Home / ಲೇಖನ / ವಿಜ್ಞಾನ / ಮುಪ್ಪನ್ನು ಮುಂದೂಡವಲ್ಲಿ ಸಫಲರಾದ ವಿಜ್ಞಾನಿಗಳು

ಮುಪ್ಪನ್ನು ಮುಂದೂಡವಲ್ಲಿ ಸಫಲರಾದ ವಿಜ್ಞಾನಿಗಳು

ಮುಪ್ಪು ಯಾರಿಗೆ ತಾನೆ ಇಷ್ಟ? ಯಾವ ಕಾಲದಲ್ಲಿಯೂ ತಾರುಣ್ಯದಿಂದಲೇ ಇರಬೇಕೆಂಬ ಅಭಿಲಾಷೆ ಈ ಮಾನವನದ್ದು ಪೌರಾಣಿಕ ಕಾಲದಲ್ಲಿ ಮಂತ್ರಶಕ್ತಿಯಿಂದ ಮಾಯವಾಗುವುದು. ಮುದುಕ ಯುವಕನಾಗುವುದು, ಗಂಡು ಹೆಣ್ಣಾಗುವುದು ಸರ್ವೆಸಾಮಾನ್ಯ. ಇವೆಲ್ಲ ವೈಜ್ಞಾನಿಕವಾಗಿ ದೂರವಾದವುಗಳು. ಆದರೆ ವಾಸ್ತವವಾಗಿ ವೈಜ್ಞಾನಿಕವಾಗಿ ಸದಾ ತಾರುಣ್ಯದಲ್ಲಿಯೇ ಇರಬೇಕೆನ್ನುವುದು ವಿಜ್ಞಾನಕ್ಕೆ ಸಂಶೋಧನೆಗೆ ಬಿಟ್ಟ ವಿಷಯವಾಗಿದೆ. ಹಾಗೆ ನೋಡಿದರೆ ‘ಕ್ಲೋನಿಂಗ್’ ವಿಷಯ ಬಂದಾಗ ಮರುಸೃಷ್ಟಿ ಸಾಧ್ಯವೆಂದಾದರೂ ಈ ವಯಸ್ಸನ್ನು ಇಳಿಗೊಳಿಸದಿರುವುದು ಅಸಾಧ್ಯದ ಮಾತೆಂದು ಎಲ್ಲರೂ ಭಾವಿಸಿದ್ದರು. ಅಮೇರಿಕದ ಹೊಸ್ಟನ್ನಿನಲ್ಲಿ ಮಿಲ್ಲರ್ ಕ್ಯಾರ್ಲ್ಸ್ ಎಂಬ ೮೧ ವರ್ಷ ವಯೋವೃದ್ಧ ಸದಾ ಯವ್ವನಾವಸ್ಥೆಯಲ್ಲಿಯೇ ಇರಬೇಕೆಂದು ಬಯಸಿ ತನ್ನ ಜೀವಿತಾವಧಿಯಲ್ಲಿಯೇ ಮುಪ್ಪನ್ನು ಬರದಿರುವಂತೆ ಮಾಡುವ ಸಂಶೋಧಕರಿಗೆ ೧ ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ೧೯೯೯ ರಲ್ಲಿ ಘೋಶಿಸಿದ ನಂತರ ಕ್ಯಾರ್ಲ್ಸ್ ಅವರ ಸತತ ಪ್ರಯತ್ನಗಳ ದೆಸೆಯಿಂದ ಹಲವಾರು ವಿಜ್ಞಾನಿಗಳು ರೇಗಾನ್ ಕಾರ್ಪೊರೇಶನ್ ಎಂಬ ವಿಜ್ಞಾನದ ಸಂಸ್ಥೆಯನ್ನು ಕಟ್ಟಿದರು. ಈ ಸಮಿತಿಯಲ್ಲಿ ಪ್ರಖ್ಯಾತ ವೈದ್ಯ ವಿಜ್ಞಾನಿಗಳು ಅಣು ಜೀವಿ ವಿಜ್ಞಾನಿಗಳು, ಪೋಷಕಾಂಶ ಪರಿಣಿತರು ವ್ಯಾಯಾಮ ಪಂಡಿತರು ಮುಂತಾದ ವಿವಿಧ ಕ್ಷೇತ್ರಗಳ ೧,೦೦೦ ಕ್ಕೂ ಹೆಚ್ಚು ಜನ ವೃದ್ಧಾಪ್ಯವನ್ನು ಹಿಮ್ಮೆಟ್ಟಿಸುವ ಸಂಶೋಧನೆಯಲ್ಲಿ ತೊಡಗಿದರು. ಕೊನೆಗೊಂದು ದಿನ ಫ್ರಾನ್ಸಿನ ಕ್ರಿಸ್ ಜತೆಗೂಡಿ D.N.A. ಅಣು ವಿನ್ಯಾಸ ಪತ್ತೆಮಾಡಿದ ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ|| ಜೇಮ್ಸ್ ವಾಟ್ಸನ್ ಸಲಹಾ ಮಂಡಲಯಲ್ಲಿರುವ ಗೇರಾನ್ ಕಾರ್ಪೋರೇಶನ್ನಿನ ಪ್ರತಿಭಾವಂತ ವಿಜ್ಞಾನಿ ಡಾ|| ಮೈಕ್ ವೆಸ್ಟ್ ವೃದ್ಯಾಪ್ಯಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಅನ್ವೇಷಣೆಯ ಬಗೆಗೆ ಬೆಳಕು ಚಲ್ಲಿದರು. ನಮ್ಮ ದೇಹದಲ್ಲಿ ೧೦೦ ಟ್ರಿಲಿಯನ್ ಜೀವಕೋಶಗಳಿದ್ದು ಈ ಜೀವಕೋಶಗಳು ಅಮರವಾದರೆ ನಮ್ಮದೇಹವು ಅಮರವಾಗುತ್ತದೆ. ಈ ಜೀವಿಕೋಶಗಳ ಅಮರತ್ವವನ್ನು “ಹೆಪ್ಲಿಕ್ ಮಿತಿ” ಎಂಬ ಸರಳ ನಿಯಮವೊಂದು ರೂಪಿಸುತ್ತದೆ.

