ಜಾತ್ರೆಗೆ ಹೋದ ಸುಬ್ಬು

ಸೂಟಿಯಲ್ಲಿ ಸುಬ್ಬು ಹೊರಟ
ಜಾತ್ರೆ ನೋಡಲು
ರೊಟ್ಟಿ ಗಂಟು ಕೈಲಿ ಹಿಡಿದ
ಹೊಟ್ಟೆಗೆ ಹಾಕಲು

ಅಂದವಾದ ಬಂಡಿಯೊಂದು
ಸಿದ್ಧವಾಯಿತು
ದಂಡಿಯಾಗಿ ಮಕ್ಕಳೆಲ್ಲ
ಹತ್ತಿಕುಳಿತರು

ಜಾತ್ರೆಗ್ಹೊರಟ ಬಂಡಿಯಲ್ಲಿ
ಸುಬ್ಬು ಹತ್ತಿದ
ಗೆಳೆಯರೆಲ್ಲರನ್ನು ಕಂಡು
ಮನದಿ ಹಿಗ್ಗಿದ

ದಾರಿಯಲ್ಲಿ ಹಾಡುಕುಣಿತ
ಎಲ್ಲ ನಡೆದವು
ಎತ್ತು ಎರಡು ಇದನು ಕೇಳಿ
ದಣಿವ ಮರೆತವು

ಭಾರಿ ಜನರು ಸೇರಿಕೊಂಡು
ತೇರು ಎಳೆದರು
ದೇವ ನಮ್ಮ ಹರಸು ಎಂದು
ಬೇಡಿಕೊಂಡರು

ಸುಬ್ಬು ಜಾತ್ರೆ ಬಯಲನ್ನೆಲ್ಲ
ಸುತ್ತು ಹಾಕಿದ
ಏನು ಕೊಳುವುದೆಂದು ಮನದಿ
ಲೆಕ್ಕಹಾಕಿದ

ಪಕ್ಕನೊಂದು ಹಕ್ಕಿಯನ್ನು
ನೋಡಿಬಿಟ್ಟನು
ಪಂಜರದಿ ಅದನು ಕಂಡು
ಮರುಕ ಪಟ್ಟನು

ಇದ್ದ ಕಾಸು ಕೊಟ್ಟು ಪಕ್ಷಿ
ಕೊಂಡು ಕೊಂಡನು
ಅದರ ಆಸೆ ಏನು ಎಂದು
ತಿಳಿದುಬಿಟ್ಟನು

ಮುದ್ದು ಪಕ್ಷಿಗೇಕೆ ಬಂಧ
ಎಂದುಕೊಂಡನು
ಬಾಗಿಲನ್ನು ತೆಗೆದು ಅದನು
ಹಾರಬಿಟ್ಟನು

ಪಕ್ಷಿ ಹಾರಿ ಮರದ ಮೇಲೆ
ಕುಳಿತು ಕೊಂಡಿತು
ಸುಬ್ಬುವಿಗೆ ಧನ್ಯವಾದ
ಹೇಳಿಬಿಟ್ಟಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿರಿಗನ್ನಡ ತಾಣ
Next post ಭೂನಿಧಿ ಪತ್ತೆ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…