Home / ಕವನ / ಕವಿತೆ / ಧಾರಾವಾಹಿ

ಧಾರಾವಾಹಿ

ರಕ್ಕಸರಿನ್ನೂ ಮುಗಿದಿಲ್ಲ
ರಕ್ಕಸರಿನ್ನೂ ಬರುತಿದ್ದಾರೆ
ಬರಲೇಬೇಕು
ರಕ್ಕಸರಿನ್ನೂ ಬರದಿದ್ದರೆ
ಮುಂದುವರಿಯುವುದು ಹೇಗೆ ?
ರಕ್ಕಸರಿರ್‍ತಾರೆ ಖಳನಾಯಕರಿರ್‍ತಾರೆ
ಚೌಕಿಯಲ್ಲಿ ವೇಷ ತೊಟ್ಟುಕೊಂಡು
ಮಲಗಿರ್‍ತಾರೆ ಇಲ್ಲವೆ ಚಕ್ಕಂದ
ಆಡಿಹಾಡಿರ್‍ತಾರೆ ಹಾಡಿಕೊಂಡಿರ್‍ತಾರೆ
ಸಮಯಕ್ಕೆ ಸರಿಯಾಗಿ ಎದ್ದು ಬರುತ್ತಾರೆ
ದುಷ್ಟ ವೇಷ ಪುಂಡು ವೇಷ ಪ್ರಚಂಡ ವೇಷ
ಬಣ್ಣದ ವೇಷ
ಹಾ ಎಂಥಾವೇಶ
ರಕ್ಕಸರೂ ಕೆಲ ಛದ್ಮವೇಷ
ಬಡ ಬಡ ಬ್ರಾಹ್ಮಣ ಕಳ್ಳ ಸನ್ಯಾಸಿ
ದಾರಿಹೋಕ ಇಲ್ಲವೆ ತೀರಾ ತಲೆಹೋಕ
ಹಾವಾಡಿಗ ವರ್‍ತಕ ಅಥವಾ
ಜನಸಾಮಾನ್ಯ
ವಂಚಿಸಿದ ನಂತರ ಅವರು ನಿಜ ವೇಷವ
ತೋರುವರು
ಅದೇನು ಅಕರಾಳ ವಿಕರಾಳ
ಏನು ರಾಳದ ಪುಡಿ ಎಡಬಲ ದೊಂದಿ
ಬಯಲ ಕೊನೆಯಿಂದ ಎದ್ದು ಬರುತಾರೆ
ಅದೇನಟ್ಟಹಾಸ ಅದೇನು ಹೂಂಕಾರ
ನಿದ್ದೆ ತೂಗುತ ಇದ್ದ ಜನ ಈಗ ಎಚ್ಚರ
ನೋಡಿದರಿದೋ ಎದುರಿಗೇ ಇದೆ ಒಂದು ಘೋರಾಕಾರ
ಜನ ತತ್ತರ
ಒಮ್ಮೆಲೆ ಹಾಹಾಕಾರ
ಏನಿದು ಉಪಟಳ ಏನಿದು ಹಿಂಸೆ
ಏನಿದು ಜನಾಂಗ ಹತ್ಯೆ
ಈಗುಳಿದುದು ಒಂದೇ
ದೇವರ ಪ್ರಾರ್‍ಥನೆ
ಅಯ್ಯ ಬಾರೋ ಅಪ್ಪ ಬಾರೋ
ಹೇಗಾದರೂ ನಮ್ಮ ಕಾಪಾಡೋ
ಅವನೂ ಬರುತಾನೆ ಶಂಖ ಊದಿ
ಬರದೇನು ಮಾಡ್ತಾನೆ ಧರ್‍ಮಗ್ಲಾನಿ
ನಿವಾರಿಸಬೇಕು ತಾನೆ
ಹತ್ತವತಾರಿ ಇದೆಷ್ಟನೆ ಬಾರಿ
ಬಾರಿ ಬಾರಿಗೂ ರಕ್ಕಸರ ತಲೆ ಹಾರಿಸಿ
ದುಷ್ಟನಿಗ್ರಹ ಶಿಷ್ಟ ಅನುಗ್ರಹ
ಎಷ್ಟಾದರು ಅವತಾರ
ಅದೂ ಮುಗಿಯದು ಲೋಕವೆ ಹಾಗೆ
ನಿರಂತರ ಧಾರಾವಾಹಿ
ಇತ್ತ ವಿದೂಷಕ ವಿಧವಿಧ ವೇಷ
ಧರಿಸಿ ಪ್ರವೇಶಿಸುತಾನೆ
ಮಧ್ಯಂತರದಲಿ
ಅಥವಾ ಕೆಲವು ಸಲ ಸಣ್ಣ ಪಾತ್ರದಲಿ
ಉದಾಹರಣೆಗೆ ದೂತ
ಅಥವಾ ಅಂಬಿಗ
ರಾಯರ ಕೆಲಸ ದೇವರ ಕೆಲಸ
ಹೈರಾಣಾದ ಪ್ರೇಕ್ಷಕರನ್ನ
ನಗಿಸೋದೂ ಅವನ ಕೆಲಸ
ಆದರೆ ನಗಿಸೋದು ಯಾರು
ಖುದ್ದು ಈ ವಿದೂಷಕನ
ಅವನೆಂದೂ ನಗಲೇಬಾರದು
ಹೆಂಡ್ತಿಗೆ ಕಾಯಿಲೆ ಮಕ್ಕಳು ದಡ್ಡರು
ಇವನಿಗೊ ನಿದ್ದೇನೆ ಇಲ್ಲದೆ
ನೆತ್ತಿಗೇರಿದೆ ಕಪಿತ್ಥ ಜಂಬೂ
ಓ ದೇವರೆ, ನಿನ್ನ ಲೀಲೆಯಲಿ
ಈ ಇವನಿಗೇನು ಬೆಲೆ
ಈ ನಮಗೇನು ನೆಲೆ
ಬರಿನೆಲದಲ್ಲಿ ಕೂತವರು ನಾವು
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