ಸಿರಿಗನ್ನಡ ತಾಣ

ಕುಣಿಯುವ ನವಿಲಿನ ಸುಂದರ ತಾಣ
ಕರುನಾಡಲ್ಲದೆ ಇನ್ನೇನು
ಹಾಡುವ ಕೋಗಿಲೆ ಕೊರಳಿನ ಗಾನ
ಕನ್ನಡವಲ್ಲದೆ ಮತ್ತೇನು?
ಹರಿಯುವ ಹೊಳೆಗಳ ಜುಳುಜುಳು ರವದಲಿ
ಸಿರಿಗನ್ನಡದ ಮಾರ್ದನಿಯು
ತುಳುಕುವ ಕಡಲಿನ ಅಲೆಮೊರೆತದಲಿ
ಸವಿಗನ್ನಡದ ನುಣ್ದನಿಯು
ಗಿಳಿ ಕಾಜಾಣ ಉಲಿಯುವ ಸ್ವರಗಳು
ನಲುಗನ್ನಡ ಸಿರಿಸಂಕೇತ
ಪ್ರಕೃತಿ ಮಿಡಿಯುವ ಶೃತಿ ಲಯ ತಾಳ
ನವ ‘ಕರ್ನಾಟಕ ಸಂಗೀತ’
ಗುಡಿಗೋಪುರಗಳ ಓಂಕಾರದಲಿ
ತಿಳಿಗನ್ನಡದ ಶುಭ ದನಿಯು
ಶೋಭಿತ ಬನಗಳ ಝೇಂಕಾರದಲಿ
ಚೆಲುಗನ್ನಡದ ಗೆಲುದನಿಯ
ಹಸಿರಿನ ಮಡಿಲಲಿ ನಗುತಿಹ ಹೂಗಳು
ಮಧುಗನ್ನಡಕೆ ಮಣಿಮಕುಟ
ಪಸರಿಹ ಬುವಿಯಲಿ ಕರ್ನಾಟಕ ನೆಲೆ
ಶಾಂತ ಸಮೃದ್ಧಿಗೆ ಸಿರಿದೋಟ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಸ್ ೧೯೫೪
Next post ಜಾತ್ರೆಗೆ ಹೋದ ಸುಬ್ಬು

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…