ಬರೆದವರು: Thomas Hardy / Tess of the d’Urbervilles
ಮಲ್ಲಿಯು ಏನು ಮಾಡಿದರೂ ಪುಂಸವನವನ್ನು ಒಪ್ಪಳು.
” ಆಗಲ್ಲಿ ಪುಂಸವನಮಾಡಿ, ಆಮೇಲೆ ನನ್ನ ಗರ್ಭದಲ್ಲಿ ರುವ ಮಗು ಗಂಡಾಗಿಹೋಗಲಿ. ಅದೆಲ್ಲಾ ಕೂಡದು. ನನಗೆ ಹೆಣ್ಣೇ ಆಗಬೇಕು.” ಎನ್ನುವಳು.
ನಾಯಕನು “ಶಾಸ್ತ್ರ ಅಂದರೆ ಶಾಸ್ತ. ಮಾಡಿಕೊಳ್ಳಲಿ ಹೋಗು, ಹೆಣ್ಣೇ ! ನಿನಗೆ ಅದರಿಂದ ನಷ್ಟವೇನು ?? ಎಂದು ಒಂದು ಸಲ ಗದರಿಸಿಕೊಂಡನು.
ಮಲ್ಲಿಯು ಶಾಂತಚಿತ್ತಳಾಗಿ, “ಗಂಡು ದೊಡ್ಡಮ್ಮನವರ ಹೊಟ್ಟೇಲೇ ಆಗಬೇಕು.” ಎಂದಳು. ಅವಳು ಸಮಾಧಾನವಾಗಿ ಹೇಳಿದ ಉತ್ತರ ನಾಯಕನನ್ನು ಸುಮ್ಮನೆ ಇರುವಂತೆ ಮಾಡಿತು.
ಮಲ್ಲಿಗೆ ಆರುತಿಂಗಳು ತುಂಬಿತು : ಸೀಮಂತವಾಯಿತು : ಬಳೆ ತೊಡಿಸುವ ಶಾಸ್ತ್ರವಾಯಿತು. ಮೊಗ್ಗು ಮುಡಿಸಿಯಾಯಿತು ; ಆನಂದಮ್ಮನು ಚಿನ್ನದ ಮೊಗ್ಗು ಮಾಡಿಸಿಕೊಟ್ಟಳು. ಆ ದಿನ ರಾತ್ರಿ ಹುರುಕಲು ಚಕ್ಕುಲಿ ಆರತಿಯೂ ಆಯಿತು.
ಮಲ್ಲಿ ತೆಳ್ಳಗಾಗಿದ್ದಾಳೆ. ಅದೇನು ಗರ್ಭದ ಫಲವೋ ? ಅಥವಾ ಅವಳು ಮಾಡುತ್ತಿರುವ ವ್ರತಾದಿಗಳ ಮಹಿಮೆಯೋ ? ಯಾರೂ ಹೇಳಲಾರರು. ವಾರಕ್ಕೊಂದು ಸಲ ಡಾಕ್ಟರು ಬಂದು ನೋಡಿಕೊಂಡು ಹೋಗುತ್ತಾರೆ.
ಏಳನೆಯ ತಿಂಗಳೂ ಕಳೆಯಿತು. ಎಂಟನೆಯ ತಿಂಗಳಲ್ಲಿ ಹತಾತ್ತಾಗಿ ನೋವು ಕಾಣಿಸಿತು. ಡಾಕ್ಟರ್, ಮಿಡ್ವೈಫ್ ಎಲ್ಲರೂ ಬಂದರು. ಒಂದು ದಿನ ನೋವು ತಿಂದು ಮಲ್ಲಿಯು ಹೆತ್ತಳು. ಹೆಣ್ಣು ಮಗು. ನಾಯಕನ ತದ್ರೂಪು. ಉದ್ದುದ್ದವಾದ ಕೈಕಾಲು, ದೊಡ್ಡ ಕಣ್ಣು, ಎತ್ತರವಾದ ಹಣೆ, ಸೊಗಸಾದ ಮೂಗು ಬಾಯಿ, ಮಗು ನಿಜವಾಗಿ ಚೆಲುವಾಗಿದೆ. ಅದು ಅತ್ತರೆ ಅದರ ದನಿ ಕೂಡ ನಾಯಕ ನಂತೆ ! ಎಲ್ಲರಿಗೂ “ಹೆಣ್ಣು ಬೊಮಟೆ. ಬಿಡು? ಎಂದು ತಿರಸ್ಕಾರ ವಾದರೆ ಮಲ್ಲೀಗೆ ಬಹಳ ಸಂತೋಷ.
