Home / ಕವನ / ಕವಿತೆ / ಹಾಡು ಹಕ್ಕಿ

ಹಾಡು ಹಕ್ಕಿ

ನನ್ನ ಹಾಡು ಹಕ್ಕಿಯಾಗಿ ಹಾರಿ ಹೋಗಲೀ
ನನ್ನ ಹಾಡು ಗೂಡು ಗೂಡು ಸಾಗಿ ಹೋಗಲೀ ||ಪ||

ಮಹಡಿ ಮನೆಯ ಪಂಜರದಲಿ ಸಿಕ್ಕಿ ಹಿಕ್ಕಿ ಹಾಕಧಾಂಗೆ
ಪಟ್ಟಣಗಳ ಬೆಂಕಿ ಪೊಟ್ಟಣಗಳ ಕಡ್ಡಿ ಆಗಧಾಂಗೆ
ಬೊಜ್ಜುಗಳ ಮುಖದ ಮೀಸೆ ಮೇಲೆ ಕುಳಿತು ಕಿಸಿಯಧಾಂಗೆ
ಕಲಿತ ಮಾತ ಮಾರಿಕೋಂತ ಬೀದಿಗಿಳಿಯು ಆಗಧಾಂಗೆ ||೧||

ನೋಟುಗಳನು ಚುಂಚದಿಂದ ಗುಟ್ಟಾಗಿ ಎಣಿಸಧಾಂಗೆ
ವಾರ ನಾರಿಹಂಗೆ ವಾರೆ ನೋಟ ಮೋಡಿ ಮಾಡಧಾಂಗೆ
ಅಂಗಿ ಸಂದುಗಳಲಿ ತೂರಿ ಮಂಗನಾಟ ಆಡಧಾಂಗೆ
ಅಲ್ಲಿ ಇಲ್ಲಿ ಬೆಲ್ಲ ಮಾಡಿ ಬೇಳೆ ಬೇಯ್ಸಿಕೊಳ್ಳಧಾಂಗೆ ||೨||

ಬೂಟುಗಾಲು ನೆಕ್ಕಧಾಂಗೆ ತುಳಿಯೋ ಕಾಲ್ಗೆ ಸಿಕ್ಕಧಾಂಗೆ
ತಾಟಗಿತ್ರಿ ತಂತ್ರದಿಂದ ತೂತು ತೂತು ತೂರಧಾಂಗೆ
ಪೇಟೆ ಬಸವಿಹಂಗೆ ಹಣದ ವಿಟನಿಗಾಗಿ ಕಾಯಧಾಂಗೆ
ಮೇಲೆ ಮೇಲೆ ಹಾರಿಕೋಂತ ಮುಗಿಲು ಚಿಕ್ಕಿ ಆಗಧಾಂಗೆ
ಕೆಳಗೆ ಕೆಳಗೆ ಕುಪ್ಪಳಿಸುತ ನೆಲಗುಮ್ಮ ನಾಗಧಾಂಗೆ ||೩||

ಹರಕು ಮುರುಕು ಗುಡಿಸಲಲ್ಲಿ ಬರಿಯ ಎಲುಬು ಗೂಡುಗಳಲಿ
ಬದುಕುಬಲದ ಭಾವಗೀತೆ ಸೆಲೆಯ ಚಿಮ್ಮಿ ಹೊಮ್ಮಿಸಲಿ
ಸಾವು ನೋವು ನರಳುಗಳಿಗೆ ಉಪಶಮನದ ಗಾಳಿಯಾಗಿ
ಬತ್ತಿದ ಕಣ್ಣಿನ ಕುಳಿಗಳ ಬೆಳಕ ಬಲ್ಬು ಹೊತ್ತಿಸಲಿ ||೪||

ಬರಗಾಲದ ಬಿರುಕುಗಳಲಿ ಛಲದ ಜಲವನುಕ್ಕಿಸಲಿ
ಮಾತು ಕೋತಿ ಕುಣಿಸಧಾಂಗೆ ಮೌನರಾಗ ಮೀಟಲಿ
ಸತ್ತನರರ ನರಕೆ ದಿಟ್ಟ ಸತ್ವದೆಳೆಯ ಕಸಿ ಮಾಡಲಿ ||೫||

ಹರಿವಿಯೊಳಗೆ ಕೊಳೆತ ನೀರ ಶುದ್ದಿ ಮಾಡೋ ತಿಳಿವಾಗಲಿ
ಮಣ್ಣ ಮರ್ಮವರಿತು ಮಣ್ಣ ಬಣ್ಣದೊಳಗೆ ಮುಳಿಗೇಳಲಿ
ತಾನೆ ತಾನೆ ತನನವಾಗಿ ಬದುಕಗೂಡ ಮುದವಾಗಲಿ ||೬||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...