Home / ಕವನ / ಕವಿತೆ / ಕಾಯುತ್ತೇನೆ ನಿನಗಾಗಿ

ಕಾಯುತ್ತೇನೆ ನಿನಗಾಗಿ

ಅರ್ಥವಾಗದ ಭಾಷೆಯ
ದಪ್ಪದಪ್ಪ ಧರ್ಮಗ್ರಂಥಗಳ
ಸುಮ್ಮನೆ ಒಟಗುಟ್ಟುವ ಅವನು
ಏನೋ ಸಾಧಿಸಿದಂತೆ ಬೀಗುತ್ತಾನೆ
ಸುಳ್ಳು ತೃಪ್ತಿಯ ಅಹಂಕಾರದ
ಮೂಟೆಯ ಅಂತ್ಯ ಅದರಲ್ಲೇ
ರೇಷ್ಮೆ ಹುಳುಕಟ್ಟಿದ ಗೂಡಿನಲ್ಲೇ
ದೊಡ್ಡ ದೊಡ್ಡ ಮಣ್ಣಹೆಂಟೆಗಳ
ದೂರ ದೂರಕೆ ಉರುಳಿಸಿ
ಸುಸ್ತಾಗುವುದು ಸುಮ್ಮನೆ
ಗುದ್ದಾಡಿ ಗಾಳಿಯೊಂದಿಗೆ
ಮೈ ನೋಯಿಸಿಕೊಳ್ಳುವ
ಸೆಗಣಿ ಹುಳುವಿನ ಸಾವು ನಿಶ್ಚಿತ.

ಬಳಿದು ವೈರಾಗ್ಯದ ಬೂದಿ
ಮೋಕ್ಷದ ಹಂಬಲದಲಿ
ಸಾಗಿ ಹೋದನು ಬಹುದೂರ

ಧರ್ಮ ಸನ್ನಿ ಹಿಡಿದ ಅಫೀಮು
ಏರಿದಂತೆ ವಾದಕ್ಕೆ ನಿಲ್ಲುವ
ಅವನ ಬರೀ ಮಾತು
ಪ್ರೀಯವಾಗುವುದಿಲ್ಲ ನನಗೆ
ಜಂಭದ ಕತ್ತಿಯಿಂದ
ತೊಟ್ಟಿಕ್ಕಿ ಹರಿದುಸೋರಿದ
ಮುಗ್ಧರ ಕೊರಳ ರಕ್ತ
ಸರಿಕಾಣುವುದಿಲ್ಲ ನನಗೆ
ಅವನ ಅರ್ಥವಾಗದ ನಡೆವಳಿಕೆ
ಕಠಿಣ ಬಂಡೆಯ ಹೃದಯ
ಕರಗಿ ನೀರಾಗಿ ಹರಿಯುವ ತನಕ
ತೊಟ್ಟಿರುವ ಅಹಂಕಾರದ ಪೊರೆ
ಕಳಚಿಟ್ಟು ಬರುವ ತನಕ
ಕಾಯುತ್ತೇನೆ ನಿನಗಾಗಿ
ಶುದ್ಧ ಮಾನವನಾಗುವ ತನಕ.
ಅಂಹಕಾರದ ಪೊರೆ
ಕಳಿಸುವ ತನಕ
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...