ಮಹಾನ್ ಕಲಾಕಾರ

ಒಬ್ಬ ದೊಡ್ಡ ಕಲಾವಿದನ ಹತ್ತಿರ ಒಬ್ಬ ವ್ಯಾಪಾರಿ ಬಂದು ಒಂದು ಸುಂದರ ಚಿತ್ರ ಬರೆದು ಕೊಡಲು ಹೇಳಿದ. ಅವನು ಒಂದು ನಿಬಂಧನೆ ಹಾಕಿದ. “ಬರಿಯುವ ಚಿತ್ರದಲ್ಲಿ, ಹಕ್ಕಿ ಹಾಡಬೇಕು, ಹಾರ ಬೇಕು, ಗಿಡ ಚಿಗುರ ಬೇಕು, ಹೂವು ಅರಳಬೇಕು, ಹಣ್ಣು ಬಿಡಬೇಕು, ಕೋಗಿಲೆ ಹಾಡಬೇಕು, ಕೊಳದಲ್ಲಿ ಹಂಸ ತೇಲಬೇಕು. ಆಗಸದಲ್ಲಿ ಬೆಳ್ಳಿಯ ಮೋಡ ತೇಲಬೇಕು. ಇಂಥ ಚಿತ್ರ ಬರೆದು ತೋರಿಸಿದರೆ ನಾನು ನೂರು ಕೋಟಿ ರೂಪಾಯಿ ಕೊಡುವೆ” ಎಂದ.

ಚಿತ್ರಕಾರ ಹೇಳಿದ “ಇದು ನನ್ನಿಂದ ಸಾಧ್ಯವಿಲ್ಲದಿರಬಹುದು. ಆದರೆ ಓರ್ವ ಅತ್ಯಂತ ಮಹಾನ್ ಕಲಾವಿದ, ಅವನು ಕುಂಚವೂ ಇಲ್ಲದೆ ಕೌಶಲ್ಯದಿಂದ ಆಗಲೆ ಬಿಡಿಸಿದ ಚಿತ್ರ ನಾ ತೋರಿಸುವೆ. ಆದರೆ ಅವನ ನಿಬಂಧನೆ ನಿಮಗೆ ಏನು ಗೊತ್ತಾ?” ಎಂದ.

“ಆ ಚಿತ್ರದಲ್ಲಿ ಕಾಣುವ ಭೂಮಿ ಎಂದೂ ಹಸುರಾಗಿರಬೇಕು. ಆಕಾಶವನ್ನು ಕಲುಷಿತ ಗೊಳಿಸಬಾರದು. ಹಕ್ಕಿ ಕೊರಲ ನಿರ್ಲಕ್ಷಿಸ ಬಾರದು. ಹೂವು ಚಿಗುರು ಬಾಡದಿರಬೇಕು. ಹಾಗೇ ಇಡದಿದ್ದರೆ ನಿನ್ನ ಸರ್ವ ನಾಶಕ್ಕೆ ತಯಾರಿರಬೇಕು.” ಎಂದನು. ಮೊದಲು ಅಂತಹ ಚಿತ್ರ ಬರೆಯಲಿ ಆ ಕಲಾವಿದ. ಆಮೇಲೆ ನೋಡೋಣ ಎಂದ ವ್ಯಾಪಾರಿ. ಚಿತ್ರ ಈಗಲೆ ತಯಾರಿದೆ. ಕಲಾವಿದನನ್ನು ಈಗ ಕಾಣದಾದರು ಅವನ ಕಲಾಕೃತಿ ನೋಡಬಹುದು ಎಂದ ಕಲಾವಿದ.

“ಖಂಡಿತ ನೋಡಲು ಇಚ್ಛಿಸುತ್ತೇನೆ” ಎಂದ ವ್ಯಾಪಾರಿ. ಕಲಾವಿದ ಅವನ ಮನೆಯ ಹಿಂದಿನ ತೋಟಕ್ಕೆ ಕರೆದುಕೊಂಡು ಹೋದ. ಅದು ಅತಿ ಸುಂದರ ತೋಟ. ವ್ಯಾಪಾರಿ ಬಯಸಿದ ಗಿಡ ವೃಕ್ಷ, ಚಿಗುರು, ಹೂವು, ಕೊಳ ಹಂಸ, ಕೋಗಿಲೆ ಗಾನ, ಹಕ್ಕಿ ಚಿಲಿಪಿಲಿ ಎಲ್ಲಾ ಇದ್ದವು. ಇದು ಮಹಾನ್ ಕಲಾಕಾರನ ದೈವ ಸೃಷ್ಟಿ. ಇದಕ್ಕೆ ನೀನು ನೂರು ಕೋಟಿ ಬೆಲೆ ಕಟ್ಟುತ್ತೀಯಾ?” ಎಂದ.

“ಮೊದಲು ಪ್ರಕೃತಿ ಪೂಜಿಸು, ಕಾಪಾಡು, ಆಮೇಲೆ ನಿನ್ನ ವ್ಯಾಪಾರ,” ಅಂದಾಗ ವ್ಯಾಪಾರಿಯ ಕಣ್ಣು ತೆರೆಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರವಪ್ಪ ಹಲಸಿರಲು ಊರಿಗೆಂತು ಬರವಕ್ಕು?
Next post ಅಮರ ಜೀವನ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…