ಆರೋಗ್ಯಕ್ಕೆ…

ಆರೋಗ್ಯಕ್ಕೆ…

ಆರೋಗ್ಯಕ್ಕೆ ಕಾಫಿ ಟೀ ಒಳ್ಳೆಯದಲ್ಲ ಎಂದು ಸಂಶೋಧನೆಗಳು ಸಾರಿ ಸಾರಿ ಹೇಳುತ್ತಿವೆ. ಆದರೂ ಬೆಳಿಗ್ಗೆ ಒಂದು ಕುಡಿದರೆ ಏನಾಗದೆಂದು ಕೆಲವು ಜನರು ಕಾಫಿ-ಟೀಯೊಂದಿಗೆ ರಾಜಿಯಾಗಿರುವರು.

ಇನ್ನು ಕೆಲವರು ಟೀ… ಅದರಲ್ಲೂ ಗ್ರೀನ್ ಟೀ ಎರಡೂ ಹೊತ್ತು ಕುಡಿಯುವುದು ಒಳ್ಳೆಯದೆಂದು ಹೇಳುವರು. ಮೊನ್ನೆ ದಿನ ಶಾಲೆಗೆ ಡಾ|| ವಿ. ನಾಗರಾಜು ಅವರು ಬಂದಿದ್ದರು. ಅವರು ಬರುವಾಗ ದಿನ ಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ, ರಾಷ್ಟ್ರೀಯ ಅಂತರರಾಷ್ಟ್ರೀಯ ಪತ್ರಿಕೆಗಳನ್ನು ತಂದು ಮಕ್ಕಳಿಗೆಲ್ಲ ವಿತರಿಸಿ ಇವುಗಳನ್ನು ಓದಲು ಗ್ರೀನ್ ಟೀ ಕುಡಿಯಲು ಸಲಹೆ ಮಾಡುತ್ತಾ ನಿಂತರು.

ಪುಟಾಣಿಗಳೆ… ಗ್ರೀನ್ ಟೀ ಎಂದರೆ… ದಿವ್ಯೌಷಧಿಯಂತೆ ಕೆಲಸ ಮಾಡುವುದು. ಅದರಿಂದ ಉಪಯೋಗಗಳು ಈ ರೀತಿಯಲ್ಲಿವೆ…

೧. ಇದು ನಿದ್ದೆಯನ್ನು ಸೋಮಾರಿತನವನ್ನು ದೂರ ಮಾಡುವುದು.

೨. ಮೆದುಳನ್ನು ಚುರುಕುಗೊಳಿಸುವುದು.

೩. ನೆನಪಿನ ಶಕ್ತಿ ವೃದ್ಧಿಸುವುದು.

೪. ಬೊಜ್ಜು ಕರಗಿಸುವುದು. ತೂಕ ಇಳಿಸುವುದು, ನಿರಂತರ ಚುರುಕಾಗಿರುವಂತೆ ಮಾಡುವುದು.

೫. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಇದೆ.

೬. ಸಕ್ಕರೆ ಕಾಯಿಲೆ ಬರದಂತೆ, ಹೃದಯಾಘಾತವಾಗುವುದನ್ನು ತಡೆಯುವುದು.

೭. ಬಾಯಿ ವಾಸನೆ ತಡೆಯುವುದು, ಹಲ್ಲು ಹುಳುಕು ಹಿಡಿಯದಂತೆ ತಡೆಯುವುದು.

೮. ಎಲುಬುಗಳನ್ನು ಗಟ್ಟಿಗೊಳಿಸುವುದು. ಮರೆಗುಳಿತನವನ್ನು ದೂರ ಮಾಡುವುದು.

೯. ಹುರುಪು ಉತ್ಸಾಹ ತುಂಬುವುದು.

೧೦. ದೇಹವನ್ನು ಬೆಚ್ಚಗಿಡುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿವಿಧತೆಯಲ್ಲಿ ಏಕತೆಯ
Next post ಕಾಬೂಲಿವಾಲಾ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…