Home / ಕವನ / ಕವಿತೆ / ಯಿಸ್ನು ಪಡಚ

ಯಿಸ್ನು ಪಡಚ

ಪದವಿ ನೋಡ್ಕೊಂಡ್ ದೊಡ್ಡೋನ್ ಅನ್ನೋದ್
ಲೋಕಕ್ ಒಂದ್ ಆಳ್ ರೋಗ!
ಇದನ ಕಾಣ್ಬೌದ್ ಎಲ್ಲಾ ರೂನೆ
ಇಸ್ನೂನ್ ಒಗಳೋದ್ರಾಗ! ೧

ಏನ್ ಯಿಸ್ನೂ ನೋ! ಬೆಪ್ಪಂಗ್ ಬಿದ್ದೌನ್
ಆಲಿನ್ ಸೌಂದ್ರದ್ ಮದ್ದ!
ಆಲ್ನಲ್ ಬೆಳ್ಳಾಕ್ ಚೀಪ್ತಾನಿರಾಕ್
ಅಸ್ಮಗೂನ ಸುದ್ದ? ೨

ಬುಳ್ಡೇಲ್ ಔಂಗ್ ಒಂದ್ ಇಂಕ್ರಾನಾರ
ಬುದ್ದಿ ಗಿದ್ದಿ ಇದ್ರೆ!
ಯೋಚ್ನೆ ಬೇಡ್ವ-ಯಾವಾಗ್ನಾರ
ಆಲ್ ಒಡದ್ ಉಳ ಬಿದ್ರೆ! ೩

ಯೆಸ್ನೂಂತ್ ಅಂದ್ರೆ -ಬ್ರಮ್ಮಂಗ್ ಅಪ್ಪ!
ಯೆಚ್ಗೆ ಯೋಳಾದ್ ಯಾಕ?
ಮಗನೆ ಮೊದ್ದಿನ್ ಮುದ್ದೆ ಆದ್ರೆ
ಅಪ್ಪ ಯೆಂಗಿರಬೇಕ! ೪

ನಾನೇನಾರ ಯಿಸ್ನಾಗಿದ್ರೆ
ಗೊತ್ತಾ ಏನ್ ಮಾಡ್ತಿದ್ದೆ?
ಯೆಂಡದ್ ಸೌಂದ್ರದ್ ಮದ್ಧಕ್ಕೋಗಿ
ಝಾಂಡ ಆಕ್ಬುಡ್ತಿದ್ದೆ! ೫

ಸೇಸನ್ ಸಾವಿರ್ ತಲೆಗೊಳ್ನೂವೆ
ಸಾಲಾ ಈಸ್ಕೊಂಬುಟ್ಟು
ಸೌಂದ್ರಕ್ ಬಾಯ್ ಇಟ್ ಈರ್‍ದಾಂತ್ ಅಂದ್ರೆ
ಸೌಂದ್ರಕ್ ಈ ಸೌಂದ್ರೆ ಛಟ್ಟು! ೬

ದೊಡ್ದ್ ಒಂದ್ ಸೌಂದ್ರ ಕಾಲಿ ಆದ್ರೆ
ಇನ್ನಾ ಅವೆ ಆರು!
ಆಲು! ತುಪ್ಪ! ಮೊಸರು! ಯೆಣ್ಣೆ!
ಕಬ್ಬಿನ್ನಾಲು! ನೀರು! ೭

ಮಿಕ್ಕಿದ್ ಆರ್‍ನು ಮುಂದ್ ಇಟ್ಕೊಂಡಿ
ಛೂ ಮಂತ್ರಾಂದ್ರೆ ಆಯ್ತು!
ಯಿಸ್ನು ಆದೋನ್ ಸಕ್ತೀಂತ್ ಅಂದ್ರೆ
ಎಲ್ಲಾ ಯೆಂಡ್ ಆಗೋಯ್ತು! ೮

ಬುದ್ದಿ ಇದ್ದೋರ್‍ಗ್ ಎಲ್ಲೈತ್ ಸಕ್ತಿ?
ಯೇನೇಳ್ಕೊಂಡ್ ಏನ್ ಬತ್ತು!
ಸಕ್ತಿ ಇದ್ದೋರ್‍ಗ್ ಬುದ್ದಿ ಇಲ್ದಿದ್ರ್
ಅದೂ ಒಂದು ಗತ್ತು! ೯

ದೊಡ್ಡೋನ್ ಯಿಸ್ನು ಕಲ್ತ್ಕೊಬಾರ್‍ದ
ಚಿಕ್ಕೋನ್ ಕುಡಕನ್ ಸೇರಿ!
ಚೆ! ಚೆ! ಚೆ! ಚೆ! ಎಲ್ಲಾರ್ ಉಂಟ!
ಆಲ್ನಲ್ ಔನ್ ಗೋರಿ! ೧೦
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...