Home / ಕವನ / ಕವಿತೆ / ನೀನೀತರ ನೋಡುವಿಯೇ

ನೀನೀತರ ನೋಡುವಿಯೇ

ನೀನೀತರ ನೋಡುವಿಯೇ
ಇದರರ್‍ಥವ ಹೇಳುವಿಯೇ

ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ

ಹಾಡಿಯಲದು ಬಿದ್ದಿತ್ತೋ
ಕೇದಿಗೆ ಬನದಲಿ ಅಡಗಿತ್ತೋ
ನದೀ ದಂಡೆಯಲಿ ಆಡುತಿತ್ತೋ
ಯಾರಿಗು ಕೇಳದೆ ಹಾಡುತಿತ್ತೋ
ಮಧುರ ಕಾನನವ ಕಾಡುತಿತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಎಷ್ಟೆಂತ ಹಿಡಿದಿತ್ತೋ

ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ

ಕಬ್ಬಿನ ಹೂವಾಗಿ ಬೆಳೆದಿತ್ತೋ
ಕಾಮನ ಬಿಲ್ಲಾಗಿ ಕೂತಿತ್ತೋ
ಬೆಳದಿಂಗಳ ಜತೆ ಒಂದಾಗಿತ್ತೋ
ಅಂಗಳದಲ್ಲಿ ಸುತ್ತಾಡುತಿತ್ತೋ
ಅತ್ತಾರ ತಟ್ಟಿಯ ಆಚೆಗೆ ಇತ್ತೋ ಈಚೆಗೆ ಇತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಬಿಟ್ಟರೆ ಬಿಡದಿತ್ತೋ

ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ
ಜಾತ್ರೆಯ ನೆಪದಲ್ಲಿ ಹೊರಟಿತ್ತೋ
ಅಂಗಡಿ ಅಂಗಡಿ ಅಲೆದಿತ್ತೋ
ಮುಂಗಟ್ಟ ಬೆಳಕಲಿ ಹೊಳೆದಿತ್ತೋ
ಬಳೆಯಾಗಿ ಘಣ ಘಣ ಘಣಿಸಿತ್ತೊ
ಕಾಲ್ಗೆಜ್ಜೆಯಾಗಿ ಘಲ್ಲೆಂದಿತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಸುಖದಲ್ಲಿ ಕಡಿದಿತ್ತೋ

ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ

ಎದೆ ಡವಡವ ಎನುತಿತ್ತೋ
ಕಣ್ಣಿವೆ ರಪರಪ ಬಡಿಯುತಿತ್ತೋ
ನಾಲಿಗೆ ತಡವರಿಸುತಿತ್ತೋ
ಮೋಹದ ಕಿಚ್ಚು ಧಗ ಧಗಿಸುತಿತ್ತೋ
ಕೊಂಡಷ್ಟೂ ಮತ್ತೆ ಉರಿಯುತಲಿತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಗುಟ್ಟಲಿ ಸುಡುತಿತ್ತೋ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...