Home / ಕವನ / ಕವಿತೆ / ಭೀಷ್ಮ

ಭೀಷ್ಮ

ನೀನೇಕೆ ಆಸೆಗೆ ದಾಸನಾಗಲಿಲ್ಲ?
ಮೀಸೆಯ ತಿರುವಿ ಮೆರೆಯಲಿಲ್ಲ?
ಕಾಮದ ಜ್ವಾಲೆಯ ತಾಪಕ್ಕೆ ಮಣಿದು
ಇನ್ನಷ್ಟು ತುಪ್ಪವ ಎರೆಯಲಿಲ್ಲ?

ಅಧಿಕಾರದ ಗದ್ದುಗೆಯೆಂಬ ಗುದ್ದಿಗೂ
ತಲೆಬಾಗಲಿಲ್ಲ ನೀನು
ಅಪ್ಪನ ಅತಿಮೋಹದ ಉರಿಯ
ಗುರಿಗೆ ನೀನಾದೆಯಾ ಜೇನು?

ಹಂಗಿನ ಗುಂಗು ಬದಲಾಯಿಸಿತು
ನಿನ್ನ ಧರ್ಮದ ಹಾದಿಯನ್ನು
ಏನೆನ್ನಲಿ, ಕೆಡುಕಿನಲ್ಲೇ ಇದ್ದು
ಕೆಡುಕಿಗೇ ಕೆಡುಕು ಬೇಡಿದ ನಿನ್ನನ್ನು?

ರಣದ ಕಣಕಣದಲ್ಲೂ ಧರ್ಮವೆಂಬ
ಮರಣಮೃದಂಗ ಬಾರಿಸಿದೆ
ಶರದ ಹಾಸಿಗೆಯಲ್ಲೇ ನಿನ್ನ ಶಯನ
ಕಂಡೂ ಕಾಣದಾದ ನಿನ್ನ ಬದುಕಿನ ಹೂರಣ

ಭೋಧಿಸಿದೆ ನೀತಿಮಾರ್ಗವನ್ನು ಈರ್ವರಿಗೂ
ಒಬ್ಬರಿಗೆ ಪಥ್ಯವಾದದ್ದು ಮತ್ತೊಬ್ಬರಿಗೆ ಮಿಥ್ಯವಾಯಿತು
ಕೇಳಿದವರು ಗೆದ್ದರು, ಕೇಳದವರು ಬಿದ್ದರು
ಆಗಲೂ ನಿನ್ನದು ಸಮಾಧಾನ ಚಿತ್ತ

ಹರಿದು ತಿಂಬವರ ನಡುವೆ
ಕರಿದು ಉಂಬವರ ಮಧ್ಯೆ
ಸರಿದು ಶಾಂತನಾಗಿ ಕುಳಿತೆ
ಚಿಂತೆಯೆಂಬ ಚಿತೆ ನಿನ್ನ ಸುಡಲಿಲ್ಲ

ಸಂಘರ್ಷದ ಬದುಕಿನ ತೋಟದಲ್ಲೂ
ಧರ್ಮವೆಂಬ ಹೂವನ್ನು ಅರಳಿಸಿದೆ
ಮನಸ್ಸನ್ನು ಹೊರಳಿಸುವ, ಕೆರಳಿಸುವ
ಮೋಹ ಪಾಶವ ಸುಟ್ಟ ಬದುಕಾಯಿತು ನಿನ್ನದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...