Home / ಕವನ / ಕವಿತೆ / ಮಗುವಿನಂತೆ ಬಾ ಯುಗಾದಿ

ಮಗುವಿನಂತೆ ಬಾ ಯುಗಾದಿ

ಉರಿವ ಬಿಸಿಲಿನ ನಡುವೆ
ಮಾವು, ಬೇವುಗಳ ಹೂಗಂಪು
ಮುಂಜಾವಿನ ಕನಸಿನಲಿ
ಕೆಂಡ ಮಿಂದೆದ್ದ ಸೂರ್ಯ
ನಿಟ್ಟಸಿರು ಬಿಟ್ಟ ಕಣ್ಣೀರು!
ಹೊಸ ವರುಷ ಬಂದಿದೆ
ಸಾವಿನ ಸನ್ನಿಧಿಯಲ್ಲಿ
ಪತರುಗುಟ್ಟುವ ಕ್ಷಣಗಳಲ್ಲಿ
ಎಸಳು ಜೀವಗಳ ಹೊಸಕುತ್ತ
ಕನಸುಗಳ ಕನ್ನಡಿ ಚೂರುಚೂರು
ಬರುತ್ತಿದೆ ಯುಗಾದಿ
ಭೂಮಿಯ ಗರ್ಭ ಸೀಳಿ
ಅಬ್ಬರಿಸಿದ ಸುನಾಮಿ
ಕಂಪನಕೆ ನಡುಗಿದೆ ಜೀವಸಂಕುಲ
ಎದೆಯಲಿ ಕೋಲಾಹಲ

ಭಯಂಕರ ತಲ್ಲಣದ
ಕ್ಷಣದಲ್ಲಿ ಉರುಳಿದ ಮನೆ,
ಕಾರು, ರಸ್ತೆ, ಸೇತುವೆ
ಬಾಯ್ತೆರೆದ ನೆಲದಲ್ಲಿ ಹೂತು
ಲೀನವಾದ ಸೀತೆಯಂತೆ
ಮುಳುಗಿದವು ನಗರಗಳು
ಸುನಾಮಿಗೆ ಕೊಳ ತೊಡಿಸಲು
ಸುಡುವ ಕೆಂಡದ
ಭೂಮಿಯ ಒಡಲು ತಂಪಾಗಿಸಲು
ನಡೆದು ಬಂದಿತು ಯುಗಾದಿ
ನೋವಿನ ಗುಟುಕು ಗುಟುಕರಿಸುತ್ತಾ
ಕನಸಿನ ಮಹಲುಗಳ ಬಿಟ್ಟು.

ಬಿಕ್ಕುವ ಅಕ್ಷರಗಳು ಮೂಡಿದವು
ಬಿಳಿ ಕಾಗದದ ಬಂಧಿಯಾಗಿ
ಭಯಂಕರ ಅಲೆಗಳ ಅರ್ಭಟಕೆ
ಅಣು ಸ್ಥಾವರಗಳ ಸ್ಫೋಟಕೆ
ಹಡಗು ಮನೆಗಳು
ಕೊಚ್ಚಿ ಹೋದವು ಅಲೆಯಲಿ.
ಯುಗಾದಿಯೇ ಬರುವುದಾದರೆ ಬಾ
ಮೆಲ್ಲಗೆ ನನ್ನ ಕೈಬೆರಳು ಹಿಡಿದು
ನಡೆವ ಪುಟ್ಟ ಮಗುವಿನಂತೆ
ನಡೆದು ಬಾ ಹೊಸ ವರುಷವೇ
ಅಬ್ಬರಿಸಿ ಗದ್ದರಿಸದಿರು ನನಗೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...