ಮಗು ಬಾಣಂತಿ ಆರೋಗ್ಯವಾಗಿದ್ದಾರೆ. ಆದರೆ ಎಂಟನೆಯ ತಿಂಗಳು. ಅದೊಂದೇ ಯೋಚನೆ.
ಜೋಯಿಸರನ್ನು ಕರೆಸಿ ತೋರಿಸಿದರು. ಅವರು ” ಒಂದು ತಿಂಗಳು ಕಳೆಯಲಿ ಆಮೇಲೆ ಜಾತಕ ಬರೆಯೋಣ’ ಎಂದರು. ಆದರೆ ಅದನ್ನು ಯಾರೂ ಮಲ್ಲೀಗೆ ಹೇಳಲಿಲ್ಲ.
ಮಲ್ಲಿ ಏಕಾಂತದಲ್ಲಿ ಆ ಮಗುವನ್ನು ಮಗ್ಗುಲಲ್ಲಿ ಮಲಗಿಸಿ ಕೊಳ್ಳುತ್ತಾಳೆ, ಅದು ಮೊಲೆ ಚೀಪುತ್ತದೆ. ಸಣ್ಣ ಬೊಮಟೆ. ಅದನ್ನು ಅಲ್ಲಾಡದ ಹಾಗೆ ಹಿಡಿದುಕೊಳ್ಳುತ್ತಾಳೆ. ಹಚ್ಚಡ ಹೊಚ್ಚು ತ್ತಾಳೆ ಅವಳಿಗೆ ಸೋಜಿಗ. ರಸಫಲವನ್ನು ಪಡೆಯಬೇಕು ಎಂದೇ ಏನು ಸತಿಯು ಸತಿಯನ್ನು ಹೊಂದುವುದು ? ಈ ಬೊಮ್ಮಟೆ ಹೊಟ್ಟೆಯೊಳಗೆ ಹತ್ತಿ ಕಾಳಿನಷ್ಟು. ಆದಾಗಿನಿಂದ ಮನಸ್ಸಿಗೆ ಅದೆಷ್ಟು ಉತ್ಸಾಹ? ಬೆಳೆದು ಹೊಟ್ಟಯ ತುಂಬ ಆಗಿ, ಎದ್ದು ಓಡಾಡುವುದಕ್ಕೆ ತೊಂದರೆಯಾದಾಗಲೂ ಏನೋ ಹಿತ! ಹೆಣ್ಣಾಗಿ ಹುಟ್ಟುವುದು ಬ್ರಹ್ಮನು ಹೆಣ್ಣನ್ನು ಹುಟ್ಟಿಸಿರುವುದು ಈ ಒಂದು ಕಾರ್ಯಕ್ಕಾಗಿ ಏನು? ಈ ಹೆಣ್ಣು ಕಾಯಲೆಂದು ಭೋಗದಲ್ಲಿ ಆಸೆಯೇ ? ಎಂದು ಏನೇನೋ ಯೋಚನೆಗಳು. ಇವಳು ಶಾಂತವಾಗಿರಲಿ, ಗದ್ದಲವಿಲ್ಲದಿರಲಿ ಎಂದು ಎಲ್ಲರೂ ಇವಳನ್ನು ಪ್ರತ್ಯೇಕವಾಗಿ ಮಲಗಿಸಿದ್ದಾರೆ. ಹೊರಗಿನ ಸದ್ದು ಗದ್ದಲ ಇಲ್ಲದಹಾಗೆ ಆದಂತೆಲ್ಲ ಇವಳ ಯೋಚನೆಗಳು ತಾವೇ ತಾನಾಗುತ್ತವೆ, ” ಮೇಷ್ಟ್ರು ಬಂದು ನೋಡಿದರೆ ಏನು ಹೇಳುವರು ? ಇವಳನ್ನು ಬೆಳೆಸುವುದು ಹೇಗೆ ? ಗಾಂಧಿಯವರ ಆಶ್ರಮಕ್ಕೆ ತಾನು ಹೋದರೆ ಅಲ್ಲಿ ಬೆಟ್ಟ ಹತ್ತುವವನ ಮೂಟೆಯಹಾಗೆ ಇದನ್ನು ಕಟ್ಟಿಕೊಂಡು