Home / ಕವನ / ಕವಿತೆ / ಮೈಸೂರ ಮಲ್ಲಿಗೆ

ಮೈಸೂರ ಮಲ್ಲಿಗೆ

ಮೈಸೂರ ಮಲ್ಲಿಗೆಯಾ
ಮುಡಿದು ಕಣ್ಸನ್ನೆಯಾ
ನೋಟದಲಿ ಪಿಸು ಮಾತಿನಾ
ಮೋಡಿಯಲಿ ಚಲುವ ರಾಶಿಯ
ಬೀರುತ ಮನ ಸೆಳೆದಾ ನಲ್ಲೆಽಽಽಽ
ಕಾದಿರಲು ನಲ್ಲನಿಗಾಗಿ
ಬೆಳದಿಂಗಳು ಮೂಡಿತು
ಹೊನ್ನ ಮಳೆ ಸುರಿಯಿತು
ಗರಿಗೆದರಿ ಕುಣಿದಾ ನವಿಲು
ಅವಳ ನೋಟಕ್ಕೆ ನಾಚಿತ್ತುಽಽಽಽ

ಹೆಣ್ಣು-
ಬೆಳದಿಂಗಳ ಬಾಳ ಹುಣ್ಣಿಮೆಯ
ಮೂಡುವಾಸೆಯಲಿ ತುಂತುರು ತುಂತುರು
ಮಳೆಹನಿಯಲಿ ತನನತಾನನ
ಧರೆಯು ತಣಿಯಿತು ನನ್ನ ಮನದಿ
ನಿನ್ನ ಗಾನಮೌನವಾಗಿ ವಿರಹಿಸಿತು

ಮೂಡಿದಾ ಮಲ್ಲಿಗೆ ದಳಗಳಲಿ
ನಿನ್ನ ನಗೆಯ ಬಿಂಬವನಿರಿಸಿ
ಸುಮವಾಗಿ ಅರಳಿ ದುಂಬಿಯಾಗಿ
ಬಾರದಿರುವೆ ಏಕೋ ನಾ ಕಾಣೆನೆ

ಬಾಳ ದೀವಿಗೆಯ ಜ್ಯೋತಿಯಾಗಿಹೆ
ಮನವ ತುಂಬಿದೆ ಜೊತೆಯಾಗಿ
ನಲಿವ ಆಸೆಯಲಿ ನಿನ್ನ ಕಾಣುವ
ಬಯಕೆ ಹೊಮ್ಮಿದೆ ಏಕೋನಾ ಕಾಣೆನೆ

ತಾಯೆ ಚಾಮುಂಡಿಯೆ ನಮಿಸಿ
ಬೇಡುವೆ ನಲ್ಲ ನಿಲ್ಲದ ಬಾಳು
ಚೆಂದವೇನೆ ಹರಸು ತಾಯೆ
ಕರ ಮುಗಿಯುವೆ ವರುಷಗಳು ಉರುಳಿ
ಹರುಷ ತರಲಿ ನನ್ನ ಬಾಳಲ್ಲಿ

ಗಂಡು-
ನಮ್ಮೂರ ಸೌಧದಲಿ
ನಿಮ್ಮೂರ ಮಂಟಪದಲಿ
ತುಂಬು ತೊಟ್ಟಿಲ ತೂಗೆ
ಬೆಳದಿಂಗಳ ಬಾಲೆಯೆ
ಹಸಿರುಟ್ಟ ಸಿರಿದೇವಿ
ಮಡಿಲ ಮೈ ಸೂರ ಸೊಬಗಲ್ಲಿ
ಪ್ರೇಮದರಸಿಯೆ
ಇಂಚರದಿ ರಸದೌತಣ ನೀಡೆ
ನನ್ನ ನಲ್ಲೆಽಽಽಽ

ಜೊತೆಗೂಡಿ ಹೋಗೋಣ ತಾಯ
ಪಾದಕೆ ಎರೆಗೊಣ ಹಕ್ಕಿಗಳಾಗಿ
ಬಾನಂಚಲಿ ಸೇರೋಣ ನಲಿಯೋಣ
ನನ್ನ ನಲ್ಲೆಽಽಽಽ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...