Home / ಕವನ / ಕವಿತೆ / ಭೀಷ್ಮ

ಭೀಷ್ಮ

ನೀನೇಕೆ ಆಸೆಗೆ ದಾಸನಾಗಲಿಲ್ಲ?
ಮೀಸೆಯ ತಿರುವಿ ಮೆರೆಯಲಿಲ್ಲ?
ಕಾಮದ ಜ್ವಾಲೆಯ ತಾಪಕ್ಕೆ ಮಣಿದು
ಇನ್ನಷ್ಟು ತುಪ್ಪವ ಎರೆಯಲಿಲ್ಲ?

ಅಧಿಕಾರದ ಗದ್ದುಗೆಯೆಂಬ ಗುದ್ದಿಗೂ
ತಲೆಬಾಗಲಿಲ್ಲ ನೀನು
ಅಪ್ಪನ ಅತಿಮೋಹದ ಉರಿಯ
ಗುರಿಗೆ ನೀನಾದೆಯಾ ಜೇನು?

ಹಂಗಿನ ಗುಂಗು ಬದಲಾಯಿಸಿತು
ನಿನ್ನ ಧರ್ಮದ ಹಾದಿಯನ್ನು
ಏನೆನ್ನಲಿ, ಕೆಡುಕಿನಲ್ಲೇ ಇದ್ದು
ಕೆಡುಕಿಗೇ ಕೆಡುಕು ಬೇಡಿದ ನಿನ್ನನ್ನು?

ರಣದ ಕಣಕಣದಲ್ಲೂ ಧರ್ಮವೆಂಬ
ಮರಣಮೃದಂಗ ಬಾರಿಸಿದೆ
ಶರದ ಹಾಸಿಗೆಯಲ್ಲೇ ನಿನ್ನ ಶಯನ
ಕಂಡೂ ಕಾಣದಾದ ನಿನ್ನ ಬದುಕಿನ ಹೂರಣ

ಭೋಧಿಸಿದೆ ನೀತಿಮಾರ್ಗವನ್ನು ಈರ್ವರಿಗೂ
ಒಬ್ಬರಿಗೆ ಪಥ್ಯವಾದದ್ದು ಮತ್ತೊಬ್ಬರಿಗೆ ಮಿಥ್ಯವಾಯಿತು
ಕೇಳಿದವರು ಗೆದ್ದರು, ಕೇಳದವರು ಬಿದ್ದರು
ಆಗಲೂ ನಿನ್ನದು ಸಮಾಧಾನ ಚಿತ್ತ

ಹರಿದು ತಿಂಬವರ ನಡುವೆ
ಕರಿದು ಉಂಬವರ ಮಧ್ಯೆ
ಸರಿದು ಶಾಂತನಾಗಿ ಕುಳಿತೆ
ಚಿಂತೆಯೆಂಬ ಚಿತೆ ನಿನ್ನ ಸುಡಲಿಲ್ಲ

ಸಂಘರ್ಷದ ಬದುಕಿನ ತೋಟದಲ್ಲೂ
ಧರ್ಮವೆಂಬ ಹೂವನ್ನು ಅರಳಿಸಿದೆ
ಮನಸ್ಸನ್ನು ಹೊರಳಿಸುವ, ಕೆರಳಿಸುವ
ಮೋಹ ಪಾಶವ ಸುಟ್ಟ ಬದುಕಾಯಿತು ನಿನ್ನದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...