ನೊಣ

ಕೆಲಸ ಬೊಗಸೆ ಮುಗಿಸಿ ನಾನು
ಬಯಲ ಬೆಳಕ ಬಯಸಿ ನಾನು
ದೇವರೊಲುಮೆಗೆಳಸಿ ನಾನು
ದಿನವು ದಿನವು ಬೆಳಗಿನಲ್ಲಿ ಮನೆಯ ಬಿಡುವೆನು
ಕುಣಿವ ಕುಲಮನಗಳಿಂದ ತಣಿಯುತಿರುವೆನು
ಮಾನ ಧನದ ಪ್ರಾಣಿಯೊಂದು
ಸೇನೆ ಸೇರಿ ಸರಗಿ ಒಂದು
ಶಿರದ ಮೇಲೆ ಸೆಣಸಿ ನಿಂದು
ಕಿರಿದು ನಾದ ಬೀರಿ ನನ್ನ ತಲುಬುತಿರುವುದು
ಬರಿದೆ ಬೆದರ ತೋರೆ ನಾನು ಬೆದರದಿರುವುದು
ಮೈಲು ಮೈಲು ಮೈಲು ಮತ್ತೆ
ಮೈಲ ಮೂರ ಮುಗಿಸಿ ನಿಂದೆ
ಮೈಲನಾರ ಬಳಸಿ ಬ೦ದೆ
ತಲೆಯ ಬಳಿಸಿ ವಲಯಗಟ್ಟಿ ತೇಲುತಿರುವುದು
ಛಲದ ಪಂಥಪಾಡುಗಳನ್ನು ಪಾಡುತಿರುವುದು
ಮಾಡಲೇನು ಮೊಟ್ಟ ಮೊದಲು
ಸಿಟ್ಟಿನಿ೦ದ ಬಿಟ್ಟು ಬಿಡದೆ
ಪೆಟ್ಟನಿತ್ತು ಬಟ್ಟೆಗೆಡಿಸೆ
ರೊಚ್ಚಿನಿಂದ ತುಚ್ಛಮಾಡಿ ಮುಚ್ಚಿಬರುವುದು
ಬಿಚ್ಚಿ ಬಿಚ್ಚಿ ಬೀರ ಸಿರಿಯ ಪೆರ್ಚಿ ತೋರ್ಪುದು
ನಿಲ್ಲು ನಿಲ್ಲು ಬಲ್ಲೆ ನಿನ್ನ
ಭುಲ್ಲವಿಸುತಲೇರಿ ಬರುವ
ಮಲ್ಲಯುದ್ಧ ಹೊಲ್ಲೆನೆಂದು
ಕೊಡೆಯ ಕೋಲ ಕೈದಿನಿಂದೆ ಕಾದುತಿರ್ದೆನು
ಕದನದಿಂಪು ಕದಲದಂತೆ ತೋರಿಸೆಂದೆನು
ಪ್ರಾಣಿ ಸಣ್ಣದಾದರೇನು
ಪ್ರಾಣ ತೊರೆವ ಸಿರಿಯನರಿಯೆ
ಕ್ಷೋಣಿಯಲ್ಲಿ ಎಣೆಯ ಕಾಣೆ
ನಾಣಿನಿಂದ ಶಿರವ ನಾನೆ ಮಣಿಸುತಿರ್ದೆನು
ಕಣದೆ ವೀರಜೋವಿ ಸಿರಿಯನರಿಯುತಿರ್ದೆನು
ಹೆರರ ಸೀಮೆ ನರರು ಸೇರೆ
ಹರಿದು ಹಾಯ್ದ ಹದನವರಿಯೆ
ಹಿರಿದು ಕಿರಿದು ಮಾತದಲ್ಲ
ಸಣ್ಣ ನೊಣವು ಬಣ್ಣಗೆಡದೆ ತನ್ನ ಸೀಮೆಯ
ಸಾರಿ ದೂರಿ ಪೂರೆದ ಸಿರಿಯ ದಾಸನರಿವನೆ
ದಾಸನಾದೆನೆಂತೊ ನಾನು
ನೀತಿ ಶಾಸ್ತ್ರ ಓದಿನೋಡೆ
ಮಾತೆ ಬಾರದಕಟ ದೇವ
ನಾಡವಾಭಿಮಾನರಾಜತೇಜವಡಗಲು
ನಾಡಿನಲ್ಲಿ ಹೇಡಿತನವು ಬೀಡುಗೊ೦ಡಿತು
ಹನಿಯು ಬೀಳೆ ಹುಟ್ಟಿ ಬೆಳೆದು
ಮನೆಯ ಮಾಡಿ ಹುಲ್ಲಿನಲ್ಲಿ
ಜಡಿಯ ಮಳೆಯು ಜಡಿದು ಬೀಳೆ
ಬಿಸಿಯ ಬಿಸಿಲು ವಸುಧೆಗೇರ ನಶಿಸಿಪೋಪುದು
ಹಸರು ಹಸಿಯ ಹುಲ್ಲಿನೊಡನೆ ಬಸೆದು ಬರುವುದು
೧೦
ಬದುಕಿ ಬಾಳ್ವ ಕಾಲ ಕಡಿಮೆ
ಯಾಗಿ ಇಳೆಯೊಳಳಿದರೇನು
ಗಳಿಗೆ ಹೊತ್ತು ಬೆಳಕು ತೋರಿ
ತನುವ ಸದೆಗೆ ಸಾಟಿಮಾಡಿ ಮಡಿವುದೈಸಲೆ
ಜನಪದಸ್ಯ ಸೇವೆಗಿಂತ ಸಾವು ಲೇಸಲೆ
೧೧
ಹರೆಯ ರಕುತ ಹಾರಿ ಹರಿದ
ಧರೆಯ ಸಿರಿಯ ತರುಣರೆಲ್ಲ
ವೀರ ನರವ ಮಿಡಿಸಿ ನುಡಿಸೆ
ನಾಡ ಸಿರಿಯ ನಾಡಿನಲ್ಲಿ ಹಾಡಿ ಬರುವುದು
ನಾಡ ದಾಸತನದ ಬೇಡಿ ಹಾದಿ ಹಿಡಿವುದು
*****
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...