Home / ಕವನ / ಕವಿತೆ / ಹಾಡು ಹಕ್ಕಿ

ಹಾಡು ಹಕ್ಕಿ

ನನ್ನ ಹಾಡು ಹಕ್ಕಿಯಾಗಿ ಹಾರಿ ಹೋಗಲೀ
ನನ್ನ ಹಾಡು ಗೂಡು ಗೂಡು ಸಾಗಿ ಹೋಗಲೀ ||ಪ||

ಮಹಡಿ ಮನೆಯ ಪಂಜರದಲಿ ಸಿಕ್ಕಿ ಹಿಕ್ಕಿ ಹಾಕಧಾಂಗೆ
ಪಟ್ಟಣಗಳ ಬೆಂಕಿ ಪೊಟ್ಟಣಗಳ ಕಡ್ಡಿ ಆಗಧಾಂಗೆ
ಬೊಜ್ಜುಗಳ ಮುಖದ ಮೀಸೆ ಮೇಲೆ ಕುಳಿತು ಕಿಸಿಯಧಾಂಗೆ
ಕಲಿತ ಮಾತ ಮಾರಿಕೋಂತ ಬೀದಿಗಿಳಿಯು ಆಗಧಾಂಗೆ ||೧||

ನೋಟುಗಳನು ಚುಂಚದಿಂದ ಗುಟ್ಟಾಗಿ ಎಣಿಸಧಾಂಗೆ
ವಾರ ನಾರಿಹಂಗೆ ವಾರೆ ನೋಟ ಮೋಡಿ ಮಾಡಧಾಂಗೆ
ಅಂಗಿ ಸಂದುಗಳಲಿ ತೂರಿ ಮಂಗನಾಟ ಆಡಧಾಂಗೆ
ಅಲ್ಲಿ ಇಲ್ಲಿ ಬೆಲ್ಲ ಮಾಡಿ ಬೇಳೆ ಬೇಯ್ಸಿಕೊಳ್ಳಧಾಂಗೆ ||೨||

ಬೂಟುಗಾಲು ನೆಕ್ಕಧಾಂಗೆ ತುಳಿಯೋ ಕಾಲ್ಗೆ ಸಿಕ್ಕಧಾಂಗೆ
ತಾಟಗಿತ್ರಿ ತಂತ್ರದಿಂದ ತೂತು ತೂತು ತೂರಧಾಂಗೆ
ಪೇಟೆ ಬಸವಿಹಂಗೆ ಹಣದ ವಿಟನಿಗಾಗಿ ಕಾಯಧಾಂಗೆ
ಮೇಲೆ ಮೇಲೆ ಹಾರಿಕೋಂತ ಮುಗಿಲು ಚಿಕ್ಕಿ ಆಗಧಾಂಗೆ
ಕೆಳಗೆ ಕೆಳಗೆ ಕುಪ್ಪಳಿಸುತ ನೆಲಗುಮ್ಮ ನಾಗಧಾಂಗೆ ||೩||

ಹರಕು ಮುರುಕು ಗುಡಿಸಲಲ್ಲಿ ಬರಿಯ ಎಲುಬು ಗೂಡುಗಳಲಿ
ಬದುಕುಬಲದ ಭಾವಗೀತೆ ಸೆಲೆಯ ಚಿಮ್ಮಿ ಹೊಮ್ಮಿಸಲಿ
ಸಾವು ನೋವು ನರಳುಗಳಿಗೆ ಉಪಶಮನದ ಗಾಳಿಯಾಗಿ
ಬತ್ತಿದ ಕಣ್ಣಿನ ಕುಳಿಗಳ ಬೆಳಕ ಬಲ್ಬು ಹೊತ್ತಿಸಲಿ ||೪||

ಬರಗಾಲದ ಬಿರುಕುಗಳಲಿ ಛಲದ ಜಲವನುಕ್ಕಿಸಲಿ
ಮಾತು ಕೋತಿ ಕುಣಿಸಧಾಂಗೆ ಮೌನರಾಗ ಮೀಟಲಿ
ಸತ್ತನರರ ನರಕೆ ದಿಟ್ಟ ಸತ್ವದೆಳೆಯ ಕಸಿ ಮಾಡಲಿ ||೫||

ಹರಿವಿಯೊಳಗೆ ಕೊಳೆತ ನೀರ ಶುದ್ದಿ ಮಾಡೋ ತಿಳಿವಾಗಲಿ
ಮಣ್ಣ ಮರ್ಮವರಿತು ಮಣ್ಣ ಬಣ್ಣದೊಳಗೆ ಮುಳಿಗೇಳಲಿ
ತಾನೆ ತಾನೆ ತನನವಾಗಿ ಬದುಕಗೂಡ ಮುದವಾಗಲಿ ||೬||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...