ನಮ್ಮ ದೇಹದ ಅಂಗಾಂಗಗಳಿಂದ ತೆಗೆದ ಜೀವಕೋಶಗಳನ್ನು ಪ್ರಯೋಗ ಶಾಲೆಯಲ್ಲಿ ಬೆಳಸಿದಾಗ ಅವು ಸು. ೫೦ ಬಾರಿ ವಿಭಜನೆಯಾಗುತ್ತವೆ. ಈ ಮಿತಿ ಅಂಗಾಂಶಗಳನ್ನು ಆಧರಿಸಿ ಬದಲಾಗುತ್ತದೆ. ಈ ಮಿತಿಯನ್ನು ದಾಟಿದ ನಂತರ ಕೋಶವಿಭಜನೆ ನಿಂತು ಜೀವಕೋಶಗಳಿಗೆ ಮುಪ್ಪು ಬರುತ್ತದೆ. ಈ ನಿಯಮವನ್ನು ಪ್ರತಿಪಾದಿಸಿದ ಕ್ಯಾಲಿಫೋರ್ನಿಯಾದ ವಿ.ವಿ.ಯ ವಿಜ್ಞಾನಿ ಡಾ|| ಹೆಪ್ಲಿಕ್ ಹೇಳುವಂತೆ ಜೀವಕೋಶದಲ್ಲಿರುವ D.N.A. ಸರಪಳಿಯಲ್ಲಿ ‘ಟೆಲೋಮಿರ್’ ಎಂಬ ಭಾಗವಿದೆ. ಷುಲೇಸ್ನ ಎರಡೂ ತುದಿಯಲ್ಲಿರುವ ಪ್ಲಾಸ್ಟಿಕ್ ಕವಚದಂತಿರುವ ಟೆಲೋಮಿರ್ ಭಾಗದ ಉದ್ದ ಪ್ರತಿಭಾರಿ ಜೀವಕೋಶ ವಿಭಜನೆಗೂಂಡಾಗಲೂ ಕಡಿಮೆಯಾಗುತ್ತದೆ. ಈ ಉದ್ದ ಒಂದು ನಿರ್ದಿಷ್ಟ ಮಿತಿಗೆ ಬಂದ ಕೂಡಲೇ ವಿಭಜನೆ ನಿಲ್ಲುತ್ತದೆ. ಟೆಲೋಮಿರನ ಉದ್ದಕ್ಕೂ ಜೀವಕೋಶಗಳ ಸಾವಿಗೂ ಖಚಿತವಾದ ಸಂಬಂಧವಿರುವುದು ಈಗ ಸ್ಪಷ್ಟವಾಗಿದೆ. ಎಲ್ಲ ಜೀವಕೋಶಗಳಲ್ಲಿಯೂ ಟೆಲೋಮಿರೇಟ್ ಎಂಬ ವಂಶವಾಹಿ ಇದ್ದು ಇದು ಟೆಮಿಮಿರ್ ಭಾಗದ ಉದ್ದವನ್ನು ಮತ್ತೊಮ್ಮೆ ಮೊದಲಿನಂತೆ ಮಾಡಿ ಮುಪ್ಪಡರಿದ ಜೀವಕೋಶಗಳನ್ನು ಹಿಂದಿನ ಯೌವ್ವನಾವ್ಯವಸ್ಥೆಗೆ ತರಬಲ್ಲದು.

ಡಾ|| ಹೆಸ್ಕ್ ಅವರೊಂದಿಗೆ ಸಂಶೋಧನೆಯಲ್ಲಿ ನಿರತರಾಗಿರುವ ಡಾ|| ವುಡ್‌ರಿಂಗ್ ರೈಟ್ ಮತ್ತು ಡಾ || ಚೆರಿಶೇ ಅವರುಗಳು ಈದೀಗ ಈ ಸುಪ್ತವಾದ ಜಡಾವಸ್ತೆಯ ವಂಶವಾಹಿನಿಯನ್ನು ಇನ್ನಿತರ ಜೀವಕೋಶಗಳಲ್ಲಿ ಸೇರಿಸಿ ಆ ಜೀವಕೋಶಗಳು ಹೆಪ್ಲಿಕ್, ಮಿತಿಯನ್ನು ದಾಟಿ ನಿರಂತವಾಗಿ ವಿಭಜನೆಯಾಗುವಂತೆ ಮಾಡಲಾಗಿದೆ. ಸಾವಿನ ಅಂಚಿಗೆ ಬಂದಿದ್ದ ಅಂಗಾಂಶವೊಂದರ ಜೀವಕೋಶಗಳನ್ನು ಮತ್ತೊಮ್ಮೆ ಹಿಂದಿನ ಯೌವನವಸ್ಥೆಗೆ ತರುವಲ್ಲಿ ಈ ತಂಡ ಸಂಪೂರ್ಣದಾಗಿ ಯಶಸ್ವಿಯಾಗಿದೆ. ಜೀವಕೋಶದ ಹಂತದಲ್ಲಿ ಇಂದು ಸಾಧ್ಯವಾಗಿರುವ ಅಮರತ್ವ, ಮುಂದೆ ಜೀವಿಯ ಮಟ್ಟದಲ್ಲೂ ಸಾಧ್ಯವಾಗಬಹುದು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...