ನೊಣ

ಕೆಲಸ ಬೊಗಸೆ ಮುಗಿಸಿ ನಾನು
ಬಯಲ ಬೆಳಕ ಬಯಸಿ ನಾನು
ದೇವರೊಲುಮೆಗೆಳಸಿ ನಾನು
ದಿನವು ದಿನವು ಬೆಳಗಿನಲ್ಲಿ ಮನೆಯ ಬಿಡುವೆನು
ಕುಣಿವ ಕುಲಮನಗಳಿಂದ ತಣಿಯುತಿರುವೆನು
ಮಾನ ಧನದ ಪ್ರಾಣಿಯೊಂದು
ಸೇನೆ ಸೇರಿ ಸರಗಿ ಒಂದು
ಶಿರದ ಮೇಲೆ ಸೆಣಸಿ ನಿಂದು
ಕಿರಿದು ನಾದ ಬೀರಿ ನನ್ನ ತಲುಬುತಿರುವುದು
ಬರಿದೆ ಬೆದರ ತೋರೆ ನಾನು ಬೆದರದಿರುವುದು
ಮೈಲು ಮೈಲು ಮೈಲು ಮತ್ತೆ
ಮೈಲ ಮೂರ ಮುಗಿಸಿ ನಿಂದೆ
ಮೈಲನಾರ ಬಳಸಿ ಬ೦ದೆ
ತಲೆಯ ಬಳಿಸಿ ವಲಯಗಟ್ಟಿ ತೇಲುತಿರುವುದು
ಛಲದ ಪಂಥಪಾಡುಗಳನ್ನು ಪಾಡುತಿರುವುದು
ಮಾಡಲೇನು ಮೊಟ್ಟ ಮೊದಲು
ಸಿಟ್ಟಿನಿ೦ದ ಬಿಟ್ಟು ಬಿಡದೆ
ಪೆಟ್ಟನಿತ್ತು ಬಟ್ಟೆಗೆಡಿಸೆ
ರೊಚ್ಚಿನಿಂದ ತುಚ್ಛಮಾಡಿ ಮುಚ್ಚಿಬರುವುದು
ಬಿಚ್ಚಿ ಬಿಚ್ಚಿ ಬೀರ ಸಿರಿಯ ಪೆರ್ಚಿ ತೋರ್ಪುದು
ನಿಲ್ಲು ನಿಲ್ಲು ಬಲ್ಲೆ ನಿನ್ನ
ಭುಲ್ಲವಿಸುತಲೇರಿ ಬರುವ
ಮಲ್ಲಯುದ್ಧ ಹೊಲ್ಲೆನೆಂದು
ಕೊಡೆಯ ಕೋಲ ಕೈದಿನಿಂದೆ ಕಾದುತಿರ್ದೆನು
ಕದನದಿಂಪು ಕದಲದಂತೆ ತೋರಿಸೆಂದೆನು
ಪ್ರಾಣಿ ಸಣ್ಣದಾದರೇನು
ಪ್ರಾಣ ತೊರೆವ ಸಿರಿಯನರಿಯೆ
ಕ್ಷೋಣಿಯಲ್ಲಿ ಎಣೆಯ ಕಾಣೆ
ನಾಣಿನಿಂದ ಶಿರವ ನಾನೆ ಮಣಿಸುತಿರ್ದೆನು
ಕಣದೆ ವೀರಜೋವಿ ಸಿರಿಯನರಿಯುತಿರ್ದೆನು
ಹೆರರ ಸೀಮೆ ನರರು ಸೇರೆ
ಹರಿದು ಹಾಯ್ದ ಹದನವರಿಯೆ
ಹಿರಿದು ಕಿರಿದು ಮಾತದಲ್ಲ
ಸಣ್ಣ ನೊಣವು ಬಣ್ಣಗೆಡದೆ ತನ್ನ ಸೀಮೆಯ
ಸಾರಿ ದೂರಿ ಪೂರೆದ ಸಿರಿಯ ದಾಸನರಿವನೆ
ದಾಸನಾದೆನೆಂತೊ ನಾನು
ನೀತಿ ಶಾಸ್ತ್ರ ಓದಿನೋಡೆ
ಮಾತೆ ಬಾರದಕಟ ದೇವ
ನಾಡವಾಭಿಮಾನರಾಜತೇಜವಡಗಲು
ನಾಡಿನಲ್ಲಿ ಹೇಡಿತನವು ಬೀಡುಗೊ೦ಡಿತು
ಹನಿಯು ಬೀಳೆ ಹುಟ್ಟಿ ಬೆಳೆದು
ಮನೆಯ ಮಾಡಿ ಹುಲ್ಲಿನಲ್ಲಿ
ಜಡಿಯ ಮಳೆಯು ಜಡಿದು ಬೀಳೆ
ಬಿಸಿಯ ಬಿಸಿಲು ವಸುಧೆಗೇರ ನಶಿಸಿಪೋಪುದು
ಹಸರು ಹಸಿಯ ಹುಲ್ಲಿನೊಡನೆ ಬಸೆದು ಬರುವುದು
೧೦
ಬದುಕಿ ಬಾಳ್ವ ಕಾಲ ಕಡಿಮೆ
ಯಾಗಿ ಇಳೆಯೊಳಳಿದರೇನು
ಗಳಿಗೆ ಹೊತ್ತು ಬೆಳಕು ತೋರಿ
ತನುವ ಸದೆಗೆ ಸಾಟಿಮಾಡಿ ಮಡಿವುದೈಸಲೆ
ಜನಪದಸ್ಯ ಸೇವೆಗಿಂತ ಸಾವು ಲೇಸಲೆ
೧೧
ಹರೆಯ ರಕುತ ಹಾರಿ ಹರಿದ
ಧರೆಯ ಸಿರಿಯ ತರುಣರೆಲ್ಲ
ವೀರ ನರವ ಮಿಡಿಸಿ ನುಡಿಸೆ
ನಾಡ ಸಿರಿಯ ನಾಡಿನಲ್ಲಿ ಹಾಡಿ ಬರುವುದು
ನಾಡ ದಾಸತನದ ಬೇಡಿ ಹಾದಿ ಹಿಡಿವುದು
*****
Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...