Home / ಲೇಖನ / ಇತರೆ / ಏಕಲವ್ಯನ ಕತೆ

ಏಕಲವ್ಯನ ಕತೆ

‘ಏಕಲವ್ಯ – ಗುರು ದ್ರೋಣರಿಗೆ ಗುರು ಕಾಣಿಕೆಯೆಂದು ಬಲಗೈ ಹೆಬ್ಬೆಟ್ಟನ್ನು ನೀಡಬಾರದಿತ್ತು ಕಂದಾಽ…’ ಎಂದು ಏಕಲವ್ಯನ ತಾಯಿ ಮಗನ ಕೈಗೆ ಬಟ್ಟೆ ಸುತ್ತಿ ಹಾರೈಕೆ ಮಾಡುತ್ತಾ ಕಣ್ಣೀರಿಟ್ಟಳು.

ಏಕಲವ್ಯನ ತಂದೆ- ‘ನೀ ಬೇಡ ಕುಲದಲ್ಲಿ ಹುಟ್ಟಿ ಎಲ್ಲರಿಗೂ ಬೇಡಾದೆ ಮಗು! ನಿನ್ನ ಬಿಲ್ಲು ವಿದ್ಯೆಗೆ ಶಬ್ದವೇದಿ ವಿದ್ಯೆಗೆ ಯಾವುದೋ ಆಳರಸರ ಕೈಯಲ್ಲಿ ಮೆರೆಯಬೇಕಾಗಿತ್ತು! ಆದರೆ ಈ ಜನರು ನಿನ್ನ ಶ್ರೇಯಸ್ಸು ಸಹಿಸಲಿಲ್ಲ. ನಿನ್ನ ಅವನತಿ ಕೋರಿದರು’ ಎಂದು ಕಣ್ಣೀರಿಟ್ಟ.

‘ನೀವ್ಯಾರು ಕಣ್ಣೀರು ಸುರಿಸದಿರಿ. ನನ್ನ ಹಣೆ ಬರಹಕೆ ಗುರು ದ್ರೋಣರೇನು ಮಾಡಿಯಾರು? ಇಲ್ಲಿ ಅರ್‍ಜುನ ನಿಮಿತ್ತ ಮಾತ್ರ ಎಲ್ಲ ನನ್ನ ವಿಧಿ ವಿಪರೀತ! ನನಗೆ ಒಳ್ಳೆಯದಾಗಲಿಲ್ಲವೆಂದು ನನ್ನ ಬೇಡ ಜಾತಿಯನ್ನು, ಅರ್‍ಜುನ, ಗುರುದ್ರೋಣರನ್ನು ಬೈದು ಫಲವೇನು ? ಜಾತಕ ಪಕ್ಷಿಯು ಮಳೆ ಬರುವಾಗ ಮಳೆ ಹನಿ ಬೀಳಲಿ ಎಂದು ಬಾಯಿ ತೆರೆದಿದ್ದರೂ ತೊಟ್ಟು ಹನಿ ಬೀಳದಿದ್ದರೆ ಮೋಡದ ದೋಷವೆನ್ನುವಿರೇನು? ಕರೀಲ ಮರದಲ್ಲಿ ಎಲೆಗಳಿಲ್ಲವೆಂದು ಮಾತ್ರಕ್ಕೆ ವಸಂತ ಋತುವನ್ನು ಅಳಿದರೇನು ಫಲ? ಗೂಬೆಗೆ ಹಗಲು ಹೊತ್ತಿನಲ್ಲಿ ದೃಷ್ಟಿ ಗೋಚರಿಸದಿದ್ದರೆ ಸೂರ್‍ಯದೇವನ ತಪ್ಪೇನಿದೆ? ನನ್ನ ಅದೃಷ್ಟ ಸರಿಯಾಗಿಲ್ಲವೆಂದ ಮೇಲೆ ಯಾರನ್ನು ಏನನ್ನು ದೂಷಿಸಿ ಪ್ರಯೋಜನವೇನು? ನನ್ನಲ್ಲಿರುವ ಬ್ರಹ್ಮವಿದ್ಯೆಯು ಕೋತಿ ವಿದ್ಯೆಯಾಗಿ ಹೋಯಿತು’ ಎಂದು ಏಕಲವ್ಯ ತನ್ನ ತಂದೆ ತಾಯಿ ಪರಿವಾರದವರನ್ನು ಸಂತೈಸಿದನಲ್ಲದೆ, ಧೈರ್‍ಯ ತುಂಬಿದನು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...