Home / ಕವನ / ಕವಿತೆ / ಕಾಬೂಲಿವಾಲಾ

ಕಾಬೂಲಿವಾಲಾ

ಅಂದು ಬದುಕಿದ್ದೆ ನಾನು
ಕಾಬೂಲ್ ಖಂದಹಾರ್‌ನ
ಖರ್‍ಜೂರದ ಗಿಡದಂತೆ
ಸಿಹಿ ಹುಳಿಯ ಸಂಗಮ
ಅಂಗೂರದ ಬಳ್ಳಿಯಂತೆ
ಶಾಂತಿ ಕಾಲವೇ ಇರಲಿ
ಯುದ್ಧ ಕಾಲವೇ ಬರಲಿ
ಬಂದೂಕಿಲ್ಲದ ಬರಿಗೈಯಲಿ
ಕಂಡಿಲ್ಲ ಅವನ
ಸದಾ ಭಯದ ನೆರಳಿನಲೇ
ನನ್ನ ಬದುಕಿನ ಪಯಣ

ವಿಶ್ವವನ್ನೇ ನಿಯಂತ್ರಿಸಲು
ಹಿರಿಯಣ್ಣನ ಹಿಂಸೆಯಾದರೆ
ಒಳಗೆ ಮೀಸೆ ತಿರುಗಿಸುವ
ಪೌರುಷದ ಅಟ್ಟಹಾಸ
ಮಿದುಳಿನಲಿ ಗನ್ನುಗಳ ಸ್ಫೋಟ
ವ್ಯಾಪಕ ಭಯದ ನೋಟ
ಬಿಸಿ ತಟ್ಟಿದೆ ನನಗೆ
ಯುದ್ಧ ಕಾಲದಲೂ –
ಶಾಂತಿ ಸಮಯದಲೂ
ನನ್ನ ಹಕ್ಕುಗಳ ದಮನ
ಕ್ರೂರ ವ್ಯಾಘ್ರರ ನರ್‍ತನ.

ಭೀತಿಯಿಂದ ಧರ್‍ಮ ಪ್ರಶ್ನಿಸಲಿಲ್ಲ
ಹಕ್ಕಿನ ಅಧಿಕಾರ ಕೇಳಲಿಲ್ಲ
ದುಷ್ಟ ಶಿಕ್ಷೆಯ ಸಂದರ್‍ಭವಿರಲಿ
ರಾಷ್ಟ್ರ ರಕ್ಷಣೆಯ ಕಾವಲಿರಲಿ
ಧರ್‍ಮ ಯುದ್ಧದ ಜೇಹಾದೇ ಆಗಿರಲಿ
ಕಪಟ ನಾಟಕದ ಆಟದಲಿ
ಬಲಿಯಾದರು ನನ್ನವರು
ಹಿಂಸೆ-ಅಹಿಂಸೆ ಎರಡೂ ಶಬ್ದಗಳಿಗೂ
ಇಲ್ಲಿ ಒಂದೇ ಅರ್‍ಥ ಅನ್ವಯ
ಮನೆಯಿಂದ ರಣರಂಗದವರೆಗೂ

ಬಲಿಯಾದ ನನ್ನ ಕುಡಿಗಳು.
ನೋವಿನ ತೆಂಗಿನ ಮರದಲಿ
ಯಾತನೆಯ ಕೆಂಪು ರಕ್ತದ ಎಳನೀರು
ಮುಗ್ಧ ಮಕ್ಕಳ ಮಾರಣಹೋಮ
ಧರ್‍ಮ-ರಾಜಕೀಯದ ಸಾವು ನೋವುಗಳ
ಅನುಭವಿಸಿರುವೆ ನಾನು ಬಹಳ
ಸಹಿಸಲಾರೆ ಸಾವಿನಾಟವನು
ಸಾಕು ಮಾಡಿ ಮುಂಡಾಟಿಕೆ
ಬೇಕು ನನಗೆ ನೆಮ್ಮದಿಯ ನೆಲೆ
ಪುಟ್ಟ ಮನೆಯಂಗಳದಲಿ ತೆಂಗಿನಮರ
ನೆಮ್ಮದಿಯ ಶುದ್ಧ ಗಾಳಿ, ನೀರು
ಸಮವಸ್ತ್ರವಿಲ್ಲದ ಪುರುಷರು
ಬಂದೂಕಿಲ್ಲದ ಕೈಗಳು
ಜೀವಪೋಷಕ ಸಂಗಾತಿಗಳು
ಮನುಕುಲವನು ಪ್ರೀತಿಸುವ
ಕಾಬೂಲಿವಾಲಾಗಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...