Home / ಕವನ / ಕವಿತೆ / ಭೀಷ್ಮ

ಭೀಷ್ಮ

ನೀನೇಕೆ ಆಸೆಗೆ ದಾಸನಾಗಲಿಲ್ಲ?
ಮೀಸೆಯ ತಿರುವಿ ಮೆರೆಯಲಿಲ್ಲ?
ಕಾಮದ ಜ್ವಾಲೆಯ ತಾಪಕ್ಕೆ ಮಣಿದು
ಇನ್ನಷ್ಟು ತುಪ್ಪವ ಎರೆಯಲಿಲ್ಲ?

ಅಧಿಕಾರದ ಗದ್ದುಗೆಯೆಂಬ ಗುದ್ದಿಗೂ
ತಲೆಬಾಗಲಿಲ್ಲ ನೀನು
ಅಪ್ಪನ ಅತಿಮೋಹದ ಉರಿಯ
ಗುರಿಗೆ ನೀನಾದೆಯಾ ಜೇನು?

ಹಂಗಿನ ಗುಂಗು ಬದಲಾಯಿಸಿತು
ನಿನ್ನ ಧರ್ಮದ ಹಾದಿಯನ್ನು
ಏನೆನ್ನಲಿ, ಕೆಡುಕಿನಲ್ಲೇ ಇದ್ದು
ಕೆಡುಕಿಗೇ ಕೆಡುಕು ಬೇಡಿದ ನಿನ್ನನ್ನು?

ರಣದ ಕಣಕಣದಲ್ಲೂ ಧರ್ಮವೆಂಬ
ಮರಣಮೃದಂಗ ಬಾರಿಸಿದೆ
ಶರದ ಹಾಸಿಗೆಯಲ್ಲೇ ನಿನ್ನ ಶಯನ
ಕಂಡೂ ಕಾಣದಾದ ನಿನ್ನ ಬದುಕಿನ ಹೂರಣ

ಭೋಧಿಸಿದೆ ನೀತಿಮಾರ್ಗವನ್ನು ಈರ್ವರಿಗೂ
ಒಬ್ಬರಿಗೆ ಪಥ್ಯವಾದದ್ದು ಮತ್ತೊಬ್ಬರಿಗೆ ಮಿಥ್ಯವಾಯಿತು
ಕೇಳಿದವರು ಗೆದ್ದರು, ಕೇಳದವರು ಬಿದ್ದರು
ಆಗಲೂ ನಿನ್ನದು ಸಮಾಧಾನ ಚಿತ್ತ

ಹರಿದು ತಿಂಬವರ ನಡುವೆ
ಕರಿದು ಉಂಬವರ ಮಧ್ಯೆ
ಸರಿದು ಶಾಂತನಾಗಿ ಕುಳಿತೆ
ಚಿಂತೆಯೆಂಬ ಚಿತೆ ನಿನ್ನ ಸುಡಲಿಲ್ಲ

ಸಂಘರ್ಷದ ಬದುಕಿನ ತೋಟದಲ್ಲೂ
ಧರ್ಮವೆಂಬ ಹೂವನ್ನು ಅರಳಿಸಿದೆ
ಮನಸ್ಸನ್ನು ಹೊರಳಿಸುವ, ಕೆರಳಿಸುವ
ಮೋಹ ಪಾಶವ ಸುಟ್ಟ ಬದುಕಾಯಿತು ನಿನ್ನದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...