Home / ಲೇಖನ / ಇತರೆ / ಚಿಪ್ಪು ಹಂದಿ ಕತೆ

ಚಿಪ್ಪು ಹಂದಿ ಕತೆ

ದಿನಾಂಕ ೦೩-೦೮-೨೦೧೫ ರಂದು ಕರ್ನಾಟಕದ ಭಾರತೀನಗರದ ಹತ್ತಿರ ತೊರೆಚಾಕನ ಹಳ್ಳಿಯಲ್ಲಿ ಜನಜಂಗುಳಿ ಸೇರಿತ್ತು! ಜನಾನೇ ಹಾಗೆ ದನಗಳ ಹಾಗೆ…

ಬೆಳ್ಳಂಬೆಳಿಗ್ಗೆ ಎಷ್ಟೊಂದು ಜನವೋ ಜನ! ಕಾರಣ ಹಂದಿಯೊಂದು ಕಾಡಿನಿಂದ ನಾಡಿಗೆ ಬಂದು ಬಿಟ್ಟಿದೆ. ಜನ ಮುಗಿಬಿದ್ದು ನೋಡತೊಡಗಿದ್ದರು!

ಹೌದು! ಎಲ್ಲರೂ ಊರ ಹಂದಿ ನೋಡಿದ್ದರು. ಅಪರೂಪಕ್ಕೆ ಕಾಡು ಹಂದಿ ನೋಡಿದವರುಂಟು. ಇನ್ನು ಮುಳ್ಳು ಹಂದಿಯಂತೂ ಕಂಡಿರುವ ಜನರೂ ಕಡಿಮೆ. ಅದರಲ್ಲಿಯೂ ಚಿಪ್ಪು ಹಂದಿಯನ್ನು ಕಂಡವರು ವಿರಳ.

ಅಂದು- ಮಹದೇವು ಎಂಬುವರ ಮನೆಗೆ ಚಿಪ್ಪು ಹಂದಿ ನುಗ್ಗಿತ್ತು ಹಜಾರದಲ್ಲಿ ಬಂದಿತ್ತು. ಮನೆಯವರೇನು… ಎಲ್ಲರೂ ಗಾಬರಿ ಬಿದ್ದು ಓಡಿದರು!

ಅಲ್ಲೇ ಒಬ್ಬ ವ್ಯಕ್ತಿ ಪಂಜರ ತಂದು ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಬಂಧಿಸಿದ. ಎಲ್ಲರೂ ಶಹಭಾಶ್‌ ಎಂದರು. ನಿಟ್ಟೂಸಿರು ಬಿಟ್ಟರು. ಅರಣ್ಯ ಇಲಾಖೆಗೆ ಮಾಹಿತಿ ಹೋಯಿತು. ಮೊಬೈಲ್ ಇರುವುದು ಅನುಕೂಲವಾಯಿತು!

ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿತು. ಜನರಿಗೆ ಧೈರ್ಯ ಹೇಳಿದರು. “ಚಿಪ್ಪು ಹಂದಿ ಈ ಭಾಗದಲ್ಲಿ ಇದೇ ಮೊದಲ ಭಾರಿಗೆ ಕಾಣಿಸಿಕೊಂಡಿದೆ. ಇದು ಮನುಷ್ಯರಿಗೆ ತೊಂದರೆ ಮಾಡದ ಪ್ರಾಣಿ. ಇದು ಇರುವೆ, ಕೀಟಗಳು, ಶೇಂಗಾ, ಗಡ್ಡೆಗೆಣಸು, ಕಂದ ಮೂಲಗಳ ತಿಂದು ನೀರು ಕುಡಿಯುವುದು, ಆಹಾರ ನೀರು ಅರಿಸಿ ನಾಡಿಗೆ ಆಕಸ್ಮಿಕವಾಗಿ ಹಾದಿ ತಪ್ಪಿ ಬಂದಿದೆಯೆಂದು ಹೇಳಿದರಲ್ಲದೆ, ಅಲ್ಲೇ ಪಕ್ಕದೂರಾದ ಅಂತರ ಹಳ್ಳಿಯ ಗುಡ್ಡಕ್ಕೆ ಅದನ್ನು ಸುರಕ್ಷಿತವಾಗಿ ಬಿಟ್ಟು ಬಂದರು.

ಶಾಲಾ ಮಕ್ಕಳಿಗೆ, ಊರು ಕೇರಿ ಜನರಿಗೆ ಚಿಪ್ಪು ಹಂದಿ ಗಾತ್ರ ಅದರ ಕಣ್ಣು ಬಣ್ಣ ಆಕಾರ ವಿಶೇಷವಾಗಿ ಚಿಪ್ಪಿನಿಂದ ಕೂಡಿದ ಶರೀರ ಕಂಡು ವಿಸ್ಮಯಗೊಂಡರು. ಜನರೇ ಹಾಗೆ ಎಂದೂ ನೋಡದವರ ಹಾಗೆ…

ಹೌದು! ಶತ್ರುಗಳಿಂದ ರಕ್ಷಿಸಿಕೊಳ್ಳಲು ಅದಕ್ಕೆ ಚಿಪ್ಪು ವರವಾಗಿದೆ. ಏಕೆಂದರೆ ಚಿಪ್ಪು ಮಿರಮಿರ ಮಿಂಚುತ್ತಿದ್ದು ನೋಡಲು ಸೋಜಿಗವೆನಿಸುವುದು. ಇಲ್ಲಿನ ಜನರ ನಾಲಿಗೆ ಮೇಲೆ ಎರಡು ಮೂರು ದಿನ ಚಿಪ್ಪು ಹಂದಿ ನಲಿನಲಿದು ಹೋಯಿತು! ಚಿಪ್ಪು ಹಂದಿಯ ಅದೃಷ್ಟವೋ… ಜನರ ಅದೃಷ್ಟವೋ… ಅಂತೂ ಇಂತೂ ಕಾಲ ಜಿಗಿಯಿತು!
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...