ಅವ್ವ ನಿನ್ನ ಮಮತೆಯ
ತೊಳ್ ತೆಕ್ಕೆಯಲ್ಲಿ ಹುಟ್ಟಿ
ಬೆಳೆದವರು ಬೆಳೆಯುತ್ತಾ
ಎತ್ತರದುತ್ತರಕ್ಕೆ ಬೆಳೆದರು
ನೀ ಉಣಿಸಿದ ಮೊಲೆ ಹಾಲ ಕುಡಿದು
ಮತ್ತೇರಿದವರು.
ಹಸಿರ ಹೊನ್ನ ಹೊತ್ತಿಗೆಯಲ್ಲಿ
ಪವಡಿಸಿ ತಮ್ಮ ಸ್ವಾರ್ಥಕ್ಕಾಗಿ
ಕನಸ ಕಾಣ ತೊಡಗಿದವರು
ಮರೆತರು ನಿನ್ನ ಇರುವಿಕೆಯ
ನಿನ್ನತನದ ಅರಿವೆ ತೊಟ್ಟು
ನೆತ್ತರ ತಿಲಕ ಹಣೆಯಲ್ಲಿರಿಸಿ
ಧರ್ಮ ದಿಕ್ಷೆ ಕುದುರೆಯ ಏರಿದವರು
ದುರ್ಯೋದನಾ ದುಶ್ಯಾಸನಾದಿಗಳ
ಅಂಗಸಂಗ ಋಣಹೊತ್ತು
ಶಕುನಿಯ ಜಾಲಕ್ಕೆ ಸಿಲುಕಿ
ಕುರುಕ್ಷೇತ್ರವ ಕಾಣಗೈದವರು
ಇಲ್ಲಿ ಶ್ರೀ ಕೃಷ್ಣನಿಲ್ಲದ ಧರ್ಮಯುದ್ಧ
ಕೈಯಲ್ಲಿ ಹಿಡಿದ ವಿಜಯಪತಾಕೆ
ಉದಾರ ಮನಸ್ಸು
ಹಸಿವಿಗೆ ಕಾವ ಹೋಯ್ದ ಅಕ್ಷಯ ಪಾತ್ರೆ
ಅಕ್ಕ ತಂಗೀರಗೆಲ್ಲಿಯ ಶ್ರೀರಕ್ಷೆ
ಮತ್ತೆ ಮತ್ತೆ ದ್ಯೂತದ ಸಂಚು
ದಾಳಕ್ಕೆ ದಾಳ ಪಣಕ್ಕೆ ಇಟ್ಟು
ಹರಕೆಯ ಕುರಿಯ ಬಿಟ್ಟಂತವರಿಗೆ
ನಿನ್ನದೆಲ್ಲಿಯ ಚಿಂತೆ ಅವ್ವ
*****
Related Post
ಸಣ್ಣ ಕತೆ
-
ಸಂಬಂಧ
ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…
-
ನಿಂಗನ ನಂಬಿಗೆ
ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…
-
ನಂಟಿನ ಕೊನೆಯ ಬಲ್ಲವರಾರು?
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…
-
ಬಾಗಿಲು ತೆರೆದಿತ್ತು
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…