Home / ಕಥೆ / ಕಿರು ಕಥೆ / ಸನ್ಮತಿ

ಸನ್ಮತಿ

ಒಂದು ಕೊಳ. ಅದರ ಬದಿ ಒಂದು ಪುಟ್ಟ ಗುಡಿಸಲು. ಅದರಲ್ಲಿ ಬಾತು ಕೋಳಿಗಳನ್ನು ನೋಡಿಕೊಳ್ಳುತ್ತಾ, ಒಬ್ಬ ಹಳ್ಳಿಯ ವೃದ್ದ ವಾಸವಾಗಿದ್ದ. ಅವನಿಗೆ ಸಂಸಾರದಲ್ಲಿ ಸಾವಿರಾರು ತಾಪತ್ರಯಗಳು, ಮನದಲ್ಲಿ ಸಾವಿರಾರು ಬಗೆಯ ತೀರದ ಪ್ರಶ್ನೆಗಳು ತುಂಬಿಕೊಂಡಿತ್ತು.

ಬಾತು ಕೋಳಿಗಳು ಕೊಳದಲ್ಲಿ ಹಾಯಾಗಿ ಈಜುತ್ತಾ ಕ್ವಾಕ್, ಕ್ವಾಕ್, ಎಂದು ಕೊಂಡು ಉತ್ತರ ಕೊಡುತ್ತಾ ಹಾಯಾಗಿ ಸಾಗುತ್ತಿದ್ದವು.

ವೃದ್ದ ಒಮ್ಮೆ ಈ ಬಾತು ಕೋಳಿಯನ್ನು ದಿಟ್ಟಿಸಿ ನೋಡಿದ. ಕೊಕ್ಕಿನಿಂದ ಕತ್ತಿನ ಭಾಗದವರೆಗೆ ಪ್ರಶ್ನಾರ್ಥ ಚಿಟ್ಟೆಯನ್ನು ಹೊತ್ತ ಈ ಬಾತು ಕೋಳಿ, ಇಷ್ಟು ಹಾಯಾಗಿ ಜೀವನ ನಡೆಸ ಬೇಕಾದರೆ ಇದರ ಹೊಟ್ಟೆಯಲ್ಲಿ ಜೀವನದ ಪ್ರಶ್ನೆಗಳಿಗೆ ಉತ್ತರ ಅಡಿಗಿರ ಬೇಕೆಂದು ಯೋಚಿಸಿದ.

ಒಂದು ಕತ್ತಿಯನ್ನು ಮಸೆದು ಬಾತು ಕೋಳಿಯ ಹೊಟ್ಟೆಯಿಂದ ಉತ್ತರ ಪಡಿಯಲು ಯೋಚಿಸಿದ. ಕತ್ತಿಮಸಿಯುವಾಗ, ಅಲ್ಲಿಗೆ ಒಬ್ಬ ಸನ್ಯಾಸಿ ಬಂದರು.

ಎಲಾ, ವೃದ್ದಾ! “ಏಕೆ ಕತ್ತಿಮಸಿಸುಯುತ್ತಿರುವೆ?” ಎಂದರು.

“ನನ್ನ ಬಾಳಿನ ಪ್ರಶ್ನೆಗಳಿಗೆ ಬಾತುಕೋಳಿ ಹೊಟ್ಟೆಯಲ್ಲಿ ಉತ್ತರವಿದೆ. ಅದನ್ನು ಕೊಚ್ಚಿ ತೆಗೆಯುತ್ತಿದ್ದೆನೆ.” ಎಂದ.

ಎಲಾ, ವೃದ್ಧ! “ಬಾತು ಕೋಳಿ ಹೊಟ್ಟೆ ಬಗೆದು ಕೊಚ್ಚಿದರೆ ನಿನಗೆ ನಿನ್ನ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಸನ್ಮತಿಯ ಮಚ್ಚಿನಲ್ಲಿ ಬಾಳಿನ ಪ್ರಶ್ನೆಗಳನ್ನು ಕೊಚ್ಚಿ ಉತ್ತರ ಕಡೆ”, ಎಂದಾಗ ವೃದ್ಧನ ಮತಿ ಎಚ್ಚೆತ್ತಿತು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...