Home / ಕವನ / ಕವಿತೆ / ಮಿಥಿಲೆಯ ಸೀತೆಯರು

ಮಿಥಿಲೆಯ ಸೀತೆಯರು

ಭಾಗ ೧

ಕೂಗಬೇಕೆಂದರೆ ಹಾಳಾದ್ದು
ಧ್ವನಿಯೇ ಹೊರಡುತ್ತಲಿಲ್ಲ
ಧ್ವನಿಪೆಟ್ಟಿಗೆ ಸ್ಟ್ರಕ್ ಆಯಿತೇ?
ಒಡಲಾಳದಲ್ಲಿ ಹುಗಿದಿಟ್ಟ
ಅದೆಷ್ಟೋ ಇತಿಹಾಸದ ಪುಟಗಳು
ತೊಟ್ಟ ದಾಗೀನ ಆಭರಣ ಸಹಿತ
ಸಂಸ್ಕೃತಿಯ ಗೋರಿಯೊಳಕ್ಕೆ
ತನ್ನ ತಾನೇ ಹುಗಿದುಕೊಂಡು
ಮುಳ್ಳುಬೇಲಿಯ ಬಿಗಿದುಕೊಂಡು
ಆಳಕ್ಕಿಳಿದು ಬೇರುಬಿಟ್ಟ ಆಲ
ಹರಡಬಹುದೆ ಒಂದೊಂದೆ ಬಿಳಲುಗಳ?
ಮಿಥಿಲೆಯ ಸೀತೆಯರಿಗೆ
ಹಸಿರು ಹಂದರದ ಬಿಳಲು
ನೇಣಿಗೇರಲು ಕುಣಿಕೆಯಾದೀತೆ?
ನೂರು ಕನಸಿನ ಕೌದಿ ಹೊದ್ದು
ಒಳಗೆ ಮಿಡುಕಿದ ಸಂಕಟ,
ಚಿತ್ಕಾರಗಳಿಗೆ ಧ್ವನಿಯಾದೀತೇ?
ಬೊಡ್ಡೆ ಗಂಟು ಚಿಗುರೋಡೆದು
ಹೊಸಕಿದ ಕನಸಿನ ಹಂದರದಲ್ಲಿ
ವಸಂತ ಮರುಕಳಿಸೀತೇ?

ಭಾಗ ೨

ಕೊರಳಿಗೆ ಉರುಳಾದ ಬಿಳಲುಗಳ
ಒಂದೊಂದೇ ಸಿಕ್ಕು ಬಿಡಿಸಿ
ದುಃಶ್ಯಾಸನರ ಕೈಗೆ ಸಿಕ್ಕರೂ
ಬೆತ್ತಲಾಗದ ದ್ರೌಪದಿಯರು.
ಹೆಬ್ಬೆರಳಿನಿಂದ ನಡುನೆತ್ತಿಯವರೆಗೆ
ಶಕ್ತಿ ಕ್ರೂಢೀಕರಿಸಿ, ಮುಷ್ಟಿಬಿಗಿಮಾಡಿ
ಅಡ್ಡಲಾದ ಗೋಡೆಗಳ ಪುಡಿಮಾಡಿ
ಸಮುದ್ರದಲ್ಲಿ ಮುಳುಗಿ
ಆತ್ಮಹತ್ಯೆಗೆ ಯತ್ನಿಸಿದ ಸೂರ್‍ಯನ
ಮತ್ತೆ ಮತ್ತೆ ಹುಟ್ಟಿ ಬರುವಂತೆ ಮಾಡಿದ
ಮಿಥಿಲೆಯ ಸೀತೆಯರ ದಂಡು
ಬೀಳಲುಗಳ ಜೋಕಾಲಿ ಹೊಸೆದು
ಆ ದಿಗಂತದಿಂದ ಈ ದಿಗಂತದವರೆಗೆ
ಆಕಾಶ ಭೂಮಿ ಒಂದಾಗುವಂತೆ
ಜೀಕುತ್ತಿದ್ದಾರೆ ಜೋಕಾಲಿ,
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...