Home / ಕವನ / ಅನುವಾದ / ಭೂತದರ್‍ಶನ

ಭೂತದರ್‍ಶನ

ಮೂಲ: ವಿಲಿಯಂ ಬಟ್ಲರ್ ಏಟ್ಸ್

ರಕ್ಷಣೆ ಇದೆಯೆಂತಲೇ ಅಣಕದ ಮಾತಿನಲ್ಲಿ
ಭೂತ ದರ್‍ಶನ ಕುರಿತು ಮಾತನಾಡಿದೆ ನಾನು.
ದಿಟ್ಟವೋ ಸೊಟ್ಟವೋ ಒಟ್ಟು ಜನರುಚಿಯಲ್ಲೇ
ಎಳ್ಳಷ್ಟೂ ವಿಶ್ವಾಸ ಇಲ್ಲವೆಂದೇ ಅದನ್ನು
ಸಾಧಿಸುವ, ಸಂಭಾವ್ಯವೆಂದು ವಾದಿಸುವ
ಗೋಜಿಗೇ ನಾ ಹೋಗಲಿಲ್ಲ. ನಿಜವೆಂದರೆ
ಭೂತ ಕಂಡಿದೆ ನನಗೆ ಹದಿನೈದು ಥರದಲ್ಲಿ,
ಗೂಟಕ್ಕೆ ನೇತ ಕೋಟು ಬಹು ಘೋರ ಅದರಲ್ಲಿ.

ಯೋಜಿಸಿ ಸಾಧಿಸಿದ್ದು ನನ್ನ ಅರೆ‌ಏಕಾಂತ,
ಅದರ ಅರ್‍ಧ ಪ್ರಿಯವಾದ್ದೂ ಇಲ್ಲ ಈತನಕ,
ನಟ್ಟಿರುಳವರೆಗೆ ಮಲಗದೆ ಕೂರಬಹುದು.
ತಿಳಿಯದಿದ್ದಾಗಲೂ ನನ್ನ ಮಾತಿನ ಅರ್‍ಥ
ತೋರಗೊಡದಂಥ ಸೂಕ್ಷ್ಮಮತಿ ಜೊತೆಗೆ
ಕೂತು ಏನೇನೆಲ್ಲ ಹರಟಬಹುದಲ್ಲ.
ಭೂತ ಕಂಡಿದೆ ನನಗೆ ಹದಿನೈದು ಥರದಲ್ಲಿ,
ಗೂಟಕ್ಕೆ ನೇತ ಕೋಟು ಬಹು ಘೋರ ಅದರಲ್ಲಿ.

ಮುದುಕನಾಗುತ್ತ ಹೋದಂತೆ ಒಬ್ಬ ಮನುಷ್ಯ
ಆಳವಾಗುತ್ತದೆ ಅವನ ಸಂತೋಷ,
ತುಂಬಿಬಿಡುತ್ತದೆ ಅವನ ಖಾಲಿ ಎದೆ ಕೊನೆಗೆ,
ಇಂಥ ಬಲವೆಲ್ಲದರ ಅಗತ್ಯವಿದೆ ಅವನಿಗೆ,
ಏಕೆಂದರೆ ಇರುಳು ಬೆಳೆಯುತ್ತ ಇರುತ್ತದೆ
ಭಯ ರಹಸ್ಯಗಳನ್ನು ತೆರೆಯುತ್ತ ಇರುತ್ತದೆ.
ಭೂತ ಕಂಡಿದೆ ನನಗೆ ಹದಿನೈದು ಥರದಲ್ಲಿ,
ಗೂಟಕ್ಕೆ ನೇತ ಕೋಟು ಬಹು ಘೋರ ಅದರಲ್ಲಿ.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...