Home / ಕವನ / ಕವಿತೆ / ವಸುವೆಂಬ ಬೆಳದಿಂಗಳ ಬಾಲೆ

ವಸುವೆಂಬ ಬೆಳದಿಂಗಳ ಬಾಲೆ

ಕಣ್ಣೆದುರೇ ನಡೆವ ಎಷ್ಟೊಂದು ಘಟನಗೆಗಳಿಗೆ
ತಲಸ್ಪರ್ಶಿ ಸ್ಪರ್ಶ, ನೋಟ, ಸಂಶೋಧಕಳಾಗುವವಳೇ
ಹೊಸದನ್ನು ಹುಡುಕಿ ಹೆಕ್ಕಿ ಉಣಬಡಿಸುವವಳೇ
ಮೃದು ಸೌಮ್ಯ ಮಾತಿನ ಮನಸು ಗೆದ್ದವಳೇ
ಇಂದೇಕೆ ಮೌನವಾಗಿ ಮಾತನಾಡದೇ ಮಲಗಿರುವೆ.

ನಿಂತ ನೀರಾಗದೇ ಸದಾ ಹರಿವ ಹೊಳೆನೀರೆ
ಎಡಪಂಥೀಯರ ನಡುವಿನ ಜನಪರದ ಮನಸೇ
ಸ್ತ್ರೀವಾದಿ, ಮಾನವೀಯ ನೆಲೆಯ ಮಾತೇ
ಕಳ್ಳುಬಳ್ಳಿಯ ಸಂಬಂಧಗಳ ದೂರ ಸರಿಸಿ
ಬಾರದ ದಾರಿಗೆ ಹೀಗೇಕೆ ಎದ್ದು ನಡೆದೆ ವಸು?

ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ಭಾಷ್ಯ ಬರೆಯಲು
ನನ್ನೊಂದಿಗೆ ನಿನ್ನ ಒಪ್ಪಂದವಾಗಿತ್ತಲ್ಲವೆ?
ನೀನು ಕೇಳಿದ ಲೇಖನ ನಾನಿನ್ನೂ ಮುಗಿಸಿಲ್ಲ
ಅರ್ಧಕ್ಕೇ ನಿಂತ ಲೇಖನ ಪೂರ್ಣವಾಗುವ ಮುನ್ನ
ಎಲ್ಲರನ್ನಗಲಿ ಹೋಗುವುದು ಸರಿಯೇ ಹೇಳು ವಸು.

ಬೇಡ ಮಾರಾಯ್ತಿ ಹೀಗೆ ಮಾಡಬೇಡ
ನಿನ್ನ ಅಸಂಖ್ಯಾತ ಗೆಳತಿ, ವಿದ್ಯಾರ್ಥಿನಿಯರಿದ್ದಾರೆ
ನಿನ್ನ ಎಷ್ಟೊಂದು ಯೋಜನೆಗಳು ಅಪೂರ್ಣವಾಗಿದೆ
ಚಲನಶೀಲ ಗತಿಯೇ ಜೀವನೋತ್ಸಾಹದ ಚಿಲುಮೆಯೇ
ಮನೆಯಲ್ಲಿ ಮಗಳು ಕಾಯುತ್ತಿದ್ದಾಳೆ ಬೇಗ ಬಾ ವಸು.

ಅರ್ಧಕ್ಕೆ ನಿಂತ ನಿನ್ನ ಶಸ್ತ್ರ ಚಿತ್ರ ಮುಗಿಸಿ
ಪೂರ್ಣಗೊಂಡು ತೆರೆಕಾಣುವ ಮುನ್ನವೇ
ಅವನಿಗೆ ವಿದಾಯ ಹೇಳುವ ಮೊದಲೇ
ನಿನ್ನ ನೂರಾರು ಕನಸುಗಳ ಮನಸಿನಲ್ಲೇ ಮುಚ್ಚಿಟ್ಟು
ಹೀಗೆ ಮರೆಯಾಗುವುದು ನ್ಯಾಯವೇ ಹೇಳು ವಸು?
*****
(ಅವನಿ ಎಂಬುದು ಡಾ.ವಸು ಅವರ ಮಗಳ ಹೆಸರು)

Tagged:

Leave a Reply

Your email address will not be published. Required fields are marked *

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೀಲಿಕರಣ: ಕಿಶೋರ್ ಚಂದ್ರ