Home / ಲೇಖನ / ಇತರೆ / ಚಿಪ್ಪು ಹಂದಿ ಕತೆ

ಚಿಪ್ಪು ಹಂದಿ ಕತೆ

ದಿನಾಂಕ ೦೩-೦೮-೨೦೧೫ ರಂದು ಕರ್ನಾಟಕದ ಭಾರತೀನಗರದ ಹತ್ತಿರ ತೊರೆಚಾಕನ ಹಳ್ಳಿಯಲ್ಲಿ ಜನಜಂಗುಳಿ ಸೇರಿತ್ತು! ಜನಾನೇ ಹಾಗೆ ದನಗಳ ಹಾಗೆ…

ಬೆಳ್ಳಂಬೆಳಿಗ್ಗೆ ಎಷ್ಟೊಂದು ಜನವೋ ಜನ! ಕಾರಣ ಹಂದಿಯೊಂದು ಕಾಡಿನಿಂದ ನಾಡಿಗೆ ಬಂದು ಬಿಟ್ಟಿದೆ. ಜನ ಮುಗಿಬಿದ್ದು ನೋಡತೊಡಗಿದ್ದರು!

ಹೌದು! ಎಲ್ಲರೂ ಊರ ಹಂದಿ ನೋಡಿದ್ದರು. ಅಪರೂಪಕ್ಕೆ ಕಾಡು ಹಂದಿ ನೋಡಿದವರುಂಟು. ಇನ್ನು ಮುಳ್ಳು ಹಂದಿಯಂತೂ ಕಂಡಿರುವ ಜನರೂ ಕಡಿಮೆ. ಅದರಲ್ಲಿಯೂ ಚಿಪ್ಪು ಹಂದಿಯನ್ನು ಕಂಡವರು ವಿರಳ.

ಅಂದು- ಮಹದೇವು ಎಂಬುವರ ಮನೆಗೆ ಚಿಪ್ಪು ಹಂದಿ ನುಗ್ಗಿತ್ತು ಹಜಾರದಲ್ಲಿ ಬಂದಿತ್ತು. ಮನೆಯವರೇನು… ಎಲ್ಲರೂ ಗಾಬರಿ ಬಿದ್ದು ಓಡಿದರು!

ಅಲ್ಲೇ ಒಬ್ಬ ವ್ಯಕ್ತಿ ಪಂಜರ ತಂದು ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಬಂಧಿಸಿದ. ಎಲ್ಲರೂ ಶಹಭಾಶ್‌ ಎಂದರು. ನಿಟ್ಟೂಸಿರು ಬಿಟ್ಟರು. ಅರಣ್ಯ ಇಲಾಖೆಗೆ ಮಾಹಿತಿ ಹೋಯಿತು. ಮೊಬೈಲ್ ಇರುವುದು ಅನುಕೂಲವಾಯಿತು!

ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿತು. ಜನರಿಗೆ ಧೈರ್ಯ ಹೇಳಿದರು. “ಚಿಪ್ಪು ಹಂದಿ ಈ ಭಾಗದಲ್ಲಿ ಇದೇ ಮೊದಲ ಭಾರಿಗೆ ಕಾಣಿಸಿಕೊಂಡಿದೆ. ಇದು ಮನುಷ್ಯರಿಗೆ ತೊಂದರೆ ಮಾಡದ ಪ್ರಾಣಿ. ಇದು ಇರುವೆ, ಕೀಟಗಳು, ಶೇಂಗಾ, ಗಡ್ಡೆಗೆಣಸು, ಕಂದ ಮೂಲಗಳ ತಿಂದು ನೀರು ಕುಡಿಯುವುದು, ಆಹಾರ ನೀರು ಅರಿಸಿ ನಾಡಿಗೆ ಆಕಸ್ಮಿಕವಾಗಿ ಹಾದಿ ತಪ್ಪಿ ಬಂದಿದೆಯೆಂದು ಹೇಳಿದರಲ್ಲದೆ, ಅಲ್ಲೇ ಪಕ್ಕದೂರಾದ ಅಂತರ ಹಳ್ಳಿಯ ಗುಡ್ಡಕ್ಕೆ ಅದನ್ನು ಸುರಕ್ಷಿತವಾಗಿ ಬಿಟ್ಟು ಬಂದರು.

ಶಾಲಾ ಮಕ್ಕಳಿಗೆ, ಊರು ಕೇರಿ ಜನರಿಗೆ ಚಿಪ್ಪು ಹಂದಿ ಗಾತ್ರ ಅದರ ಕಣ್ಣು ಬಣ್ಣ ಆಕಾರ ವಿಶೇಷವಾಗಿ ಚಿಪ್ಪಿನಿಂದ ಕೂಡಿದ ಶರೀರ ಕಂಡು ವಿಸ್ಮಯಗೊಂಡರು. ಜನರೇ ಹಾಗೆ ಎಂದೂ ನೋಡದವರ ಹಾಗೆ…

ಹೌದು! ಶತ್ರುಗಳಿಂದ ರಕ್ಷಿಸಿಕೊಳ್ಳಲು ಅದಕ್ಕೆ ಚಿಪ್ಪು ವರವಾಗಿದೆ. ಏಕೆಂದರೆ ಚಿಪ್ಪು ಮಿರಮಿರ ಮಿಂಚುತ್ತಿದ್ದು ನೋಡಲು ಸೋಜಿಗವೆನಿಸುವುದು. ಇಲ್ಲಿನ ಜನರ ನಾಲಿಗೆ ಮೇಲೆ ಎರಡು ಮೂರು ದಿನ ಚಿಪ್ಪು ಹಂದಿ ನಲಿನಲಿದು ಹೋಯಿತು! ಚಿಪ್ಪು ಹಂದಿಯ ಅದೃಷ್ಟವೋ… ಜನರ ಅದೃಷ್ಟವೋ… ಅಂತೂ ಇಂತೂ ಕಾಲ ಜಿಗಿಯಿತು!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...