Home / ಕವನ / ಕವಿತೆ / ಮೈಸೂರ ಮಲ್ಲಿಗೆ

ಮೈಸೂರ ಮಲ್ಲಿಗೆ

ಮೈಸೂರ ಮಲ್ಲಿಗೆಯಾ
ಮುಡಿದು ಕಣ್ಸನ್ನೆಯಾ
ನೋಟದಲಿ ಪಿಸು ಮಾತಿನಾ
ಮೋಡಿಯಲಿ ಚಲುವ ರಾಶಿಯ
ಬೀರುತ ಮನ ಸೆಳೆದಾ ನಲ್ಲೆಽಽಽಽ
ಕಾದಿರಲು ನಲ್ಲನಿಗಾಗಿ
ಬೆಳದಿಂಗಳು ಮೂಡಿತು
ಹೊನ್ನ ಮಳೆ ಸುರಿಯಿತು
ಗರಿಗೆದರಿ ಕುಣಿದಾ ನವಿಲು
ಅವಳ ನೋಟಕ್ಕೆ ನಾಚಿತ್ತುಽಽಽಽ

ಹೆಣ್ಣು-
ಬೆಳದಿಂಗಳ ಬಾಳ ಹುಣ್ಣಿಮೆಯ
ಮೂಡುವಾಸೆಯಲಿ ತುಂತುರು ತುಂತುರು
ಮಳೆಹನಿಯಲಿ ತನನತಾನನ
ಧರೆಯು ತಣಿಯಿತು ನನ್ನ ಮನದಿ
ನಿನ್ನ ಗಾನಮೌನವಾಗಿ ವಿರಹಿಸಿತು

ಮೂಡಿದಾ ಮಲ್ಲಿಗೆ ದಳಗಳಲಿ
ನಿನ್ನ ನಗೆಯ ಬಿಂಬವನಿರಿಸಿ
ಸುಮವಾಗಿ ಅರಳಿ ದುಂಬಿಯಾಗಿ
ಬಾರದಿರುವೆ ಏಕೋ ನಾ ಕಾಣೆನೆ

ಬಾಳ ದೀವಿಗೆಯ ಜ್ಯೋತಿಯಾಗಿಹೆ
ಮನವ ತುಂಬಿದೆ ಜೊತೆಯಾಗಿ
ನಲಿವ ಆಸೆಯಲಿ ನಿನ್ನ ಕಾಣುವ
ಬಯಕೆ ಹೊಮ್ಮಿದೆ ಏಕೋನಾ ಕಾಣೆನೆ

ತಾಯೆ ಚಾಮುಂಡಿಯೆ ನಮಿಸಿ
ಬೇಡುವೆ ನಲ್ಲ ನಿಲ್ಲದ ಬಾಳು
ಚೆಂದವೇನೆ ಹರಸು ತಾಯೆ
ಕರ ಮುಗಿಯುವೆ ವರುಷಗಳು ಉರುಳಿ
ಹರುಷ ತರಲಿ ನನ್ನ ಬಾಳಲ್ಲಿ

ಗಂಡು-
ನಮ್ಮೂರ ಸೌಧದಲಿ
ನಿಮ್ಮೂರ ಮಂಟಪದಲಿ
ತುಂಬು ತೊಟ್ಟಿಲ ತೂಗೆ
ಬೆಳದಿಂಗಳ ಬಾಲೆಯೆ
ಹಸಿರುಟ್ಟ ಸಿರಿದೇವಿ
ಮಡಿಲ ಮೈ ಸೂರ ಸೊಬಗಲ್ಲಿ
ಪ್ರೇಮದರಸಿಯೆ
ಇಂಚರದಿ ರಸದೌತಣ ನೀಡೆ
ನನ್ನ ನಲ್ಲೆಽಽಽಽ

ಜೊತೆಗೂಡಿ ಹೋಗೋಣ ತಾಯ
ಪಾದಕೆ ಎರೆಗೊಣ ಹಕ್ಕಿಗಳಾಗಿ
ಬಾನಂಚಲಿ ಸೇರೋಣ ನಲಿಯೋಣ
ನನ್ನ ನಲ್ಲೆಽಽಽಽ
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...