Home / ಕವನ / ಕವಿತೆ / ಸಾವಿನ ಮಳೆ ಸೂತಕ

ಸಾವಿನ ಮಳೆ ಸೂತಕ

ಹೌದು!
ಅಲ್ಲೀಗ ಸಾವಿನದೇ ಸುದ್ದಿ
ಸ್ತಬ್ಧವಾಗಿದೆ ಬದುಕು
ಮಳೆಯ ಅಬ್ಬರದ್ದೇ ಸದ್ದು
ಸಿಡಿಲು ಮಳೆಗೆ ಬಿದ್ದ ಗೋಡೆ
ಕೆಳಗೆ ಸಿಲುಕಿದವರೆಷ್ಟು?
ಸತ್ತವರ ಸಂಖ್ಯೆ ಲೆಕ್ಕವಿಟ್ಟವರಾರು?

ಕಡಲ ತಟದ ಅಲೆಗಳು
ಮುನಿದು ರೊಚ್ಚಿನಿಂದ ಅಪ್ಪಳಿಸಿ
ಕೊಚ್ಚಿಹೋದ ಮನೆಗಳೆಷ್ಟು?
ಕೆರೆಕೋಡಿ ಒಡೆದು ರಭಸದಿಂದ
ನುಗ್ಗಿದ ನೀರು ಉರುಳಿಸಿದ
ಗುಡಿಸಲುಗಳ ಲೆಕ್ಕವಿಟ್ಟವರಾರು?

ಬರದ ನಾಡಲಿ ಸುರಿದ
ಸಾವಿನ ಮಳೆ ಅರ್ಭಟಕ
ಬಡವರ ಬದುಕು ಅಸ್ತವ್ಯಸ್ತ
ಮನೆಯೊಳಗೆ ಮಲಗಿದ ಮಗು
ತಣ್ಣನೆಯ ಕ್ರೂರ ಸಾವಿಗೆ
ಕೊಚ್ಚಿ ಹರಿದು ಹೋದದ್ದು
ಅರಿವಿಗೆ ಬಂದಾಗ ಕೈಮೀರಿತ್ತು

ಊರು ಕೇರಿಗಳೀಗ
ಚಿಕ್ಕ ಚಿಕ್ಕ ದ್ವೀಪಗಳು, ಅಲ್ಲೀಗ
ಮಸಣ ಮೌನದ್ದೇ ಕಾರುಭಾರು
ನಾಳೆಯ ಭರವಸೆಯಿಲ್ಲ
ಅನ್ನ ನೀರಿಲ್ಲದೆ ನಡುಗಡ್ಡೆ ಊರಲ್ಲಿ
ಸಾಂಕ್ರಾಮಿಕ ರೋಗಗಳದ್ದೇ ಕೈಮೇಲು
ನಡುಗಡ್ಡೆಯಲಿ ನರಳುವವರ
ಕೈಹಿಡಿದು ಮೇಲೆತ್ತಲಾರದ?
ವಿಧೀಯ ಅಟ್ಟಹಾಸ.

ಮಳೆರಾಯನ ಮುನಿಸಿಗೆ
ಪ್ರಕೃತಿಯ ರೌದ್ರಾವತಾರ
ನಲುಗಿದ ಜನಜೀವನ ತಲ್ಲಣ.
ಕಿತ್ತುಹೋದ ಸಂಪರ್ಕ ಸೇತುಗಳು,
ಸರ್ಕಾರದ ಪರಿಹಾರವಿನ್ನೂ
ಕನ್ನಡಿಯೊಳಗಿನ ಗಂಟು
ಸಂತ್ರಸ್ಥರ ಕೈಗೆ ಹೇಗೆ ಸಿಕ್ಕೀತು?
ಭರವಸೆಯ ಮಾತುಗಳು
ಬಿದ್ದಗೋಡೆಗಳಡಿಯಲ್ಲಿ ಶವವಾದವರು
ಅವರೆಂದೂ ಬಾರದ ದಾರಿಯಲಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...