ವನಮಹೋತ್ಸವ

ಕಾಡಿನ ಮೃಗಗಳು
ಒಂದೆಡೆ ಸೇರಿ
ಬಿಸಿ ಬಿಸಿ ಚರ್ಚೆಗೆ ತೊಡಗಿದವು

ಮರಗಳ ಕಡಿದಾ
ಮನುಜರಿಗೆ
ಹಿಡಿ ಹಿಡಿ ಶಾಪ ಹಾಕಿದವು

ಮನುಜನ ಕೃತ್ಯಕೆ
ಮರುಗಿದವು
ಪರಿಹಾರಕೆ ದಾರಿ ಹುಡುಕಿದವು

ಕಾಡನು ಉಳಿಸುವ
ಬಗೆಯದು ಹೇಗೆ
ಎಂಬಾ ಚಿಂತನೆ ನಡೆಸಿದವು

ಮರಗಳ ನೆಡುವಾ
ಕಾಡನು ಬೆಳೆಸುವ
ಎಂಬಾ ದನಿಗಳು ಕೇಳಿದವು

ಪ್ರಾಣಿಗಳೆಲ್ಲಾ
ಒಕ್ಕೊರಲಿಂದಾ
ಸಮ್ಮತಿಯನ್ನು ನೀಡಿದವು

ಕೂಡಲೆ ಹೊರಟವು
ದೂರದವರೆಗೆ
ಮುದದಲಿ ಸಸಿಗಳ ತಂದಿಹವು

ಗುಂಡಿಯ ತೋಡಿ
ಮಣ್ಣನು ಬಗೆದು
ಕನಸುಗಳನ್ನೇ ನೆಟ್ಟಿಹವು

ಮಣ್ಣನು ನೂಕಿ
ನೀರನು ಹಾಕಿ
ಕೇಕೆಯಹಾಕಿ ಕುಣಿದಿಹವು

ಸಸಿಗಳ ನೆಟ್ಟು
ಟ್ರೀಗಾರ್ಡ ಇಟ್ಟು
ಭಾರೀ ಕಾಯಕ ಮಾಡಿದವು

ಕಳೆಯನ್ನು ಕಿತ್ತು
ಗೊಬ್ಬರ ಹೊತ್ತು
ಸೊಂಪಾಗಿ ಸಸಿಗಳ ಬೆಳೆಸಿದವು

ಬೆಳೆದವು ಮರಗಳು
ಬಾನೆತ್ತರಕೆ
ಮೃಗಗಳಿಗಾದವು ಆಶ್ರಯವು

ಈ ಪರಿ ಉತ್ಸವ
ಮಾಡಿದವು
ಮನುಜಗೆ ನೀತಿಯ ಹೇಳಿದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಣ್ಣೀರ ಯಾತ್ರೆ
Next post ನಾಯಿಗೆ ನಿಷೇಧ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…