Home / ಕವನ / ಅನುವಾದ / ಭೂತದರ್‍ಶನ

ಭೂತದರ್‍ಶನ

ಮೂಲ: ವಿಲಿಯಂ ಬಟ್ಲರ್ ಏಟ್ಸ್

ರಕ್ಷಣೆ ಇದೆಯೆಂತಲೇ ಅಣಕದ ಮಾತಿನಲ್ಲಿ
ಭೂತ ದರ್‍ಶನ ಕುರಿತು ಮಾತನಾಡಿದೆ ನಾನು.
ದಿಟ್ಟವೋ ಸೊಟ್ಟವೋ ಒಟ್ಟು ಜನರುಚಿಯಲ್ಲೇ
ಎಳ್ಳಷ್ಟೂ ವಿಶ್ವಾಸ ಇಲ್ಲವೆಂದೇ ಅದನ್ನು
ಸಾಧಿಸುವ, ಸಂಭಾವ್ಯವೆಂದು ವಾದಿಸುವ
ಗೋಜಿಗೇ ನಾ ಹೋಗಲಿಲ್ಲ. ನಿಜವೆಂದರೆ
ಭೂತ ಕಂಡಿದೆ ನನಗೆ ಹದಿನೈದು ಥರದಲ್ಲಿ,
ಗೂಟಕ್ಕೆ ನೇತ ಕೋಟು ಬಹು ಘೋರ ಅದರಲ್ಲಿ.

ಯೋಜಿಸಿ ಸಾಧಿಸಿದ್ದು ನನ್ನ ಅರೆ‌ಏಕಾಂತ,
ಅದರ ಅರ್‍ಧ ಪ್ರಿಯವಾದ್ದೂ ಇಲ್ಲ ಈತನಕ,
ನಟ್ಟಿರುಳವರೆಗೆ ಮಲಗದೆ ಕೂರಬಹುದು.
ತಿಳಿಯದಿದ್ದಾಗಲೂ ನನ್ನ ಮಾತಿನ ಅರ್‍ಥ
ತೋರಗೊಡದಂಥ ಸೂಕ್ಷ್ಮಮತಿ ಜೊತೆಗೆ
ಕೂತು ಏನೇನೆಲ್ಲ ಹರಟಬಹುದಲ್ಲ.
ಭೂತ ಕಂಡಿದೆ ನನಗೆ ಹದಿನೈದು ಥರದಲ್ಲಿ,
ಗೂಟಕ್ಕೆ ನೇತ ಕೋಟು ಬಹು ಘೋರ ಅದರಲ್ಲಿ.

ಮುದುಕನಾಗುತ್ತ ಹೋದಂತೆ ಒಬ್ಬ ಮನುಷ್ಯ
ಆಳವಾಗುತ್ತದೆ ಅವನ ಸಂತೋಷ,
ತುಂಬಿಬಿಡುತ್ತದೆ ಅವನ ಖಾಲಿ ಎದೆ ಕೊನೆಗೆ,
ಇಂಥ ಬಲವೆಲ್ಲದರ ಅಗತ್ಯವಿದೆ ಅವನಿಗೆ,
ಏಕೆಂದರೆ ಇರುಳು ಬೆಳೆಯುತ್ತ ಇರುತ್ತದೆ
ಭಯ ರಹಸ್ಯಗಳನ್ನು ತೆರೆಯುತ್ತ ಇರುತ್ತದೆ.
ಭೂತ ಕಂಡಿದೆ ನನಗೆ ಹದಿನೈದು ಥರದಲ್ಲಿ,
ಗೂಟಕ್ಕೆ ನೇತ ಕೋಟು ಬಹು ಘೋರ ಅದರಲ್ಲಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...