ಹೋಗುವುದೇ ? ತಾನೂ ಮೇಷ್ಟ್ರ ಹಾಗೆ ಏಕೆ ಇರ ಬಾರದು ? ಅದು ಸಾಧ್ಯವೆ ? ಮುಂದಕ್ಕಾದರೂ ತಾನೇಕೆ ಹಾಗೆ ಇರಬಾರದು ? ಆದರೆ ಬುದ್ಧಿಯವರು ಒಪ್ಪಿದರೆ ಅಲ್ಲವೆ ತಾನು ಹಾಗೆ ಇರಲು ಸಾಧ್ಯ ? ತನಗೇನೋ ತೃಪ್ತಿಯಾಗಿದೆ. ಆದಕ್ಕೆ ಅವರು! ಈ ಜನ್ಮದಲ್ಲಿ ಅವರನ್ನು ತೃಪ್ತಿಗೊಳಿಸುವುದೊಂದೇ ತನ್ನ ಕೆಲಸ!
” ಹಾಗಾದರೆ ತನಗೆ ಬೇರೆ ಕೆಲಸವೇ ಇಲ್ಲವೆ? ಗಂಡನ ಮಗ್ಗಲು ಬೊಂಬೆಯಾಗಿ, ಮತ್ತೊಂದು ಬದುಕಿದ ಬೊಂಬೆಯನ್ನು ಎತ್ತಿ ಕೊಂಡರೆ ಆಯಿತೆ ? ಬೊಂಬೆ, ಬೊಂಬೆ, ಇದಿಷ್ಟೇ ಏನು ಹೆಣ್ಣಿನ ಕೆಲಸ! ಇನ್ನೇನಿದೆ? ಪೂರ್ವ ವಯಸ್ಸಿನಲ್ಲಿ ಹೆತ್ತವರ ಕೈಗೊಂಬೆ! ಯೌವನದಲ್ಲಿ ಗಂಡಿನ ಕೈ ಗೊಂಬೆ. ನಡುವಯಸ್ಸಿನಲ್ಲಿ ಬೊಂಬೆಗಳ ನ್ನಿಟ್ಟುಕೊಂಡು ಆಡುವವರ ಮಾನಿಟರ್ ಬೊಂಬೆ ! ಮುದಿತನದಲ್ಲಿ ಮ್ಯಾನೇಜರ್ ಬೊಂಬೆ ! ಇಷ್ಟೇನೇ ಹೆಣ್ಣಿನ ಜೀವನ ?
” ಆನಂದಮ್ಮನಿಗೆ ಮಕ್ಕಳಿಲ್ಲ. ಅಂದರೆ ಆನಂದಮ್ಮನಿಗೆ ಬೊಂಬೆಯ ಜೀವನವಿಲ್ಲ. ಆಕೆ ಸುಖವಾಗಿದ್ದಾಳೆಯೇ? ಆಕೆಯನ್ನು ತಾನು ನೋಡುತ್ತಿದ್ದಾಳೆ, ಬೆಳಗೆದ್ದು ಧ್ಯಾನಕ್ಕೆ ಕೂರುತ್ತಾಳೆ. ಆ ಧ್ಯಾನಜೀವನ ಈ ಬೊಂಬೆಯ ಜೀವಕ್ಕಿಂತ ಉತ್ತಮವೇ? ಅದರಿಂದ ಏನಾಗುತ್ತದೆ? ಈ ಹೊಲಮನೆಕಳೆದಮೇಲೆ ಆಕೆಯ ಬಳಿ ಈ ಧ್ಯಾನ ಜೀವನದ ಮಾತು ಎತ್ತಬೇಕು. ಅದಷ್ಟು ರುಚಿ ನೋಡೋಣ. ಈಗ ಈ ಬೊಂಬೆಯನ್ನೆತ್ತಿಕೊಂಡಾಗಲೆಲ್ಲ ಈ ಬೊಮಟಿಯಿಂದ ಇವರ ಅಪ್ಪನ ನೆನೆಪಾಗುನಂತೆ, ಧ್ಯಾನ ಜೀವನದಲ್ಲಿ ದೇವರ ನೆನೆಪಾಗುವು ದೇನೋ ಅದನ್ನೂ ನೋಡೋಣ.
