Home / ಕವನ / ಕವಿತೆ / ನೀನೀತರ ನೋಡುವಿಯೇ

ನೀನೀತರ ನೋಡುವಿಯೇ

ನೀನೀತರ ನೋಡುವಿಯೇ
ಇದರರ್‍ಥವ ಹೇಳುವಿಯೇ

ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ

ಹಾಡಿಯಲದು ಬಿದ್ದಿತ್ತೋ
ಕೇದಿಗೆ ಬನದಲಿ ಅಡಗಿತ್ತೋ
ನದೀ ದಂಡೆಯಲಿ ಆಡುತಿತ್ತೋ
ಯಾರಿಗು ಕೇಳದೆ ಹಾಡುತಿತ್ತೋ
ಮಧುರ ಕಾನನವ ಕಾಡುತಿತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಎಷ್ಟೆಂತ ಹಿಡಿದಿತ್ತೋ

ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ

ಕಬ್ಬಿನ ಹೂವಾಗಿ ಬೆಳೆದಿತ್ತೋ
ಕಾಮನ ಬಿಲ್ಲಾಗಿ ಕೂತಿತ್ತೋ
ಬೆಳದಿಂಗಳ ಜತೆ ಒಂದಾಗಿತ್ತೋ
ಅಂಗಳದಲ್ಲಿ ಸುತ್ತಾಡುತಿತ್ತೋ
ಅತ್ತಾರ ತಟ್ಟಿಯ ಆಚೆಗೆ ಇತ್ತೋ ಈಚೆಗೆ ಇತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಬಿಟ್ಟರೆ ಬಿಡದಿತ್ತೋ

ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ
ಜಾತ್ರೆಯ ನೆಪದಲ್ಲಿ ಹೊರಟಿತ್ತೋ
ಅಂಗಡಿ ಅಂಗಡಿ ಅಲೆದಿತ್ತೋ
ಮುಂಗಟ್ಟ ಬೆಳಕಲಿ ಹೊಳೆದಿತ್ತೋ
ಬಳೆಯಾಗಿ ಘಣ ಘಣ ಘಣಿಸಿತ್ತೊ
ಕಾಲ್ಗೆಜ್ಜೆಯಾಗಿ ಘಲ್ಲೆಂದಿತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಸುಖದಲ್ಲಿ ಕಡಿದಿತ್ತೋ

ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ

ಎದೆ ಡವಡವ ಎನುತಿತ್ತೋ
ಕಣ್ಣಿವೆ ರಪರಪ ಬಡಿಯುತಿತ್ತೋ
ನಾಲಿಗೆ ತಡವರಿಸುತಿತ್ತೋ
ಮೋಹದ ಕಿಚ್ಚು ಧಗ ಧಗಿಸುತಿತ್ತೋ
ಕೊಂಡಷ್ಟೂ ಮತ್ತೆ ಉರಿಯುತಲಿತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಗುಟ್ಟಲಿ ಸುಡುತಿತ್ತೋ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...