Home / ಲೇಖನ / ಇತರೆ / ಆರೋಗ್ಯಕ್ಕೆ…

ಆರೋಗ್ಯಕ್ಕೆ…

ಆರೋಗ್ಯಕ್ಕೆ ಕಾಫಿ ಟೀ ಒಳ್ಳೆಯದಲ್ಲ ಎಂದು ಸಂಶೋಧನೆಗಳು ಸಾರಿ ಸಾರಿ ಹೇಳುತ್ತಿವೆ. ಆದರೂ ಬೆಳಿಗ್ಗೆ ಒಂದು ಕುಡಿದರೆ ಏನಾಗದೆಂದು ಕೆಲವು ಜನರು ಕಾಫಿ-ಟೀಯೊಂದಿಗೆ ರಾಜಿಯಾಗಿರುವರು.

ಇನ್ನು ಕೆಲವರು ಟೀ… ಅದರಲ್ಲೂ ಗ್ರೀನ್ ಟೀ ಎರಡೂ ಹೊತ್ತು ಕುಡಿಯುವುದು ಒಳ್ಳೆಯದೆಂದು ಹೇಳುವರು. ಮೊನ್ನೆ ದಿನ ಶಾಲೆಗೆ ಡಾ|| ವಿ. ನಾಗರಾಜು ಅವರು ಬಂದಿದ್ದರು. ಅವರು ಬರುವಾಗ ದಿನ ಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ, ರಾಷ್ಟ್ರೀಯ ಅಂತರರಾಷ್ಟ್ರೀಯ ಪತ್ರಿಕೆಗಳನ್ನು ತಂದು ಮಕ್ಕಳಿಗೆಲ್ಲ ವಿತರಿಸಿ ಇವುಗಳನ್ನು ಓದಲು ಗ್ರೀನ್ ಟೀ ಕುಡಿಯಲು ಸಲಹೆ ಮಾಡುತ್ತಾ ನಿಂತರು.

ಪುಟಾಣಿಗಳೆ… ಗ್ರೀನ್ ಟೀ ಎಂದರೆ… ದಿವ್ಯೌಷಧಿಯಂತೆ ಕೆಲಸ ಮಾಡುವುದು. ಅದರಿಂದ ಉಪಯೋಗಗಳು ಈ ರೀತಿಯಲ್ಲಿವೆ…

೧. ಇದು ನಿದ್ದೆಯನ್ನು ಸೋಮಾರಿತನವನ್ನು ದೂರ ಮಾಡುವುದು.

೨. ಮೆದುಳನ್ನು ಚುರುಕುಗೊಳಿಸುವುದು.

೩. ನೆನಪಿನ ಶಕ್ತಿ ವೃದ್ಧಿಸುವುದು.

೪. ಬೊಜ್ಜು ಕರಗಿಸುವುದು. ತೂಕ ಇಳಿಸುವುದು, ನಿರಂತರ ಚುರುಕಾಗಿರುವಂತೆ ಮಾಡುವುದು.

೫. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಇದೆ.

೬. ಸಕ್ಕರೆ ಕಾಯಿಲೆ ಬರದಂತೆ, ಹೃದಯಾಘಾತವಾಗುವುದನ್ನು ತಡೆಯುವುದು.

೭. ಬಾಯಿ ವಾಸನೆ ತಡೆಯುವುದು, ಹಲ್ಲು ಹುಳುಕು ಹಿಡಿಯದಂತೆ ತಡೆಯುವುದು.

೮. ಎಲುಬುಗಳನ್ನು ಗಟ್ಟಿಗೊಳಿಸುವುದು. ಮರೆಗುಳಿತನವನ್ನು ದೂರ ಮಾಡುವುದು.

೯. ಹುರುಪು ಉತ್ಸಾಹ ತುಂಬುವುದು.

೧೦. ದೇಹವನ್ನು ಬೆಚ್ಚಗಿಡುವುದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...