“ಅಂತೂ ಜೀವನದ ವಿಚಾರ, ಜೀವನದ ಧ್ಯೇಯದ ವಿಚಾರ, ಮೇಷ್ಟ್ರನ್ನು ಕೇಳಬೇಕು. ಗಾಂಧಿಯವರು ಒಂದು ವಿಧವಾಗಿ ಹೇಳಿ ದ್ದಾರೆ: ಗೀತೆಯ ಶ್ಲೋಕಗಳನ್ನು ಮುಂದಿಟ್ಟಿದ್ದಾರೆ. ಅವರ ಜೀವ ನದ ಧ್ಯೇಯ ಅದೇ ಏನು? ತಿಲಕರು ಸ್ವರಾಜ್ಯ ಬಂದರೆ ಮ್ಯಾಥ್ ಮಾಟಿಕ್ಸ್ ಪ್ರೊಫೆಸರ್ ಆಗುತ್ತೇನೆ ಅಂದಿದ್ದರು. ಗಾಂಧಿಯವರು ಏನಾ ಗುವರು?’
ಎಂದು ಏನೇನೋ ಯೋಚನೆ. ಜೊತೆಯಲ್ಲಿ ಮಗಳನ್ನು ಏನು ಮಾಡಬೇಕು? ಎಂದು ಬೇರೆ ಯೋಚನೆ. “ಹುಚ್ಚಿ ಇನ್ನೂ ಎರಡು ದಿನ ಇಲ್ಲ. ಈಗೇಕೆ ಆ ಯೋಚನೆ?’ ಎಂದು ಅದಕ್ಕೆ ಸಮಾಧಾನ.
ಆಗಾಗ ಅವಳಿಗೆ ತನ್ನ ತತ್ವಗಳ ನೆನಪಾಗುವುದು. ತಾನು ಕಲಿತ ಕೀರ್ತನೆಗಳ ನೆನಪಾಗುವುದು. ಓದಿದ ಪುಸ್ತಕಗಳಲ್ಲಿರುವ ಘನ ವಿಷಯಗಳ ನೆನಪಾಗುವುದು. ಅವನ್ನೆಲ್ಲ ವಿಮರ್ಶಿಸಲು ಅವಕಾಶ ಸಿಕ್ಕಿರಲಿಲ್ಲ. ಈ ಹತ್ತು ದಿವಸ ತಾನೇತಾನಾಗಿದ್ದುಕೊಂಡು, ಮನ ಸ್ಸಿಗೆ ಬಂದವನ್ನೆಲ್ಲ ಪುನರಾವೃತ್ತಿ ಮಾಡುತ್ತಿದ್ದಾಳೆ: ಯಾವ ತತ್ವ ನೆನೆಪಾದರೂ ಆದರಲ್ಲಿ ದೇಹ ಶಾಶ್ವತವಲ್ಲ: ಸಂಸಾರ ದುಃಖ. ಇದು ಬಿಡು, ಆತ್ಮನನ್ನು ಹಿಡಿ ಎನ್ನುವ ಅರ್ಥ. ಅವಳಿಗೆ ಅದೊಂದೂ ಅರ್ಥ ವಾಗುವುದಿಲ್ಲ. ನಾಯಕನಂತಹ ಗಂಡ ಇರುವಾಗ ಸಂಸಾರ ದುಃಖ ವೆಂದರೇನು? ಏಕೆ ಇದನ್ನು ಬಿಡಬೇಕು? ಆತ್ಮನನ್ನು ಅವಳು ತಿಳಿ ಯಳು. ಅದನ್ನು ಹಿಡಿದು ಆಗಬೇಕೇನು?
