Home / ಕವನ / ಕವಿತೆ / ಭರತನಿದ್ದ ಬಾಹುಬಲಿಯಿದ್ದ

ಭರತನಿದ್ದ ಬಾಹುಬಲಿಯಿದ್ದ

ಭರತನಿದ್ದ ಬಾಹುಬಲಿಯಿದ್ದ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಭರತ ಬಾಹುಬಲಿಯ ಮಧ್ಯೆ
ಯುದ್ಧ ನಡೆದಿತ್ತು ಅಣ್ಣತಮ್ಮನ ನಡುವೆ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಗಧಾಯುದ್ಧ ಖಡ್ಗ ಯುದ್ಧ
ಸಕಲಾಸ್ತ್ರ ಯುದ್ಧ ನಡೆದಿತ್ತು ಸಹಸ್ರವರ್‍ಷ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಸಕಲ ಸಮಬಲ ಯುದ್ಧ
ಕೊನೆಗೊಂದೆ ಯುದ್ಧ ಅದು ದೃಷ್ಟಿ ಯುದ್ಧ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ದೃಷ್ಟಿ ಯುದ್ಧದಲಿ ಬಾಹುಬಲಿ ಗೆದ್ದ
ಯುದ್ಧ ಗೆದ್ದವನೆ ಎಲ್ಲ ರಾಜ್ಯವ ಗೆದ್ದ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಆಗಲೇ ಅವನು ಎಲ್ಲ ಬಿಟ್ಟದ್ದು
ಬಿಟ್ಟಾಗಲೇ ಅವನು ನಿಜವಾಗಿ ಗೆದ್ದುದು
ಆಗಲೇ ಅವನು ಗೊಮ್ಮಟನಾದುದು
ಜಿನನು ಆದುದು

ರಾಜ್ಯ ಕೋಶಗಳ ಬಿಟ್ಟ
ಗೆದ್ದುದೆಲ್ಲವ ಬಿಟ್ಟ
ಗೆಲ್ಲಬೇಕೆಂಬುದನೆ ಬಿಟ್ಟ
ಅಹಂ ಬಿಟ್ಟ
ಅಹಂಕಾರವ ಬಿಟ್ಟ
ಉಟ್ಟ ಬಟ್ಟೆಯನೆ ಬಿಟ್ಟೆದ್ದು ನಿಂತ
ಆಕಾಶದೆತ್ತರಕೆ ಬೆಳೆದವನೆ ಗೊಮ್ಮಟ
ನಿನ್ನೆ ಇಂದು ನಾಳೆಗೂ
ಅವನಿಗವನೆ ಸದೃಶ
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...