞಾನಿಗಳು ರೇಗಾನ್ ಕಾರ್ಪೊರೇಶನ್ ಎಂಬ ವಿಜ್ಞಾನದ ಸಂಸ್ಥೆಯನ್ನು ಕಟ್ಟಿದರು. ಈ ಸಮಿತಿಯಲ್ಲಿ ಪ್ರಖ್ಯಾತ ವೈದ್ಯ ವಿಜ್ಞಾನಿಗಳು ಅಣು ಜೀವಿ ವಿಜ್ಞಾನಿಗಳು, ಪೋಷಕಾಂಶ ಪರಿಣಿತರು ವ್ಯಾಯಾಮ ಪಂಡಿತರು ಮುಂತಾದ ವಿವಿಧ ಕ್ಷೇತ್ರಗಳ ೧,೦೦೦ ಕ್ಕೂ ಹೆಚ್ಚು ಜನ ವೃದ್ಧಾಪ್ಯವನ್ನು ಹಿಮ್ಮೆಟ್ಟಿಸುವ ಸಂಶೋಧನೆಯಲ್ಲಿ ತೊಡಗಿದರು. ಕೊನೆಗೊಂದು ದಿನ ಫ್ರಾನ್ಸಿನ ಕ್ರಿಸ್ ಜತೆಗೂಡಿ D.N.A. ಅಣು ವಿನ್ಯಾಸ ಪತ್ತೆಮಾಡಿದ ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ|| ಜೇಮ್ಸ್ ವಾಟ್ಸನ್ ಸಲಹಾ ಮಂಡಲಯಲ್ಲಿರುವ ಗೇರಾನ್ ಕಾರ್ಪೋರೇಶನ್ನಿನ ಪ್ರತಿಭಾವಂತ ವಿಜ್ಞಾನಿ ಡಾ|| ಮೈಕ್ ವೆಸ್ಟ್ ವೃದ್ಯಾಪ್ಯಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಅನ್ವೇಷಣೆಯ ಬಗೆಗೆ ಬೆಳಕು ಚಲ್ಲಿದರು. ನಮ್ಮ ದೇಹದಲ್ಲಿ ೧೦೦ ಟ್ರಿಲಿಯನ್ ಜೀವಕೋಶಗಳಿದ್ದು ಈ ಜೀವಕೋಶಗಳು ಅಮರವಾದರೆ ನಮ್ಮದೇಹವು ಅಮರವಾಗುತ್ತದೆ. ಈ ಜೀವಿಕೋಶಗಳ ಅಮರತ್ವವನ್ನು “ಹೆಪ್ಲಿಕ್ ಮಿತಿ” ಎಂಬ ಸರಳ ನಿಯಮವೊಂದು ರೂಪಿಸುತ್ತದೆ.

ನಮ್ಮ ದೇಹದ ಅಂಗಾಂಗಗಳಿಂದ ತೆಗೆದ ಜೀವಕೋಶಗಳನ್ನು ಪ್ರಯೋಗ ಶಾಲೆಯಲ್ಲಿ ಬೆಳಸಿದಾಗ ಅವು ಸು. ೫೦ ಬಾರಿ ವಿಭಜನೆಯಾಗುತ್ತವೆ. ಈ ಮಿತಿ ಅಂಗಾಂಶಗಳನ್ನು ಆಧರಿಸಿ ಬದಲಾಗುತ್ತದೆ. ಈ ಮಿತಿಯನ್ನು ದಾಟಿದ ನಂತರ ಕೋಶವಿಭಜನೆ ನಿಂತು ಜೀವಕೋಶಗಳಿಗೆ ಮುಪ್ಪು ಬರುತ್ತದೆ. ಈ ನಿಯಮವನ್ನು ಪ್ರತಿಪಾದಿಸಿದ ಕ್ಯಾಲಿಫೋರ್ನಿಯಾದ ವಿ.ವಿ.