ಕೀರ್ತನೆಗಳು ಅರ್ಥವಾಗುತ್ತವೆ. ಅವೆಲ್ಲ ತನಗೆ ಬೇಕಾದ ದೇವರನ್ನು ಕುರಿತು ಭಕ್ತನಾಡಿಕೊಂಡ ಮಾತುಗಳು. ಅವಳು ದೇವರೆ ಪೂಜೆ ಮಾಡುತ್ತಾಳೆ. ಇದುವರೆಗೆ ದೇವರು ಬೇಕು ಬೇಡವನ್ನುವಂತಿತ್ತು. ಆದರೆ, ಅಹರ್ನಿಶಿ ದೇವರನ್ನು ಚಿಂತಿಸುವುದಕ್ಕೆ ಅವಳಿಗೆ ಪುರಸತ್ತಿಲ್ಲ.
ಇನ್ನು ದೊಡ್ಡವರ ಮಾತು. ಅವಳಿಗೆ ಅವರ ಡೊಡ್ಡತನದಲ್ಲಿ ನಂಬಿಕೆಯಿದೆ : ಆಡರೆ, ಅವರು ಹೇಳಿರುವುದರಲ್ಲಿ ಅಷ್ಟು ನಂಬಿಕೆಯಿಲ್ಲ: ಅವರು ತನ್ನ ಹಾಗೆ ಇದ್ದರೆ ಆ ಮಾತು ಹೇಳುತ್ತಿದ್ದರೇನು? ಸುಖ ಕಂಡಿದ್ದರೆ, ಅದರಲ್ಲಿ ಮುಳುಗಿದ್ದರೆ ಅವರು ಆ ಮಾತು ಹೇಳುತ್ತಿದ್ದ ರೇನು? ಅವಳಿಗೆ ಅದು ಸಂಶಯ.
ಹೀಗೆಯೇ ಹತ್ತುದಿನ ಕಳೆಯಿತು. ದಿನವೂ ನಾಯಕನು ಬಂದು “ಏನು ಮಗಳು ಏನಂತಾಳೆ?” ಎನ್ನುವನು. “ತಾವು ಎತ್ತಿ ಕೊಳ್ಳಬೇಕಂತೆ?” ಎನ್ನುತ್ತಾಳೆ. ತಾವು ಏನಂತೀರಿ ಎಂದರೆ, “ಎಷ್ಟು ಬೇಗ” ಈ ಹತ್ತುದಿನ ಕಳೆದೀತೋ?” ಎನ್ನತ್ತಾಳೆ. ನಾಯಕನಿಗೆ ಆ ಮಾತು ಕೇಳಿ ಎಷ್ಟೋ ಸಂತೋಷ. ಅವನಿಗೆ ಆ ಮಾತಿನಲ್ಲಿ ಏನೇನೋ ಅರ್ಥವಾಗುತ್ತದೆ.
ಒಂದು ಮಾತಿಗೆ ಹತ್ತು ಅರ್ಥ ಮಾಡುವುದೇ ರಸಿಕತನ. ಒಂದು ಮಾತಿಗೆ ಒಂದೇ ಅರ್ಥ ಎನ್ನುವುದು ಶಾಸ್ತ್ರದಲ್ಲಿ ಇರಬಹುದು. ಆದರೆ ಜೀವನದಲ್ಲಿ ಯಾವ ಮಾತೇ ಆಗಲಿ, ಅದು ಅರ್ಥ ಮಾಡುವವರ ವಶ. ಹಾಗಿಲ್ಲದಿದ್ದರೆ, ಉಪನಿಷತ್ತಿನಲ್ಲಿ ಆ ಕಥೆಯೇಕೆ ಬರಬೇಕು? ದೇವತೆಗಳು ದಾನವರು, ಮಾನನರು, ಮೂವರಿಗೂ ಪ್ರಜಾಪತಿಯು “ದಂ” ಎಂದು ಒಂದೇ ಉಪಪದೇಶಮಾಡಿದನಂತೆ. ಅದು ಒಬ್ಬೊಬ್ಬರಿಗೆ ಒಂದೊಂದು ವಿಧವಾಗಿ ಅರ್ಥವಾಯಿತಂತೆ.
