Home / ಲೇಖನ / ಇತರೆ / ಚಿಪ್ಪು ಹಂದಿ ಕತೆ

ಚಿಪ್ಪು ಹಂದಿ ಕತೆ

ದಿನಾಂಕ ೦೩-೦೮-೨೦೧೫ ರಂದು ಕರ್ನಾಟಕದ ಭಾರತೀನಗರದ ಹತ್ತಿರ ತೊರೆಚಾಕನ ಹಳ್ಳಿಯಲ್ಲಿ ಜನಜಂಗುಳಿ ಸೇರಿತ್ತು! ಜನಾನೇ ಹಾಗೆ ದನಗಳ ಹಾಗೆ…

ಬೆಳ್ಳಂಬೆಳಿಗ್ಗೆ ಎಷ್ಟೊಂದು ಜನವೋ ಜನ! ಕಾರಣ ಹಂದಿಯೊಂದು ಕಾಡಿನಿಂದ ನಾಡಿಗೆ ಬಂದು ಬಿಟ್ಟಿದೆ. ಜನ ಮುಗಿಬಿದ್ದು ನೋಡತೊಡಗಿದ್ದರು!

ಹೌದು! ಎಲ್ಲರೂ ಊರ ಹಂದಿ ನೋಡಿದ್ದರು. ಅಪರೂಪಕ್ಕೆ ಕಾಡು ಹಂದಿ ನೋಡಿದವರುಂಟು. ಇನ್ನು ಮುಳ್ಳು ಹಂದಿಯಂತೂ ಕಂಡಿರುವ ಜನರೂ ಕಡಿಮೆ. ಅದರಲ್ಲಿಯೂ ಚಿಪ್ಪು ಹಂದಿಯನ್ನು ಕಂಡವರು ವಿರಳ.

ಅಂದು- ಮಹದೇವು ಎಂಬುವರ ಮನೆಗೆ ಚಿಪ್ಪು ಹಂದಿ ನುಗ್ಗಿತ್ತು ಹಜಾರದಲ್ಲಿ ಬಂದಿತ್ತು. ಮನೆಯವರೇನು… ಎಲ್ಲರೂ ಗಾಬರಿ ಬಿದ್ದು ಓಡಿದರು!

ಅಲ್ಲೇ ಒಬ್ಬ ವ್ಯಕ್ತಿ ಪಂಜರ ತಂದು ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಬಂಧಿಸಿದ. ಎಲ್ಲರೂ ಶಹಭಾಶ್‌ ಎಂದರು. ನಿಟ್ಟೂಸಿರು ಬಿಟ್ಟರು. ಅರಣ್ಯ ಇಲಾಖೆಗೆ ಮಾಹಿತಿ ಹೋಯಿತು. ಮೊಬೈಲ್ ಇರುವುದು ಅನುಕೂಲವಾಯಿತು!

ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿತು. ಜನರಿಗೆ ಧೈರ್ಯ ಹೇಳಿದರು. “ಚಿಪ್ಪು ಹಂದಿ ಈ ಭಾಗದಲ್ಲಿ ಇದೇ ಮೊದಲ ಭಾರಿಗೆ ಕಾಣಿಸಿಕೊಂಡಿದೆ. ಇದು ಮನುಷ್ಯರಿಗೆ ತೊಂದರೆ ಮಾಡದ ಪ್ರಾಣಿ. ಇದು ಇರುವೆ, ಕೀಟಗಳು, ಶೇಂಗಾ, ಗಡ್ಡೆಗೆಣಸು, ಕಂದ ಮೂಲಗಳ ತಿಂದು ನೀರು ಕುಡಿಯುವುದು, ಆಹಾರ ನೀರು ಅರಿಸಿ ನಾಡಿಗೆ ಆಕಸ್ಮಿಕವಾಗಿ ಹಾದಿ ತಪ್ಪಿ ಬಂದಿದೆಯೆಂದು ಹೇಳಿದರಲ್ಲದೆ, ಅಲ್ಲೇ ಪಕ್ಕದೂರಾದ ಅಂತರ ಹಳ್ಳಿಯ ಗುಡ್ಡಕ್ಕೆ ಅದನ್ನು ಸುರಕ್ಷಿತವಾಗಿ ಬಿಟ್ಟು ಬಂದರು.

ಶಾಲಾ ಮಕ್ಕಳಿಗೆ, ಊರು ಕೇರಿ ಜನರಿಗೆ ಚಿಪ್ಪು ಹಂದಿ ಗಾತ್ರ ಅದರ ಕಣ್ಣು ಬಣ್ಣ ಆಕಾರ ವಿಶೇಷವಾಗಿ ಚಿಪ್ಪಿನಿಂದ ಕೂಡಿದ ಶರೀರ ಕಂಡು ವಿಸ್ಮಯಗೊಂಡರು. ಜನರೇ ಹಾಗೆ ಎಂದೂ ನೋಡದವರ ಹಾಗೆ…

ಹೌದು! ಶತ್ರುಗಳಿಂದ ರಕ್ಷಿಸಿಕೊಳ್ಳಲು ಅದಕ್ಕೆ ಚಿಪ್ಪು ವರವಾಗಿದೆ. ಏಕೆಂದರೆ ಚಿಪ್ಪು ಮಿರಮಿರ ಮಿಂಚುತ್ತಿದ್ದು ನೋಡಲು ಸೋಜಿಗವೆನಿಸುವುದು. ಇಲ್ಲಿನ ಜನರ ನಾಲಿಗೆ ಮೇಲೆ ಎರಡು ಮೂರು ದಿನ ಚಿಪ್ಪು ಹಂದಿ ನಲಿನಲಿದು ಹೋಯಿತು! ಚಿಪ್ಪು ಹಂದಿಯ ಅದೃಷ್ಟವೋ… ಜನರ ಅದೃಷ್ಟವೋ… ಅಂತೂ ಇಂತೂ ಕಾಲ ಜಿಗಿಯಿತು!
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...