Home / ಕವನ / ಕವಿತೆ / ಯಿಸ್ನು ಪಡಚ

ಯಿಸ್ನು ಪಡಚ

ಪದವಿ ನೋಡ್ಕೊಂಡ್ ದೊಡ್ಡೋನ್ ಅನ್ನೋದ್
ಲೋಕಕ್ ಒಂದ್ ಆಳ್ ರೋಗ!
ಇದನ ಕಾಣ್ಬೌದ್ ಎಲ್ಲಾ ರೂನೆ
ಇಸ್ನೂನ್ ಒಗಳೋದ್ರಾಗ! ೧

ಏನ್ ಯಿಸ್ನೂ ನೋ! ಬೆಪ್ಪಂಗ್ ಬಿದ್ದೌನ್
ಆಲಿನ್ ಸೌಂದ್ರದ್ ಮದ್ದ!
ಆಲ್ನಲ್ ಬೆಳ್ಳಾಕ್ ಚೀಪ್ತಾನಿರಾಕ್
ಅಸ್ಮಗೂನ ಸುದ್ದ? ೨

ಬುಳ್ಡೇಲ್ ಔಂಗ್ ಒಂದ್ ಇಂಕ್ರಾನಾರ
ಬುದ್ದಿ ಗಿದ್ದಿ ಇದ್ರೆ!
ಯೋಚ್ನೆ ಬೇಡ್ವ-ಯಾವಾಗ್ನಾರ
ಆಲ್ ಒಡದ್ ಉಳ ಬಿದ್ರೆ! ೩

ಯೆಸ್ನೂಂತ್ ಅಂದ್ರೆ -ಬ್ರಮ್ಮಂಗ್ ಅಪ್ಪ!
ಯೆಚ್ಗೆ ಯೋಳಾದ್ ಯಾಕ?
ಮಗನೆ ಮೊದ್ದಿನ್ ಮುದ್ದೆ ಆದ್ರೆ
ಅಪ್ಪ ಯೆಂಗಿರಬೇಕ! ೪

ನಾನೇನಾರ ಯಿಸ್ನಾಗಿದ್ರೆ
ಗೊತ್ತಾ ಏನ್ ಮಾಡ್ತಿದ್ದೆ?
ಯೆಂಡದ್ ಸೌಂದ್ರದ್ ಮದ್ಧಕ್ಕೋಗಿ
ಝಾಂಡ ಆಕ್ಬುಡ್ತಿದ್ದೆ! ೫

ಸೇಸನ್ ಸಾವಿರ್ ತಲೆಗೊಳ್ನೂವೆ
ಸಾಲಾ ಈಸ್ಕೊಂಬುಟ್ಟು
ಸೌಂದ್ರಕ್ ಬಾಯ್ ಇಟ್ ಈರ್‍ದಾಂತ್ ಅಂದ್ರೆ
ಸೌಂದ್ರಕ್ ಈ ಸೌಂದ್ರೆ ಛಟ್ಟು! ೬

ದೊಡ್ದ್ ಒಂದ್ ಸೌಂದ್ರ ಕಾಲಿ ಆದ್ರೆ
ಇನ್ನಾ ಅವೆ ಆರು!
ಆಲು! ತುಪ್ಪ! ಮೊಸರು! ಯೆಣ್ಣೆ!
ಕಬ್ಬಿನ್ನಾಲು! ನೀರು! ೭

ಮಿಕ್ಕಿದ್ ಆರ್‍ನು ಮುಂದ್ ಇಟ್ಕೊಂಡಿ
ಛೂ ಮಂತ್ರಾಂದ್ರೆ ಆಯ್ತು!
ಯಿಸ್ನು ಆದೋನ್ ಸಕ್ತೀಂತ್ ಅಂದ್ರೆ
ಎಲ್ಲಾ ಯೆಂಡ್ ಆಗೋಯ್ತು! ೮

ಬುದ್ದಿ ಇದ್ದೋರ್‍ಗ್ ಎಲ್ಲೈತ್ ಸಕ್ತಿ?
ಯೇನೇಳ್ಕೊಂಡ್ ಏನ್ ಬತ್ತು!
ಸಕ್ತಿ ಇದ್ದೋರ್‍ಗ್ ಬುದ್ದಿ ಇಲ್ದಿದ್ರ್
ಅದೂ ಒಂದು ಗತ್ತು! ೯

ದೊಡ್ಡೋನ್ ಯಿಸ್ನು ಕಲ್ತ್ಕೊಬಾರ್‍ದ
ಚಿಕ್ಕೋನ್ ಕುಡಕನ್ ಸೇರಿ!
ಚೆ! ಚೆ! ಚೆ! ಚೆ! ಎಲ್ಲಾರ್ ಉಂಟ!
ಆಲ್ನಲ್ ಔನ್ ಗೋರಿ! ೧೦
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...