Home / ಕಥೆ / ಕಿರು ಕಥೆ / ಮಹಾನ್ ಕಲಾಕಾರ

ಮಹಾನ್ ಕಲಾಕಾರ

ಒಬ್ಬ ದೊಡ್ಡ ಕಲಾವಿದನ ಹತ್ತಿರ ಒಬ್ಬ ವ್ಯಾಪಾರಿ ಬಂದು ಒಂದು ಸುಂದರ ಚಿತ್ರ ಬರೆದು ಕೊಡಲು ಹೇಳಿದ. ಅವನು ಒಂದು ನಿಬಂಧನೆ ಹಾಕಿದ. “ಬರಿಯುವ ಚಿತ್ರದಲ್ಲಿ, ಹಕ್ಕಿ ಹಾಡಬೇಕು, ಹಾರ ಬೇಕು, ಗಿಡ ಚಿಗುರ ಬೇಕು, ಹೂವು ಅರಳಬೇಕು, ಹಣ್ಣು ಬಿಡಬೇಕು, ಕೋಗಿಲೆ ಹಾಡಬೇಕು, ಕೊಳದಲ್ಲಿ ಹಂಸ ತೇಲಬೇಕು. ಆಗಸದಲ್ಲಿ ಬೆಳ್ಳಿಯ ಮೋಡ ತೇಲಬೇಕು. ಇಂಥ ಚಿತ್ರ ಬರೆದು ತೋರಿಸಿದರೆ ನಾನು ನೂರು ಕೋಟಿ ರೂಪಾಯಿ ಕೊಡುವೆ” ಎಂದ.

ಚಿತ್ರಕಾರ ಹೇಳಿದ “ಇದು ನನ್ನಿಂದ ಸಾಧ್ಯವಿಲ್ಲದಿರಬಹುದು. ಆದರೆ ಓರ್ವ ಅತ್ಯಂತ ಮಹಾನ್ ಕಲಾವಿದ, ಅವನು ಕುಂಚವೂ ಇಲ್ಲದೆ ಕೌಶಲ್ಯದಿಂದ ಆಗಲೆ ಬಿಡಿಸಿದ ಚಿತ್ರ ನಾ ತೋರಿಸುವೆ. ಆದರೆ ಅವನ ನಿಬಂಧನೆ ನಿಮಗೆ ಏನು ಗೊತ್ತಾ?” ಎಂದ.

“ಆ ಚಿತ್ರದಲ್ಲಿ ಕಾಣುವ ಭೂಮಿ ಎಂದೂ ಹಸುರಾಗಿರಬೇಕು. ಆಕಾಶವನ್ನು ಕಲುಷಿತ ಗೊಳಿಸಬಾರದು. ಹಕ್ಕಿ ಕೊರಲ ನಿರ್ಲಕ್ಷಿಸ ಬಾರದು. ಹೂವು ಚಿಗುರು ಬಾಡದಿರಬೇಕು. ಹಾಗೇ ಇಡದಿದ್ದರೆ ನಿನ್ನ ಸರ್ವ ನಾಶಕ್ಕೆ ತಯಾರಿರಬೇಕು.” ಎಂದನು. ಮೊದಲು ಅಂತಹ ಚಿತ್ರ ಬರೆಯಲಿ ಆ ಕಲಾವಿದ. ಆಮೇಲೆ ನೋಡೋಣ ಎಂದ ವ್ಯಾಪಾರಿ. ಚಿತ್ರ ಈಗಲೆ ತಯಾರಿದೆ. ಕಲಾವಿದನನ್ನು ಈಗ ಕಾಣದಾದರು ಅವನ ಕಲಾಕೃತಿ ನೋಡಬಹುದು ಎಂದ ಕಲಾವಿದ.

“ಖಂಡಿತ ನೋಡಲು ಇಚ್ಛಿಸುತ್ತೇನೆ” ಎಂದ ವ್ಯಾಪಾರಿ. ಕಲಾವಿದ ಅವನ ಮನೆಯ ಹಿಂದಿನ ತೋಟಕ್ಕೆ ಕರೆದುಕೊಂಡು ಹೋದ. ಅದು ಅತಿ ಸುಂದರ ತೋಟ. ವ್ಯಾಪಾರಿ ಬಯಸಿದ ಗಿಡ ವೃಕ್ಷ, ಚಿಗುರು, ಹೂವು, ಕೊಳ ಹಂಸ, ಕೋಗಿಲೆ ಗಾನ, ಹಕ್ಕಿ ಚಿಲಿಪಿಲಿ ಎಲ್ಲಾ ಇದ್ದವು. ಇದು ಮಹಾನ್ ಕಲಾಕಾರನ ದೈವ ಸೃಷ್ಟಿ. ಇದಕ್ಕೆ ನೀನು ನೂರು ಕೋಟಿ ಬೆಲೆ ಕಟ್ಟುತ್ತೀಯಾ?” ಎಂದ.

“ಮೊದಲು ಪ್ರಕೃತಿ ಪೂಜಿಸು, ಕಾಪಾಡು, ಆಮೇಲೆ ನಿನ್ನ ವ್ಯಾಪಾರ,” ಅಂದಾಗ ವ್ಯಾಪಾರಿಯ ಕಣ್ಣು ತೆರೆಯಿತು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...