Home / ಕವನ / ಕವಿತೆ / ಭರತನಿದ್ದ ಬಾಹುಬಲಿಯಿದ್ದ

ಭರತನಿದ್ದ ಬಾಹುಬಲಿಯಿದ್ದ

ಭರತನಿದ್ದ ಬಾಹುಬಲಿಯಿದ್ದ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಭರತ ಬಾಹುಬಲಿಯ ಮಧ್ಯೆ
ಯುದ್ಧ ನಡೆದಿತ್ತು ಅಣ್ಣತಮ್ಮನ ನಡುವೆ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಗಧಾಯುದ್ಧ ಖಡ್ಗ ಯುದ್ಧ
ಸಕಲಾಸ್ತ್ರ ಯುದ್ಧ ನಡೆದಿತ್ತು ಸಹಸ್ರವರ್‍ಷ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಸಕಲ ಸಮಬಲ ಯುದ್ಧ
ಕೊನೆಗೊಂದೆ ಯುದ್ಧ ಅದು ದೃಷ್ಟಿ ಯುದ್ಧ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ದೃಷ್ಟಿ ಯುದ್ಧದಲಿ ಬಾಹುಬಲಿ ಗೆದ್ದ
ಯುದ್ಧ ಗೆದ್ದವನೆ ಎಲ್ಲ ರಾಜ್ಯವ ಗೆದ್ದ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಆಗಲೇ ಅವನು ಎಲ್ಲ ಬಿಟ್ಟದ್ದು
ಬಿಟ್ಟಾಗಲೇ ಅವನು ನಿಜವಾಗಿ ಗೆದ್ದುದು
ಆಗಲೇ ಅವನು ಗೊಮ್ಮಟನಾದುದು
ಜಿನನು ಆದುದು

ರಾಜ್ಯ ಕೋಶಗಳ ಬಿಟ್ಟ
ಗೆದ್ದುದೆಲ್ಲವ ಬಿಟ್ಟ
ಗೆಲ್ಲಬೇಕೆಂಬುದನೆ ಬಿಟ್ಟ
ಅಹಂ ಬಿಟ್ಟ
ಅಹಂಕಾರವ ಬಿಟ್ಟ
ಉಟ್ಟ ಬಟ್ಟೆಯನೆ ಬಿಟ್ಟೆದ್ದು ನಿಂತ
ಆಕಾಶದೆತ್ತರಕೆ ಬೆಳೆದವನೆ ಗೊಮ್ಮಟ
ನಿನ್ನೆ ಇಂದು ನಾಳೆಗೂ
ಅವನಿಗವನೆ ಸದೃಶ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