ದೇವ ಭಾವ

ಜಲದ ಮೇಲೆ ತೇಲುತ್ತಿರುವ ಹಿಮದಂತೆ
ನನ್ನ ಬಾವಗಳೇಕೆ ಹೆಪ್ಪುಗಟ್ಟಿದವು
ಹೆಪ್ಪಿನಲ್ಲಿಯೂ ಅದು ಸಾಕಾರ ಚಿತ್ರ
ಮರೆತೇಕೆ ಮತ್ತೇನು ನನ್ನ ಕಾಡಿದವು

ಮನಸ್ಸೊಂದೆ ನನಗೆ ಬಂಧಿಸಿದೇನು
ಮನವನ್ನೇ ನನ್ನೇಕೆ ಬಂಧಿಸಲಾರೆ
ಮನವನ್ನು ನಂಬಿ ಕುಣಿಯುವೆಯಾದರೆ
ಆ ಶಿವನನ್ನು ನಾನೆಂದೂ ಕಾಣಲಾರೆ

ಕರ್‍ಮದ ಬಿಂದುವಿನಲ್ಲೂ ದೇವನೆ
ನನ್ನನ್ನೋ ಹುಡುಕಿಕೊಳ್ಳುವುದೇಕೆ
ಕರ್‍ಮದ ಇಂಚು ಇಂಚುಗಳೂ ನನ್ನ
ಇದ್ದರೂ ಕರ್‍ಮ ದೇವರಿಗೆ ಅರ್‍ಪಿಸಬಾರದೇಕೆ

ಯಾವುದೋ ನಶ್ವರ ಅದಕ್ಕೆ ಶಾಶ್ವತ
ಯಾವುದೋ ಭೋಗ ಅದಕ್ಕೆ ಸುಖವೆಂದೆ
ಯಾವ ಮಾರ್‍ಗಕ್ಕೂ ಹೋಗಬೇಕೆಂದವನು
ಮಾಣಿಕ್ಯ ವಿಠಲ ದುಃಖವೆಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೫೩
Next post ಮಲ್ಲಿ – ೩೧

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…