ಮೈಸೂರ ಮಲ್ಲಿಗೆ

ಮೈಸೂರ ಮಲ್ಲಿಗೆಯಾ
ಮುಡಿದು ಕಣ್ಸನ್ನೆಯಾ
ನೋಟದಲಿ ಪಿಸು ಮಾತಿನಾ
ಮೋಡಿಯಲಿ ಚಲುವ ರಾಶಿಯ
ಬೀರುತ ಮನ ಸೆಳೆದಾ ನಲ್ಲೆಽಽಽಽ
ಕಾದಿರಲು ನಲ್ಲನಿಗಾಗಿ
ಬೆಳದಿಂಗಳು ಮೂಡಿತು
ಹೊನ್ನ ಮಳೆ ಸುರಿಯಿತು
ಗರಿಗೆದರಿ ಕುಣಿದಾ ನವಿಲು
ಅವಳ ನೋಟಕ್ಕೆ ನಾಚಿತ್ತುಽಽಽಽ

ಹೆಣ್ಣು-
ಬೆಳದಿಂಗಳ ಬಾಳ ಹುಣ್ಣಿಮೆಯ
ಮೂಡುವಾಸೆಯಲಿ ತುಂತುರು ತುಂತುರು
ಮಳೆಹನಿಯಲಿ ತನನತಾನನ
ಧರೆಯು ತಣಿಯಿತು ನನ್ನ ಮನದಿ
ನಿನ್ನ ಗಾನಮೌನವಾಗಿ ವಿರಹಿಸಿತು

ಮೂಡಿದಾ ಮಲ್ಲಿಗೆ ದಳಗಳಲಿ
ನಿನ್ನ ನಗೆಯ ಬಿಂಬವನಿರಿಸಿ
ಸುಮವಾಗಿ ಅರಳಿ ದುಂಬಿಯಾಗಿ
ಬಾರದಿರುವೆ ಏಕೋ ನಾ ಕಾಣೆನೆ

ಬಾಳ ದೀವಿಗೆಯ ಜ್ಯೋತಿಯಾಗಿಹೆ
ಮನವ ತುಂಬಿದೆ ಜೊತೆಯಾಗಿ
ನಲಿವ ಆಸೆಯಲಿ ನಿನ್ನ ಕಾಣುವ
ಬಯಕೆ ಹೊಮ್ಮಿದೆ ಏಕೋನಾ ಕಾಣೆನೆ

ತಾಯೆ ಚಾಮುಂಡಿಯೆ ನಮಿಸಿ
ಬೇಡುವೆ ನಲ್ಲ ನಿಲ್ಲದ ಬಾಳು
ಚೆಂದವೇನೆ ಹರಸು ತಾಯೆ
ಕರ ಮುಗಿಯುವೆ ವರುಷಗಳು ಉರುಳಿ
ಹರುಷ ತರಲಿ ನನ್ನ ಬಾಳಲ್ಲಿ

ಗಂಡು-
ನಮ್ಮೂರ ಸೌಧದಲಿ
ನಿಮ್ಮೂರ ಮಂಟಪದಲಿ
ತುಂಬು ತೊಟ್ಟಿಲ ತೂಗೆ
ಬೆಳದಿಂಗಳ ಬಾಲೆಯೆ
ಹಸಿರುಟ್ಟ ಸಿರಿದೇವಿ
ಮಡಿಲ ಮೈ ಸೂರ ಸೊಬಗಲ್ಲಿ
ಪ್ರೇಮದರಸಿಯೆ
ಇಂಚರದಿ ರಸದೌತಣ ನೀಡೆ
ನನ್ನ ನಲ್ಲೆಽಽಽಽ

ಜೊತೆಗೂಡಿ ಹೋಗೋಣ ತಾಯ
ಪಾದಕೆ ಎರೆಗೊಣ ಹಕ್ಕಿಗಳಾಗಿ
ಬಾನಂಚಲಿ ಸೇರೋಣ ನಲಿಯೋಣ
ನನ್ನ ನಲ್ಲೆಽಽಽಽ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಟಕವೊಂದರ ಹಾಡುಗಳು – ೨
Next post ವರ್ಷತೊಡಕು

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…