Home / ಲೇಖನ / ವಿಜ್ಞಾನ / ಕೃತಕ ಮಾನವ ಸೃಷ್ಟಿ

ಕೃತಕ ಮಾನವ ಸೃಷ್ಟಿ

ವಿಜ್ಞಾನಿಗಳು ಇಷ್ಟರಲ್ಲಿಯೇ ಮಾನವನ ಜಿನ್ಸ್‌ಗಳನ್ನು ಅಧ್ಯಯನ ಮಾಡಿ ಅವುಗಳ ಒಂದು ಬೃಹತ್ ಸಂಗ್ರಹಾಲಯವನ್ನು ನಿರ್ಮಿಸಬಹುದು. ಈ ಜಿನ್ಸ್ ಸಂಗ್ರಹಾಲಯದಲ್ಲಿ ಪ್ರತಿಯೊಂದು ಜಿನ್ಸ್‌ಗಳ ವಿವರಗಳಿದ್ದು ಯಾವ ಜಿನ್ಸ್ ಯಾವ ಕಾರ್‍ಯಕ್ಕೆ ಯೋಗ್ಯ? ಜೀವಿಗಳಲ್ಲಿ ಕಾಣುವ ನ್ಯೂನ್ಯತೆಗಳಿಗೆ ಕಾರಣವೇನು? ಇದೇ ಮೊದಲಾದ ಪ್ರಶ್ನೆಗಳಿಗೆ ಸಮಂಜಸ ಉತ್ತರವನ್ನು ನೀಡಲು ಸಾಧ್ಯವಾಗಲೂ ಬಹುದು. ಈ ಬೃಹತ್ ಜಿನ್ಸ್ ವಿಶ್ವಕೋಶ ನಿರ್‍ಮಾಣವಾದ ನಂತರ ಕೃತಕ ಮಾನವನ ಸೃಷ್ಟಿ ಸುಲಭ ಸಾಧ್ಯವೆಂದು ವಿಜ್ಞಾನಿಗಳು ಹೇಳುತ್ತಾರೆ.

ಮಾನವನನ್ನು ಪೀಡಿಸುವ ಎಷ್ಟೋ ರೋಗಗಳು ಅನುವಂಶೀಯವಾಗಿ ತಂದೆ ತಾಯಿಗಳಿಂದ, ಅವರ ಸಂತತಿಯಿಂದ ಬರಬಹುದು. ಈ ರೋಗಗಳಿಗೆ ಅವುಗಳಲ್ಲಿರುವ ಜಿನ್ಸ್‌ಗಳಲ್ಲಿನ ನ್ಯೂನ್ಯತೆಗಳೇ ಕಾರಣ. ನ್ಯೂನ್ಯತೆಗಳುಳ್ಳ ರೋಗಕಾರಕ ಜಿನ್ಸ್‌ಗಳನ್ನು ಶರೀರದಿಂದ ಹೊರಹಾಕಲಾಗದಿದ್ದರೂ ಅದರ ಬದಲು ಸುಧಾರಿತ ಜಿನ್ಸ್‌ಗಳನ್ನು ಬಳಸಿ ನ್ಯೂನ್ಯತೆಗಳನ್ನು ಸರಿಪಡಿಸಲು ಸಾಧ್ಯ. ಆದರೆ ಇದು ಇಷ್ಟರಲ್ಲಿಯೇ ಕಾರ್ಯಸಾಧ್ಯವೇನು ಅಲ್ಲ. ವಿಜ್ಞಾನಿಗಳು ಮಾನವನ ಜಿನ್ಸ್‌ಗಳನ್ನು ಶರೀರದೊಳಕ್ಕೆ ಹೇಗೆ ಸೇರಿಸಬಹುದೆಂಬ ವಿಚಾರ ಇನ್ನೂ ತಿಳಿದಿಲ್ಲ ಮತ್ತು ಜೀವಕೋಶದೊಳಗೆ ಮೊದಲೇ ಬಿಡಾರ ಹೂಡಿರುವ ನ್ಯೂನ್ಯತೆ ಇರುವ ಜಿನ್ ಅನ್ನು ಅಲ್ಲಿಂದ ಹೇಗೆ ಉಚ್ಚಾಟನೆ ಮಾಡಬಹುದು ಎಂಬುವುದು ತಿಳಿದಿಲ್ಲ. ಇದೆಲ್ಲದರ ಅರಿವು ವಿಜ್ಞಾನಿಗಳಿಗಾದಾಗ ಜೀನ್ ಚುಚ್ಚು ಮದ್ದಿನಿಂದ ಬಯಸಿದ ಗುಣ ಲಕ್ಷಣಗಳನ್ನು ಸ್ವಭಾವಗಳನ್ನು ಬದಲಿಸಲು ಸಾಧ್ಯವಾಗಬಹುದು. ಕೃತಕ ಜೀನ್ ಸೃಷ್ಟಯಿಂದಾಗಿ ಈ ಕನಸುಗಳು ನನಸಾಗುವ ಕಾಲ ಇಷ್ಟರಲ್ಲಿಯೇ ಬರಬಹುದೆಂದು ಕೆಲವರು ನಿರೀಕ್ಷಿಸಿದ್ದಾರೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...