Home / ಕವನ / ಕವಿತೆ / ಸಾವಿನ ಮಳೆ ಸೂತಕ

ಸಾವಿನ ಮಳೆ ಸೂತಕ

ಹೌದು!
ಅಲ್ಲೀಗ ಸಾವಿನದೇ ಸುದ್ದಿ
ಸ್ತಬ್ಧವಾಗಿದೆ ಬದುಕು
ಮಳೆಯ ಅಬ್ಬರದ್ದೇ ಸದ್ದು
ಸಿಡಿಲು ಮಳೆಗೆ ಬಿದ್ದ ಗೋಡೆ
ಕೆಳಗೆ ಸಿಲುಕಿದವರೆಷ್ಟು?
ಸತ್ತವರ ಸಂಖ್ಯೆ ಲೆಕ್ಕವಿಟ್ಟವರಾರು?

ಕಡಲ ತಟದ ಅಲೆಗಳು
ಮುನಿದು ರೊಚ್ಚಿನಿಂದ ಅಪ್ಪಳಿಸಿ
ಕೊಚ್ಚಿಹೋದ ಮನೆಗಳೆಷ್ಟು?
ಕೆರೆಕೋಡಿ ಒಡೆದು ರಭಸದಿಂದ
ನುಗ್ಗಿದ ನೀರು ಉರುಳಿಸಿದ
ಗುಡಿಸಲುಗಳ ಲೆಕ್ಕವಿಟ್ಟವರಾರು?

ಬರದ ನಾಡಲಿ ಸುರಿದ
ಸಾವಿನ ಮಳೆ ಅರ್ಭಟಕ
ಬಡವರ ಬದುಕು ಅಸ್ತವ್ಯಸ್ತ
ಮನೆಯೊಳಗೆ ಮಲಗಿದ ಮಗು
ತಣ್ಣನೆಯ ಕ್ರೂರ ಸಾವಿಗೆ
ಕೊಚ್ಚಿ ಹರಿದು ಹೋದದ್ದು
ಅರಿವಿಗೆ ಬಂದಾಗ ಕೈಮೀರಿತ್ತು

ಊರು ಕೇರಿಗಳೀಗ
ಚಿಕ್ಕ ಚಿಕ್ಕ ದ್ವೀಪಗಳು, ಅಲ್ಲೀಗ
ಮಸಣ ಮೌನದ್ದೇ ಕಾರುಭಾರು
ನಾಳೆಯ ಭರವಸೆಯಿಲ್ಲ
ಅನ್ನ ನೀರಿಲ್ಲದೆ ನಡುಗಡ್ಡೆ ಊರಲ್ಲಿ
ಸಾಂಕ್ರಾಮಿಕ ರೋಗಗಳದ್ದೇ ಕೈಮೇಲು
ನಡುಗಡ್ಡೆಯಲಿ ನರಳುವವರ
ಕೈಹಿಡಿದು ಮೇಲೆತ್ತಲಾರದ?
ವಿಧೀಯ ಅಟ್ಟಹಾಸ.

ಮಳೆರಾಯನ ಮುನಿಸಿಗೆ
ಪ್ರಕೃತಿಯ ರೌದ್ರಾವತಾರ
ನಲುಗಿದ ಜನಜೀವನ ತಲ್ಲಣ.
ಕಿತ್ತುಹೋದ ಸಂಪರ್ಕ ಸೇತುಗಳು,
ಸರ್ಕಾರದ ಪರಿಹಾರವಿನ್ನೂ
ಕನ್ನಡಿಯೊಳಗಿನ ಗಂಟು
ಸಂತ್ರಸ್ಥರ ಕೈಗೆ ಹೇಗೆ ಸಿಕ್ಕೀತು?
ಭರವಸೆಯ ಮಾತುಗಳು
ಬಿದ್ದಗೋಡೆಗಳಡಿಯಲ್ಲಿ ಶವವಾದವರು
ಅವರೆಂದೂ ಬಾರದ ದಾರಿಯಲಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...