Home / ಕವನ / ಕವಿತೆ / ಧಾರಾವಾಹಿ

ಧಾರಾವಾಹಿ

ರಕ್ಕಸರಿನ್ನೂ ಮುಗಿದಿಲ್ಲ
ರಕ್ಕಸರಿನ್ನೂ ಬರುತಿದ್ದಾರೆ
ಬರಲೇಬೇಕು
ರಕ್ಕಸರಿನ್ನೂ ಬರದಿದ್ದರೆ
ಮುಂದುವರಿಯುವುದು ಹೇಗೆ ?
ರಕ್ಕಸರಿರ್‍ತಾರೆ ಖಳನಾಯಕರಿರ್‍ತಾರೆ
ಚೌಕಿಯಲ್ಲಿ ವೇಷ ತೊಟ್ಟುಕೊಂಡು
ಮಲಗಿರ್‍ತಾರೆ ಇಲ್ಲವೆ ಚಕ್ಕಂದ
ಆಡಿಹಾಡಿರ್‍ತಾರೆ ಹಾಡಿಕೊಂಡಿರ್‍ತಾರೆ
ಸಮಯಕ್ಕೆ ಸರಿಯಾಗಿ ಎದ್ದು ಬರುತ್ತಾರೆ
ದುಷ್ಟ ವೇಷ ಪುಂಡು ವೇಷ ಪ್ರಚಂಡ ವೇಷ
ಬಣ್ಣದ ವೇಷ
ಹಾ ಎಂಥಾವೇಶ
ರಕ್ಕಸರೂ ಕೆಲ ಛದ್ಮವೇಷ
ಬಡ ಬಡ ಬ್ರಾಹ್ಮಣ ಕಳ್ಳ ಸನ್ಯಾಸಿ
ದಾರಿಹೋಕ ಇಲ್ಲವೆ ತೀರಾ ತಲೆಹೋಕ
ಹಾವಾಡಿಗ ವರ್‍ತಕ ಅಥವಾ
ಜನಸಾಮಾನ್ಯ
ವಂಚಿಸಿದ ನಂತರ ಅವರು ನಿಜ ವೇಷವ
ತೋರುವರು
ಅದೇನು ಅಕರಾಳ ವಿಕರಾಳ
ಏನು ರಾಳದ ಪುಡಿ ಎಡಬಲ ದೊಂದಿ
ಬಯಲ ಕೊನೆಯಿಂದ ಎದ್ದು ಬರುತಾರೆ
ಅದೇನಟ್ಟಹಾಸ ಅದೇನು ಹೂಂಕಾರ
ನಿದ್ದೆ ತೂಗುತ ಇದ್ದ ಜನ ಈಗ ಎಚ್ಚರ
ನೋಡಿದರಿದೋ ಎದುರಿಗೇ ಇದೆ ಒಂದು ಘೋರಾಕಾರ
ಜನ ತತ್ತರ
ಒಮ್ಮೆಲೆ ಹಾಹಾಕಾರ
ಏನಿದು ಉಪಟಳ ಏನಿದು ಹಿಂಸೆ
ಏನಿದು ಜನಾಂಗ ಹತ್ಯೆ
ಈಗುಳಿದುದು ಒಂದೇ
ದೇವರ ಪ್ರಾರ್‍ಥನೆ
ಅಯ್ಯ ಬಾರೋ ಅಪ್ಪ ಬಾರೋ
ಹೇಗಾದರೂ ನಮ್ಮ ಕಾಪಾಡೋ
ಅವನೂ ಬರುತಾನೆ ಶಂಖ ಊದಿ
ಬರದೇನು ಮಾಡ್ತಾನೆ ಧರ್‍ಮಗ್ಲಾನಿ
ನಿವಾರಿಸಬೇಕು ತಾನೆ
ಹತ್ತವತಾರಿ ಇದೆಷ್ಟನೆ ಬಾರಿ
ಬಾರಿ ಬಾರಿಗೂ ರಕ್ಕಸರ ತಲೆ ಹಾರಿಸಿ
ದುಷ್ಟನಿಗ್ರಹ ಶಿಷ್ಟ ಅನುಗ್ರಹ
ಎಷ್ಟಾದರು ಅವತಾರ
ಅದೂ ಮುಗಿಯದು ಲೋಕವೆ ಹಾಗೆ
ನಿರಂತರ ಧಾರಾವಾಹಿ
ಇತ್ತ ವಿದೂಷಕ ವಿಧವಿಧ ವೇಷ
ಧರಿಸಿ ಪ್ರವೇಶಿಸುತಾನೆ
ಮಧ್ಯಂತರದಲಿ
ಅಥವಾ ಕೆಲವು ಸಲ ಸಣ್ಣ ಪಾತ್ರದಲಿ
ಉದಾಹರಣೆಗೆ ದೂತ
ಅಥವಾ ಅಂಬಿಗ
ರಾಯರ ಕೆಲಸ ದೇವರ ಕೆಲಸ
ಹೈರಾಣಾದ ಪ್ರೇಕ್ಷಕರನ್ನ
ನಗಿಸೋದೂ ಅವನ ಕೆಲಸ
ಆದರೆ ನಗಿಸೋದು ಯಾರು
ಖುದ್ದು ಈ ವಿದೂಷಕನ
ಅವನೆಂದೂ ನಗಲೇಬಾರದು
ಹೆಂಡ್ತಿಗೆ ಕಾಯಿಲೆ ಮಕ್ಕಳು ದಡ್ಡರು
ಇವನಿಗೊ ನಿದ್ದೇನೆ ಇಲ್ಲದೆ
ನೆತ್ತಿಗೇರಿದೆ ಕಪಿತ್ಥ ಜಂಬೂ
ಓ ದೇವರೆ, ನಿನ್ನ ಲೀಲೆಯಲಿ
ಈ ಇವನಿಗೇನು ಬೆಲೆ
ಈ ನಮಗೇನು ನೆಲೆ
ಬರಿನೆಲದಲ್ಲಿ ಕೂತವರು ನಾವು
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...