Home / ಲೇಖನ / ಇತರೆ / ಆರೋಗ್ಯಕ್ಕೆ…

ಆರೋಗ್ಯಕ್ಕೆ…

ಆರೋಗ್ಯಕ್ಕೆ ಕಾಫಿ ಟೀ ಒಳ್ಳೆಯದಲ್ಲ ಎಂದು ಸಂಶೋಧನೆಗಳು ಸಾರಿ ಸಾರಿ ಹೇಳುತ್ತಿವೆ. ಆದರೂ ಬೆಳಿಗ್ಗೆ ಒಂದು ಕುಡಿದರೆ ಏನಾಗದೆಂದು ಕೆಲವು ಜನರು ಕಾಫಿ-ಟೀಯೊಂದಿಗೆ ರಾಜಿಯಾಗಿರುವರು.

ಇನ್ನು ಕೆಲವರು ಟೀ… ಅದರಲ್ಲೂ ಗ್ರೀನ್ ಟೀ ಎರಡೂ ಹೊತ್ತು ಕುಡಿಯುವುದು ಒಳ್ಳೆಯದೆಂದು ಹೇಳುವರು. ಮೊನ್ನೆ ದಿನ ಶಾಲೆಗೆ ಡಾ|| ವಿ. ನಾಗರಾಜು ಅವರು ಬಂದಿದ್ದರು. ಅವರು ಬರುವಾಗ ದಿನ ಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ, ರಾಷ್ಟ್ರೀಯ ಅಂತರರಾಷ್ಟ್ರೀಯ ಪತ್ರಿಕೆಗಳನ್ನು ತಂದು ಮಕ್ಕಳಿಗೆಲ್ಲ ವಿತರಿಸಿ ಇವುಗಳನ್ನು ಓದಲು ಗ್ರೀನ್ ಟೀ ಕುಡಿಯಲು ಸಲಹೆ ಮಾಡುತ್ತಾ ನಿಂತರು.

ಪುಟಾಣಿಗಳೆ… ಗ್ರೀನ್ ಟೀ ಎಂದರೆ… ದಿವ್ಯೌಷಧಿಯಂತೆ ಕೆಲಸ ಮಾಡುವುದು. ಅದರಿಂದ ಉಪಯೋಗಗಳು ಈ ರೀತಿಯಲ್ಲಿವೆ…

೧. ಇದು ನಿದ್ದೆಯನ್ನು ಸೋಮಾರಿತನವನ್ನು ದೂರ ಮಾಡುವುದು.

೨. ಮೆದುಳನ್ನು ಚುರುಕುಗೊಳಿಸುವುದು.

೩. ನೆನಪಿನ ಶಕ್ತಿ ವೃದ್ಧಿಸುವುದು.

೪. ಬೊಜ್ಜು ಕರಗಿಸುವುದು. ತೂಕ ಇಳಿಸುವುದು, ನಿರಂತರ ಚುರುಕಾಗಿರುವಂತೆ ಮಾಡುವುದು.

೫. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಇದೆ.

೬. ಸಕ್ಕರೆ ಕಾಯಿಲೆ ಬರದಂತೆ, ಹೃದಯಾಘಾತವಾಗುವುದನ್ನು ತಡೆಯುವುದು.

೭. ಬಾಯಿ ವಾಸನೆ ತಡೆಯುವುದು, ಹಲ್ಲು ಹುಳುಕು ಹಿಡಿಯದಂತೆ ತಡೆಯುವುದು.

೮. ಎಲುಬುಗಳನ್ನು ಗಟ್ಟಿಗೊಳಿಸುವುದು. ಮರೆಗುಳಿತನವನ್ನು ದೂರ ಮಾಡುವುದು.

೯. ಹುರುಪು ಉತ್ಸಾಹ ತುಂಬುವುದು.

೧೦. ದೇಹವನ್ನು ಬೆಚ್ಚಗಿಡುವುದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...