Home / ಕವನ / ಕವಿತೆ / ಅಣಬೆ

ಅಣಬೆ

            ೧
ತನಸು ತಿರೆಯ ತೀಡಿಬರಲು
ಬನಪನಾಂತು ಮೂಡಿ ಬರುವ
ಮನಕೆ ಮಾಟಮಾಡಿ ಕಾ೦ಬ
ಅಣಬೆ ಚೆಲುವ ಕಳೆಯಕೀರಿ ಹೊಳೆಯುತಿರುವುದು
ತಳಿರಜೊಂಪನಳಿವಸೊ೦ಪ ತಿಳಿಸುತ್ತಿರುವುದು
ಬಾನಮೇಲೆ ತೇಲಿಕಾಂಬ
ಬಾನಗೊಡೆಯ ಕೋಲ ಕಾಣೆ
ಕ್ಷೋಣಿಗದುವೆ ಮಾಣದೆಂದು
ಕ೦ಬದಿ೦ಬನೊ೦ದಿ ಬಾನಸೊಂಪನೀವೆಯ
ಕುಂದದಿರ್ದ ಚಂದ್ರಬಿ೦ಬದಿ೦ಪನೀವೆಯ
ನೀರನೆಲೆಯ ತೆರೆಯ ಮೇಲೆ
ಸರಿದು ಸರಿದು ಸುಳಿಯುತಿರುವ
ಪರಮ ಸಿರಿಯ ತಿರೆಗೆ ತರುವ
ಬುರುಗಿನಿರವ ತೋರಿಯೆನ್ನ ಕುಣಿಸುತಿರುವೆಯ
ಪರಮಹರುಷವಿತ್ತು ಮನಕೆ ತಣಿಸುತಿರುವೆಯ
ಚ೦ಚರೀಕತತಿಯಣಂಬೆ
ಮಿಂಚಿನಂಥ ಮೈಯಸಿರಿಗೆ
ಸಂಚರಿಸದ ಸಂಚನೋಡೆ
ಮೂಸದಿರ್ದ ಪುಷ್ಪವಾಗಿ ವಸುಧೆಗೆಸೆವುದು
ವಾಸನಾರುಚಿಯ ಜನವು ಮೂಸಿ ತಿಳಿಯದು
ತಿಳಿಯದಂತೆ ತೆರಳಿ ಬಂದು
ಬಾಳ ಬಳಗ ಬಳಸಿ ತಾಳಿ
ಹಾಲುತಿವೆ ಹಾಲುಹೊಲದೆ
ಕಾಲಕಳೆವ ಕಳೆಯ ಕಂಡು ಹಿಗ್ಗುತಿರ್ದೆನು
ಕೀಳುಮೇಲು ಭಾವಗಳನು ಧೂಳಿಗೊಟ್ಟೆನು
ದೇವಗಂಗೆ ತಂಪಿನ ಗಿರಿಯ
ಸೇವೆಯಿಂದ ಸಾಗಿ ಮೊರೆಯೆ
ಭಾವಗೀತೆಯಲ್ಲಿ ಏಳ್ವ
ನೊರೆಯ ಸಿರಿಯ ಪರಿಯ ತೋರಿ ಮರುಕವೀವೆಯ
ಪರಮಗಂಗ ತವರ ತೊರೆವ ಪರಿಯ ತೋರ್ಪೆಯ
ಬಾಲತನದ ಲೀಲೆಯಲ್ಲಿ
ಕಾಲ ಕಳೆದ ಸಮಯದಲ್ಲಿ
ಅಣಬೆ ನಿಲಯದಲ್ಲಿ ಮೊಳೆಯೆ
ಲಗುನೆ ಜನಕ ಮನೆಯ ತಾನೆ ಬಿಡಿಸಿಬಿಟ್ಟನು
ಹೈಗನಾಡ ನಾಡನುಡಿಯ ನಡಿಸಿಬಿಟ್ಟನು
ವಸುಧೆಯಲ್ಲಿ ಜನುಮ ಬರುವ
ಬಿಸಜಸುತನ ವಸ್ತುರಾಶಿ
ಬಸಗೆವರೆಯೆ ಮಸಗುತಿರಲು
ಕೀಳುಮೇಲು ಕೆಳಗೆ ಮೇಲೆಯೆಂಬುದರಿಯೆನು
ತುಲನೆಮಾಳ್ಪ ಕಳೆಯ ಕೊಳೆಯ ತಿಳಿಯದಿರುವೆನು
*****
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...