Home / ಲೇಖನ / ಇತರೆ / ಏಕಲವ್ಯನ ಕತೆ

ಏಕಲವ್ಯನ ಕತೆ

‘ಏಕಲವ್ಯ – ಗುರು ದ್ರೋಣರಿಗೆ ಗುರು ಕಾಣಿಕೆಯೆಂದು ಬಲಗೈ ಹೆಬ್ಬೆಟ್ಟನ್ನು ನೀಡಬಾರದಿತ್ತು ಕಂದಾಽ…’ ಎಂದು ಏಕಲವ್ಯನ ತಾಯಿ ಮಗನ ಕೈಗೆ ಬಟ್ಟೆ ಸುತ್ತಿ ಹಾರೈಕೆ ಮಾಡುತ್ತಾ ಕಣ್ಣೀರಿಟ್ಟಳು.

ಏಕಲವ್ಯನ ತಂದೆ- ‘ನೀ ಬೇಡ ಕುಲದಲ್ಲಿ ಹುಟ್ಟಿ ಎಲ್ಲರಿಗೂ ಬೇಡಾದೆ ಮಗು! ನಿನ್ನ ಬಿಲ್ಲು ವಿದ್ಯೆಗೆ ಶಬ್ದವೇದಿ ವಿದ್ಯೆಗೆ ಯಾವುದೋ ಆಳರಸರ ಕೈಯಲ್ಲಿ ಮೆರೆಯಬೇಕಾಗಿತ್ತು! ಆದರೆ ಈ ಜನರು ನಿನ್ನ ಶ್ರೇಯಸ್ಸು ಸಹಿಸಲಿಲ್ಲ. ನಿನ್ನ ಅವನತಿ ಕೋರಿದರು’ ಎಂದು ಕಣ್ಣೀರಿಟ್ಟ.

‘ನೀವ್ಯಾರು ಕಣ್ಣೀರು ಸುರಿಸದಿರಿ. ನನ್ನ ಹಣೆ ಬರಹಕೆ ಗುರು ದ್ರೋಣರೇನು ಮಾಡಿಯಾರು? ಇಲ್ಲಿ ಅರ್‍ಜುನ ನಿಮಿತ್ತ ಮಾತ್ರ ಎಲ್ಲ ನನ್ನ ವಿಧಿ ವಿಪರೀತ! ನನಗೆ ಒಳ್ಳೆಯದಾಗಲಿಲ್ಲವೆಂದು ನನ್ನ ಬೇಡ ಜಾತಿಯನ್ನು, ಅರ್‍ಜುನ, ಗುರುದ್ರೋಣರನ್ನು ಬೈದು ಫಲವೇನು ? ಜಾತಕ ಪಕ್ಷಿಯು ಮಳೆ ಬರುವಾಗ ಮಳೆ ಹನಿ ಬೀಳಲಿ ಎಂದು ಬಾಯಿ ತೆರೆದಿದ್ದರೂ ತೊಟ್ಟು ಹನಿ ಬೀಳದಿದ್ದರೆ ಮೋಡದ ದೋಷವೆನ್ನುವಿರೇನು? ಕರೀಲ ಮರದಲ್ಲಿ ಎಲೆಗಳಿಲ್ಲವೆಂದು ಮಾತ್ರಕ್ಕೆ ವಸಂತ ಋತುವನ್ನು ಅಳಿದರೇನು ಫಲ? ಗೂಬೆಗೆ ಹಗಲು ಹೊತ್ತಿನಲ್ಲಿ ದೃಷ್ಟಿ ಗೋಚರಿಸದಿದ್ದರೆ ಸೂರ್‍ಯದೇವನ ತಪ್ಪೇನಿದೆ? ನನ್ನ ಅದೃಷ್ಟ ಸರಿಯಾಗಿಲ್ಲವೆಂದ ಮೇಲೆ ಯಾರನ್ನು ಏನನ್ನು ದೂಷಿಸಿ ಪ್ರಯೋಜನವೇನು? ನನ್ನಲ್ಲಿರುವ ಬ್ರಹ್ಮವಿದ್ಯೆಯು ಕೋತಿ ವಿದ್ಯೆಯಾಗಿ ಹೋಯಿತು’ ಎಂದು ಏಕಲವ್ಯ ತನ್ನ ತಂದೆ ತಾಯಿ ಪರಿವಾರದವರನ್ನು ಸಂತೈಸಿದನಲ್ಲದೆ, ಧೈರ್‍ಯ ತುಂಬಿದನು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...