Home / ಕವನ / ಕವಿತೆ / ವಸುವೆಂಬ ಬೆಳದಿಂಗಳ ಬಾಲೆ

ವಸುವೆಂಬ ಬೆಳದಿಂಗಳ ಬಾಲೆ

ಕಣ್ಣೆದುರೇ ನಡೆವ ಎಷ್ಟೊಂದು ಘಟನಗೆಗಳಿಗೆ
ತಲಸ್ಪರ್ಶಿ ಸ್ಪರ್ಶ, ನೋಟ, ಸಂಶೋಧಕಳಾಗುವವಳೇ
ಹೊಸದನ್ನು ಹುಡುಕಿ ಹೆಕ್ಕಿ ಉಣಬಡಿಸುವವಳೇ
ಮೃದು ಸೌಮ್ಯ ಮಾತಿನ ಮನಸು ಗೆದ್ದವಳೇ
ಇಂದೇಕೆ ಮೌನವಾಗಿ ಮಾತನಾಡದೇ ಮಲಗಿರುವೆ.

ನಿಂತ ನೀರಾಗದೇ ಸದಾ ಹರಿವ ಹೊಳೆನೀರೆ
ಎಡಪಂಥೀಯರ ನಡುವಿನ ಜನಪರದ ಮನಸೇ
ಸ್ತ್ರೀವಾದಿ, ಮಾನವೀಯ ನೆಲೆಯ ಮಾತೇ
ಕಳ್ಳುಬಳ್ಳಿಯ ಸಂಬಂಧಗಳ ದೂರ ಸರಿಸಿ
ಬಾರದ ದಾರಿಗೆ ಹೀಗೇಕೆ ಎದ್ದು ನಡೆದೆ ವಸು?

ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ಭಾಷ್ಯ ಬರೆಯಲು
ನನ್ನೊಂದಿಗೆ ನಿನ್ನ ಒಪ್ಪಂದವಾಗಿತ್ತಲ್ಲವೆ?
ನೀನು ಕೇಳಿದ ಲೇಖನ ನಾನಿನ್ನೂ ಮುಗಿಸಿಲ್ಲ
ಅರ್ಧಕ್ಕೇ ನಿಂತ ಲೇಖನ ಪೂರ್ಣವಾಗುವ ಮುನ್ನ
ಎಲ್ಲರನ್ನಗಲಿ ಹೋಗುವುದು ಸರಿಯೇ ಹೇಳು ವಸು.

ಬೇಡ ಮಾರಾಯ್ತಿ ಹೀಗೆ ಮಾಡಬೇಡ
ನಿನ್ನ ಅಸಂಖ್ಯಾತ ಗೆಳತಿ, ವಿದ್ಯಾರ್ಥಿನಿಯರಿದ್ದಾರೆ
ನಿನ್ನ ಎಷ್ಟೊಂದು ಯೋಜನೆಗಳು ಅಪೂರ್ಣವಾಗಿದೆ
ಚಲನಶೀಲ ಗತಿಯೇ ಜೀವನೋತ್ಸಾಹದ ಚಿಲುಮೆಯೇ
ಮನೆಯಲ್ಲಿ ಮಗಳು ಕಾಯುತ್ತಿದ್ದಾಳೆ ಬೇಗ ಬಾ ವಸು.

ಅರ್ಧಕ್ಕೆ ನಿಂತ ನಿನ್ನ ಶಸ್ತ್ರ ಚಿತ್ರ ಮುಗಿಸಿ
ಪೂರ್ಣಗೊಂಡು ತೆರೆಕಾಣುವ ಮುನ್ನವೇ
ಅವನಿಗೆ ವಿದಾಯ ಹೇಳುವ ಮೊದಲೇ
ನಿನ್ನ ನೂರಾರು ಕನಸುಗಳ ಮನಸಿನಲ್ಲೇ ಮುಚ್ಚಿಟ್ಟು
ಹೀಗೆ ಮರೆಯಾಗುವುದು ನ್ಯಾಯವೇ ಹೇಳು ವಸು?
*****
(ಅವನಿ ಎಂಬುದು ಡಾ.ವಸು ಅವರ ಮಗಳ ಹೆಸರು)

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...