ಈ ಲೋಕವೂ ಹಾಗೆಯೇ ಇರಬೇಕು. ಎಲ್ಲರಿಗೂ ಒಂದೇ ಗುರಿ ಏನ್ನುವುದು ಆಡುವುದಕ್ಕೆ ಸೊಗಸು. ಆದರೆ ಭಿನ್ನರುಚಿಗಳಾದ ಮಾನವರಿಗೆ ತೆಲೆಗೆಲ್ಲಾ ಒಂದು ಮಂತ್ರ ಎನ್ನುವುದಕ್ಕಿಂತ, ತಲೆಗೊಂದು ಮಂತ್ರ ಎಂಬುದೇ ಸರಿಯಿರಬೇಕು.
ಅಂತೂ ಹತ್ತುದಿನ ಕಳೆಯಿತು. ಮಂಗಳಸ್ನಾನವಾಯಿತು, ಮಗುವಿಗೆ ನಾಮಕರಣವಾಯಿತು.
ಹದಿಮೂರನೆಯದಿನ ಮಗುವಿಗೆ ಸಣ್ಣಗೆ ಜ್ವರಬಂತು. ಮಲ್ಲೀಗೆ ಏನೋ ಗಾಬರಿ. ಡಾಕ್ಟರು ಬಂದು ನೋಡಿದರು. ಏನೂ ದಿಗಿಲಿಲ್ಲ ಎಂದು ನಂಬಿಕೆ ಕೊಟ್ಟರು. ಅವರು ನಂಬಿಕೆ ಕೊಟ್ಟರು ಎಂದೇ ಏನೋ ಜ್ವರ ರೇಗಿತು. ಮೂರು ದಿನ ಬಿಡದೆ ಜ್ವರಕಾಯುತ್ತಿದೆ. ಮಲ್ಲೀಗೆ ನಿದ್ದೆಯಿಲ್ಲ. ನರ್ಸು ಬಂದಿದ್ದಾಳೆ. ಆಗಾಗ ಆನಂದಮ್ಮ ನೋಡಿಕೊಂಡು ಹೋಗುತ್ತಾರೆ. ಇತರರು ಬೇಡವೆನ್ನುತ್ತಿದ್ದರೂ ಮಲ್ಲಿ ಮಗುವಿನ ಮಗ್ಗುಲು ಬಿಟ್ಟು ಕದಲುವುದಿಲ್ಲ. ಅಲ್ಲೇ ಅವಳಿಗೆ ಊಟವಾಗುತ್ತದೆ.
ರಾಣಿಯಂತೂ “ಹಸೀಮೈ ನೋಡಿ ಆನಂದಮ್ಮನವರೆ? ಇವ ಳಿಗೆ ನಿದ್ದೆ ಕೆಟ್ಟರೆ ಅದೀತೆ?” ನನ್ನುತ್ತಾಳೆ. ಆದರೂ ಇದುವರೆಗೂ ಮಲ್ಲಿ ರಾಣಿಯ ಮಾತು ಮೀರದವಳು, ಈಗ ಲಕ್ಷ್ಯವೇ ಕೊಡುವುದಿಲ್ಲ. ಆ ಮಗುವಿನಲ್ಲಿ ತನ್ನ ಪಂಚ ಪ್ರಾಣವೂ ನೆಲಸಿರುವಂತೆ ವರ್ತಿಸುತ್ತಿ ದ್ದಾಳೆ.