ಯ ವಿಜ್ಞಾನಿ ಡಾ|| ಹೆಪ್ಲಿಕ್ ಹೇಳುವಂತೆ ಜೀವಕೋಶದಲ್ಲಿರುವ D.N.A. ಸರಪಳಿಯಲ್ಲಿ ‘ಟೆಲೋಮಿರ್’ ಎಂಬ ಭಾಗವಿದೆ. ಷುಲೇಸ್ನ ಎರಡೂ ತುದಿಯಲ್ಲಿರುವ ಪ್ಲಾಸ್ಟಿಕ್ ಕವಚದಂತಿರುವ ಟೆಲೋಮಿರ್ ಭಾಗದ ಉದ್ದ ಪ್ರತಿಭಾರಿ ಜೀವಕೋಶ ವಿಭಜನೆಗೂಂಡಾಗಲೂ ಕಡಿಮೆಯಾಗುತ್ತದೆ. ಈ ಉದ್ದ ಒಂದು ನಿರ್ದಿಷ್ಟ ಮಿತಿಗೆ ಬಂದ ಕೂಡಲೇ ವಿಭಜನೆ ನಿಲ್ಲುತ್ತದೆ. ಟೆಲೋಮಿರನ ಉದ್ದಕ್ಕೂ ಜೀವಕೋಶಗಳ ಸಾವಿಗೂ ಖಚಿತವಾದ ಸಂಬಂಧವಿರುವುದು ಈಗ ಸ್ಪಷ್ಟವಾಗಿದೆ. ಎಲ್ಲ ಜೀವಕೋಶಗಳಲ್ಲಿಯೂ ಟೆಲೋಮಿರೇಟ್ ಎಂಬ ವಂಶವಾಹಿ ಇದ್ದು ಇದು ಟೆಮಿಮಿರ್ ಭಾಗದ ಉದ್ದವನ್ನು ಮತ್ತೊಮ್ಮೆ ಮೊದಲಿನಂತೆ ಮಾಡಿ ಮುಪ್ಪಡರಿದ ಜೀವಕೋಶಗಳನ್ನು ಹಿಂದಿನ ಯೌವ್ವನಾವ್ಯವಸ್ಥೆಗೆ ತರಬಲ್ಲದು.

ಡಾ|| ಹೆಸ್ಕ್ ಅವರೊಂದಿಗೆ ಸಂಶೋಧನೆಯಲ್ಲಿ ನಿರತರಾಗಿರುವ ಡಾ|| ವುಡ್‌ರಿಂಗ್ ರೈಟ್ ಮತ್ತು ಡಾ || ಚೆರಿಶೇ ಅವರುಗಳು ಈದೀಗ ಈ ಸುಪ್ತವಾದ ಜಡಾವಸ್ತೆಯ ವಂಶವಾಹಿನಿಯನ್ನು ಇನ್ನಿತರ ಜೀವಕೋಶಗಳಲ್ಲಿ ಸೇರಿಸಿ ಆ ಜೀವಕೋಶಗಳು ಹೆಪ್ಲಿಕ್, ಮಿತಿಯನ್ನು ದಾಟಿ ನಿರಂತವಾಗಿ ವಿಭಜನೆಯಾಗುವಂತೆ ಮಾಡಲಾಗಿದೆ. ಸಾವಿನ ಅಂಚಿಗೆ ಬಂದಿದ್ದ ಅಂಗಾಂಶವೊಂದರ ಜೀವಕೋಶಗಳನ್ನು ಮತ್ತೊಮ್ಮೆ ಹಿಂದಿನ ಯೌವನವಸ್ಥೆಗೆ ತರುವಲ್ಲಿ ಈ ತಂಡ ಸಂಪೂರ್ಣದಾಗಿ ಯಶಸ್ವಿಯಾಗಿದೆ. ಜೀವಕೋಶದ ಹಂತದಲ್ಲಿ ಇಂದು ಸಾಧ್ಯವಾಗಿರುವ ಅಮರತ್ವ, ಮುಂದೆ ಜೀವಿಯ ಮಟ್ಟದಲ್ಲೂ ಸಾಧ್ಯವಾಗಬಹುದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...