ಹಾಡು ಹಕ್ಕಿ

ನನ್ನ ಹಾಡು ಹಕ್ಕಿಯಾಗಿ ಹಾರಿ ಹೋಗಲೀ
ನನ್ನ ಹಾಡು ಗೂಡು ಗೂಡು ಸಾಗಿ ಹೋಗಲೀ ||ಪ||

ಮಹಡಿ ಮನೆಯ ಪಂಜರದಲಿ ಸಿಕ್ಕಿ ಹಿಕ್ಕಿ ಹಾಕಧಾಂಗೆ
ಪಟ್ಟಣಗಳ ಬೆಂಕಿ ಪೊಟ್ಟಣಗಳ ಕಡ್ಡಿ ಆಗಧಾಂಗೆ
ಬೊಜ್ಜುಗಳ ಮುಖದ ಮೀಸೆ ಮೇಲೆ ಕುಳಿತು ಕಿಸಿಯಧಾಂಗೆ
ಕಲಿತ ಮಾತ ಮಾರಿಕೋಂತ ಬೀದಿಗಿಳಿಯು ಆಗಧಾಂಗೆ ||೧||

ನೋಟುಗಳನು ಚುಂಚದಿಂದ ಗುಟ್ಟಾಗಿ ಎಣಿಸಧಾಂಗೆ
ವಾರ ನಾರಿಹಂಗೆ ವಾರೆ ನೋಟ ಮೋಡಿ ಮಾಡಧಾಂಗೆ
ಅಂಗಿ ಸಂದುಗಳಲಿ ತೂರಿ ಮಂಗನಾಟ ಆಡಧಾಂಗೆ
ಅಲ್ಲಿ ಇಲ್ಲಿ ಬೆಲ್ಲ ಮಾಡಿ ಬೇಳೆ ಬೇಯ್ಸಿಕೊಳ್ಳಧಾಂಗೆ ||೨||

ಬೂಟುಗಾಲು ನೆಕ್ಕಧಾಂಗೆ ತುಳಿಯೋ ಕಾಲ್ಗೆ ಸಿಕ್ಕಧಾಂಗೆ
ತಾಟಗಿತ್ರಿ ತಂತ್ರದಿಂದ ತೂತು ತೂತು ತೂರಧಾಂಗೆ
ಪೇಟೆ ಬಸವಿಹಂಗೆ ಹಣದ ವಿಟನಿಗಾಗಿ ಕಾಯಧಾಂಗೆ
ಮೇಲೆ ಮೇಲೆ ಹಾರಿಕೋಂತ ಮುಗಿಲು ಚಿಕ್ಕಿ ಆಗಧಾಂಗೆ
ಕೆಳಗೆ ಕೆಳಗೆ ಕುಪ್ಪಳಿಸುತ ನೆಲಗುಮ್ಮ ನಾಗಧಾಂಗೆ ||೩||

ಹರಕು ಮುರುಕು ಗುಡಿಸಲಲ್ಲಿ ಬರಿಯ ಎಲುಬು ಗೂಡುಗಳಲಿ
ಬದುಕುಬಲದ ಭಾವಗೀತೆ ಸೆಲೆಯ ಚಿಮ್ಮಿ ಹೊಮ್ಮಿಸಲಿ
ಸಾವು ನೋವು ನರಳುಗಳಿಗೆ ಉಪಶಮನದ ಗಾಳಿಯಾಗಿ
ಬತ್ತಿದ ಕಣ್ಣಿನ ಕುಳಿಗಳ ಬೆಳಕ ಬಲ್ಬು ಹೊತ್ತಿಸಲಿ ||೪||

ಬರಗಾಲದ ಬಿರುಕುಗಳಲಿ ಛಲದ ಜಲವನುಕ್ಕಿಸಲಿ
ಮಾತು ಕೋತಿ ಕುಣಿಸಧಾಂಗೆ ಮೌನರಾಗ ಮೀಟಲಿ
ಸತ್ತನರರ ನರಕೆ ದಿಟ್ಟ ಸತ್ವದೆಳೆಯ ಕಸಿ ಮಾಡಲಿ ||೫||

ಹರಿವಿಯೊಳಗೆ ಕೊಳೆತ ನೀರ ಶುದ್ದಿ ಮಾಡೋ ತಿಳಿವಾಗಲಿ
ಮಣ್ಣ ಮರ್ಮವರಿತು ಮಣ್ಣ ಬಣ್ಣದೊಳಗೆ ಮುಳಿಗೇಳಲಿ
ತಾನೆ ತಾನೆ ತನನವಾಗಿ ಬದುಕಗೂಡ ಮುದವಾಗಲಿ ||೬||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗ್ರಹಣ
Next post ಇದ್ದರೂ ಇರದಂತೆ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…