ಅವಳಿಗೇ ಆಶ್ಚರ್ಯ ಇದುವರೆಗೆ ಇಲ್ಲದ ಹೊಸದೊಂದು ವಿಶ್ವಾಸ ಕೆಂದ್ರ ಮೊಳೆತಿದೆ. ಅದು ಕ್ಷಣೇಕ್ಷಣೇ ಬೆಳೆಯುತ್ತಿದೆ. ಅದು ಕ್ರಮ ಕ್ರಮವಾಗಿ ಅವಳ ಜೀವನವನ್ನೆಲ್ಲಾ ವ್ಯಾಪಿಸುವುದೋ? ನಾಯಕ ನಂತಹ ಗಂಡನನ್ನು, ರಾಣಿಯಂತಹ ಅಕ್ಕನನ್ನು, ಆನಂದಮ್ಮನಂತ ಹಿರಿಯಳನ್ನು. ಮೇಷ್ಟರನ್ನು, ಕೊನೆಗೆ ತನ್ನ ಗುರುವಿನಂತಿರುವ ಗಾಂಧಿಯವರಿನ್ನು, ಎಲ್ಲರನ್ನೂ ಮರೆಸುವುದೋ?
ಏನೋ? ಎಂತೋ? ಅಂತು ಅವಳು ಮಗುವನ್ನು ಒಂದು ಗಳಿಗೆ ಬಿಟ್ಟಿರಲಾರಳು. ಥರ್ಮಾಮೀಟರ್ ಹಾಕಿ ನೋಡುತ್ತಾಳೆ. ಅದೂ ಗಳ ಒಂದೊಂದು ಸಲ. ಜ್ವರ ಒಂದೇ ಸಮನಾಗಿದೆ. ಅವಳಿಗೆ ಥರ್ಮಾಮೀಟರ್ ಸರಿಯಿಲ್ಲವೇನೋ ಎನ್ಸಿಸಿತು. ಒಂದು ಡರ್ಜ ಥರ್ಮಾಮೀಟರ್ಗಳನ್ನು ತರಿಸಿದಳು. ಅವೂ ಒಂದೇ ರೀಡಿಂಗ್ ಕೊಟ್ಟುವು.
ಜ್ವರ ಬಂದು ಇಂದಿಗೆ ಐದುದಿನ. ಡಾಕ್ಟರು ಬೆಳಗಿನಿಂದ ಮೂರು ಸಲ ಬಂದಿದ್ದಾರೆ. ತಾಯಿ ಹಾಲು ಕೂಡದು ಎಂದಿದ್ದಾರೆ. ಅವಳಿಗೆ ಹಾಲುಕಟ್ಟಿ ಬೇರೆ ಬಾಧೆಯಾಗಿದೆ.
ನರ್ಸ್ ಮಗುವನ್ನು ಸರ್ಪಕಾವಲಾಗಿ ಕಾಯುತ್ತಿದ್ದಾಳೆ.
ಆ ದಿನ ಮಗುವಿಗೆ ಬಹಳ ಕಷ್ಟವಾಗಿದೆ.
ಡಾಕ್ಟರ್ ಪಟ್ಟ ಕಷ್ಟವೆಲ್ಲಾ ವ್ಯರ್ಥವಾದಂತಿದೆ.
ಆರನೆಯದಿನ. ಬೆಳೆಗಿನಝಾನ, ನಾಲ್ಕು ದಿನದಿಂದ ನಿದ್ದೆ ಕಾಣದೆ, ಕಣ್ಣು ಮುಚ್ಚದೆ ಕಾದುಕುಳಿತಿದ್ದ ಮಲ್ಲೀಗೆ ಎಲ್ಲೋ ಸಣ್ಣಗೆ ನಿದ್ದೆ ಬಂದಂತಿದೆ. ಆ ನಿದ್ದೆಯಲ್ಲಿ ಕನಸು. ಯಾರೋಬಂದು ಮಗು ವನ್ನು ಮಲ್ಲಿಯ ಕೈಯಿಂದ ಕಿತ್ತುಕೊಂಡು ಹೋದ ಹಾಗಾಗುತ್ತದೆ. ಹಾ! ಎಂದು ಕೂಗಿಕೊಂಡು ಏಳುತ್ತಾಳೆ.
ಇನ್ನೊಂದು ಗಳಿಗೆ. ಮಲ್ಲಿಯು ಅಯ್ಯೋ ಎಂದು ಅತ್ತಳು. ಎಲ್ಲರೂ ಬಂದರು.
*****
ಮುಂದುವರೆಯುವುದು