Home / ಕವನ / ಕವಿತೆ / ಅಣಬೆ

ಅಣಬೆ

            ೧
ತನಸು ತಿರೆಯ ತೀಡಿಬರಲು
ಬನಪನಾಂತು ಮೂಡಿ ಬರುವ
ಮನಕೆ ಮಾಟಮಾಡಿ ಕಾ೦ಬ
ಅಣಬೆ ಚೆಲುವ ಕಳೆಯಕೀರಿ ಹೊಳೆಯುತಿರುವುದು
ತಳಿರಜೊಂಪನಳಿವಸೊ೦ಪ ತಿಳಿಸುತ್ತಿರುವುದು
ಬಾನಮೇಲೆ ತೇಲಿಕಾಂಬ
ಬಾನಗೊಡೆಯ ಕೋಲ ಕಾಣೆ
ಕ್ಷೋಣಿಗದುವೆ ಮಾಣದೆಂದು
ಕ೦ಬದಿ೦ಬನೊ೦ದಿ ಬಾನಸೊಂಪನೀವೆಯ
ಕುಂದದಿರ್ದ ಚಂದ್ರಬಿ೦ಬದಿ೦ಪನೀವೆಯ
ನೀರನೆಲೆಯ ತೆರೆಯ ಮೇಲೆ
ಸರಿದು ಸರಿದು ಸುಳಿಯುತಿರುವ
ಪರಮ ಸಿರಿಯ ತಿರೆಗೆ ತರುವ
ಬುರುಗಿನಿರವ ತೋರಿಯೆನ್ನ ಕುಣಿಸುತಿರುವೆಯ
ಪರಮಹರುಷವಿತ್ತು ಮನಕೆ ತಣಿಸುತಿರುವೆಯ
ಚ೦ಚರೀಕತತಿಯಣಂಬೆ
ಮಿಂಚಿನಂಥ ಮೈಯಸಿರಿಗೆ
ಸಂಚರಿಸದ ಸಂಚನೋಡೆ
ಮೂಸದಿರ್ದ ಪುಷ್ಪವಾಗಿ ವಸುಧೆಗೆಸೆವುದು
ವಾಸನಾರುಚಿಯ ಜನವು ಮೂಸಿ ತಿಳಿಯದು
ತಿಳಿಯದಂತೆ ತೆರಳಿ ಬಂದು
ಬಾಳ ಬಳಗ ಬಳಸಿ ತಾಳಿ
ಹಾಲುತಿವೆ ಹಾಲುಹೊಲದೆ
ಕಾಲಕಳೆವ ಕಳೆಯ ಕಂಡು ಹಿಗ್ಗುತಿರ್ದೆನು
ಕೀಳುಮೇಲು ಭಾವಗಳನು ಧೂಳಿಗೊಟ್ಟೆನು
ದೇವಗಂಗೆ ತಂಪಿನ ಗಿರಿಯ
ಸೇವೆಯಿಂದ ಸಾಗಿ ಮೊರೆಯೆ
ಭಾವಗೀತೆಯಲ್ಲಿ ಏಳ್ವ
ನೊರೆಯ ಸಿರಿಯ ಪರಿಯ ತೋರಿ ಮರುಕವೀವೆಯ
ಪರಮಗಂಗ ತವರ ತೊರೆವ ಪರಿಯ ತೋರ್ಪೆಯ
ಬಾಲತನದ ಲೀಲೆಯಲ್ಲಿ
ಕಾಲ ಕಳೆದ ಸಮಯದಲ್ಲಿ
ಅಣಬೆ ನಿಲಯದಲ್ಲಿ ಮೊಳೆಯೆ
ಲಗುನೆ ಜನಕ ಮನೆಯ ತಾನೆ ಬಿಡಿಸಿಬಿಟ್ಟನು
ಹೈಗನಾಡ ನಾಡನುಡಿಯ ನಡಿಸಿಬಿಟ್ಟನು
ವಸುಧೆಯಲ್ಲಿ ಜನುಮ ಬರುವ
ಬಿಸಜಸುತನ ವಸ್ತುರಾಶಿ
ಬಸಗೆವರೆಯೆ ಮಸಗುತಿರಲು
ಕೀಳುಮೇಲು ಕೆಳಗೆ ಮೇಲೆಯೆಂಬುದರಿಯೆನು
ತುಲನೆಮಾಳ್ಪ ಕಳೆಯ ಕೊಳೆಯ ತಿಳಿಯದಿರುವೆನು
*****
Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್