Home / ಲೇಖನ / ಇತರೆ / ಏಕಲವ್ಯನ ಕತೆ

ಏಕಲವ್ಯನ ಕತೆ

‘ಏಕಲವ್ಯ – ಗುರು ದ್ರೋಣರಿಗೆ ಗುರು ಕಾಣಿಕೆಯೆಂದು ಬಲಗೈ ಹೆಬ್ಬೆಟ್ಟನ್ನು ನೀಡಬಾರದಿತ್ತು ಕಂದಾಽ…’ ಎಂದು ಏಕಲವ್ಯನ ತಾಯಿ ಮಗನ ಕೈಗೆ ಬಟ್ಟೆ ಸುತ್ತಿ ಹಾರೈಕೆ ಮಾಡುತ್ತಾ ಕಣ್ಣೀರಿಟ್ಟಳು.

ಏಕಲವ್ಯನ ತಂದೆ- ‘ನೀ ಬೇಡ ಕುಲದಲ್ಲಿ ಹುಟ್ಟಿ ಎಲ್ಲರಿಗೂ ಬೇಡಾದೆ ಮಗು! ನಿನ್ನ ಬಿಲ್ಲು ವಿದ್ಯೆಗೆ ಶಬ್ದವೇದಿ ವಿದ್ಯೆಗೆ ಯಾವುದೋ ಆಳರಸರ ಕೈಯಲ್ಲಿ ಮೆರೆಯಬೇಕಾಗಿತ್ತು! ಆದರೆ ಈ ಜನರು ನಿನ್ನ ಶ್ರೇಯಸ್ಸು ಸಹಿಸಲಿಲ್ಲ. ನಿನ್ನ ಅವನತಿ ಕೋರಿದರು’ ಎಂದು ಕಣ್ಣೀರಿಟ್ಟ.

‘ನೀವ್ಯಾರು ಕಣ್ಣೀರು ಸುರಿಸದಿರಿ. ನನ್ನ ಹಣೆ ಬರಹಕೆ ಗುರು ದ್ರೋಣರೇನು ಮಾಡಿಯಾರು? ಇಲ್ಲಿ ಅರ್‍ಜುನ ನಿಮಿತ್ತ ಮಾತ್ರ ಎಲ್ಲ ನನ್ನ ವಿಧಿ ವಿಪರೀತ! ನನಗೆ ಒಳ್ಳೆಯದಾಗಲಿಲ್ಲವೆಂದು ನನ್ನ ಬೇಡ ಜಾತಿಯನ್ನು, ಅರ್‍ಜುನ, ಗುರುದ್ರೋಣರನ್ನು ಬೈದು ಫಲವೇನು ? ಜಾತಕ ಪಕ್ಷಿಯು ಮಳೆ ಬರುವಾಗ ಮಳೆ ಹನಿ ಬೀಳಲಿ ಎಂದು ಬಾಯಿ ತೆರೆದಿದ್ದರೂ ತೊಟ್ಟು ಹನಿ ಬೀಳದಿದ್ದರೆ ಮೋಡದ ದೋಷವೆನ್ನುವಿರೇನು? ಕರೀಲ ಮರದಲ್ಲಿ ಎಲೆಗಳಿಲ್ಲವೆಂದು ಮಾತ್ರಕ್ಕೆ ವಸಂತ ಋತುವನ್ನು ಅಳಿದರೇನು ಫಲ? ಗೂಬೆಗೆ ಹಗಲು ಹೊತ್ತಿನಲ್ಲಿ ದೃಷ್ಟಿ ಗೋಚರಿಸದಿದ್ದರೆ ಸೂರ್‍ಯದೇವನ ತಪ್ಪೇನಿದೆ? ನನ್ನ ಅದೃಷ್ಟ ಸರಿಯಾಗಿಲ್ಲವೆಂದ ಮೇಲೆ ಯಾರನ್ನು ಏನನ್ನು ದೂಷಿಸಿ ಪ್ರಯೋಜನವೇನು? ನನ್ನಲ್ಲಿರುವ ಬ್ರಹ್ಮವಿದ್ಯೆಯು ಕೋತಿ ವಿದ್ಯೆಯಾಗಿ ಹೋಯಿತು’ ಎಂದು ಏಕಲವ್ಯ ತನ್ನ ತಂದೆ ತಾಯಿ ಪರಿವಾರದವರನ್ನು ಸಂತೈಸಿದನಲ್ಲದೆ, ಧೈರ್‍ಯ ತುಂಬಿದನು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...