Home / ಲೇಖನ / ಇತರೆ / ನಾಯಿಗೆ ನಿಷೇಧ

ನಾಯಿಗೆ ನಿಷೇಧ

ಇಟಲಿಯ ದಕ್ಷಿಣ ಭಾಗದಲ್ಲಿರುವ ಕ್ಯಾಂಪೇನಿಯ ಪ್ರಾಂತ್ಯದ ಕೊಂಟ್ರೋನ್ ಪಟ್ಟಣದಲ್ಲಿ ಮೇಯರ್ ಬಲು ಸ್ಟ್ರಾಂಗ್! ಇಡೀ ವಿಶ್ವದಲ್ಲೇ ಇಲ್ಲದ ಆದೇಶವನ್ನು ಇವರು ಮಾಡಿರುವರು.

ಅಬ್ಬಾ! ಮೇಯರ್‌ ಎಂದರೆ ಹೀಗಿರಬೇಕು. ಜನರಿಂದ ಆಯ್ಕೆಯಾಗಿ ಜನರು ಸಾಕಿದ ನಾಯಿಗಳು ಮಧ್ಯಾಹ್ನ ೨ ರಿಂದ ೪ ಗಂಟೆಯ ಅವಧಿಯಲ್ಲಿ ಯಾವುದೇ ಕಾರಣಕ್ಕೂ… ಬೊಗಳದಂತೆ ಅದರ ಮಾಲೀಕರು ನೋಡಿಕೊಳ್ಳಬೇಕೆಂದು ಆದೇಶಿಸಿರುವರು! ಕಾರಣ- ಈ ವೇಳೆಯಲ್ಲಿ ಪಟ್ಟಣದ ಜನರು ವಿಶ್ರಾಂತಿಯಲ್ಲಿರುವರು. ಕಿರು ಸಕ್ಕರೆ ನಿದ್ರೆಯಲ್ಲಿರುವರು. ಅವರ ಭಂಗಕ್ಕೆ ನಾಯಿಯ ಬೊಗಳು ಅಡ್ಡಿಯಾಗಬಾರದು! ಭಪ್ಪರೆ… ಜನರ ಬಗ್ಗೆ ಇಷ್ಟು ಕಾಳಜಿಯೇ..?

ಈ ಸಮಯದಲ್ಲಿ ನಾಯಿ ಬೊಗಳಿದರೆ ಅದರ ಮಾಲೀಕರಿಗೆ ರೂ. ೩೫,೦೦೦ ಅಂದರೆ ೫೦೦ ಯೂರೊಗಳವರೆಗೆ ದಂಡ ವಿಧಿಸಲಾಗುವುದೆಂದು ಮೇಯರ್ ಆದೇಶ ನೀಡಿರುವರು.

-ಹೀಗೆ ಮಧ್ಯಾಹ್ನ ೨ ರಿಂದ ೪ ರವರೆಗಿನ ಹಗಲು ವಿರಾಮದ ಅವಧಿಯಲ್ಲಿ ಅಲ್ಲದೆ ರಾತ್ರಿ ವೇಳೆಯೂ ನಾಯಿಗಳು ಶಬ್ದ ಮಾಡದಂತೆ ನಾಯಿ ಸಾಕುವವರು ಎಚ್ಚರ ವಹಿಸಬೇಕೆಂದೂ ಆದೇಶದಲ್ಲಿ ಮೇಯರ್‌ ಸ್ಪಷ್ಟವಾಗಿ ಆಗ್ರಹಿಸಿರುವರು.

ಇಷ್ಟೇ ಅಲ್ಲದೇ ಸಾರ್‍ವಜನಿಕ ಸ್ಥಳಗಳಲ್ಲಿ ಯಾವುದೇ ಯಾರದೇ ನಾಯಿಗಳನ್ನು ಒಂಟಿಯಾಗಿ ಬಿಡಾಡಿಯಾಗಿ ಬಿಡಬಾರದು!! ಹೀಗೆ ಬಿಟ್ಟರೆ ಅದಕ್ಕೂ ಮಾಲೀಕರು ದಂಡ ಕಟ್ಟಬೇಕು. ನಾಯಿ ಮೂತ್ರ ಮಾಡಿದರೆ- ಮಲ ವಿಸರ್ಜಿಸಿದರೆ ಅದನ್ನು ನೀರು ಹಾಕಿ ಮಾಲೀಕರೇ ಸ್ವಚ್ಛಗೊಳಿಸಬೇಕು! ಇಲ್ಲವಾದರೆ ದಂಡ ಸ್ಥಳದಲ್ಲೇ ಕಟ್ಟಿ ನಾಯಿ ಒಯ್ಯಬೇಕು.

ಹೇಗಿದೆ ಮೇಯರ್‌ ಆದೇಶ?! ಈಗೀಗ ಇಟಲಿಯ ಜನರು ನಾಯಿಗಳನ್ನು ಸಾಕುವುದನ್ನು ಕೈಬಿಟ್ಟಿರುವರು. ನಾಯಿ ರುಚಿಗೆ ಅಂಟಿಕೊಂಡವರು ನಾಯಿ ಬಾಯಿಗೆ ಕ್ಯಾಪ್ ಹಾಕಿ ಭದ್ರಗೊಳಿಸಿ ಸಾಕುತ್ತಿರುವರು ಹೆಚ್ಚು ರಚ್ಚೆ ಹಿಡಿದು ಬೊಗಳಿದ ನಾಯಿಯನ್ನು ಕೊಂದು ತಿಂದು ತೃಪ್ತಿ ಪಟ್ಟುಕೊಂಡು ಬೀಗುವರು.

ಆಹಾ! ನಮ್ಮಲ್ಲಿ ಬೆಂಗಳೂರಿನಲ್ಲಿ ಮೈಸೂರು, ಹುಬ್ಬಳ್ಳಿ, ಧಾರವಾಡ, ಗುಲ್ಬರ್‍ಗ, ಬೆಳಗಾವಿಯಲ್ಲಿ ಮೇಯರ್‌ಗಳೆಲ್ಲ ಈ ರೀತಿ ಆದೇಶ ಹೊರಡಿಸಿದರೆ ಹೇಗೆ? ಕಾದು ನೋಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