ಕವಿ

ಸುಗ್ಗಿ ಬರುತಿರೆ ನಲಿದು ಶುಕಪಿಕಗಳುಲಿಯುವವು
ತಮ್ಮರಸುವಾತಿನೊಳು – ತಂಗಾಳಿಯೂದುವವು.
ಇಳೆಯನೆಲ್ಲವ ತುಂಬ ಕೊನೆಗೊಮ್ಮೆ ಮೋದವದು
ಧ್ವನಿತವಾಗಿರೆ ಜೀವಕೋಟಿಗಳು ನಲಿಯುವವು
ಎಳೆವಾತಿನಲಿ ನುಡಿದು ಹಸುಮಗಗಳೊಲಿಯುವವು
ಅವರ ತೊದಲ್ನುಡಿಗಳಲಿ ವಳೆವಾತ ಕಾಣುವದು,
ಮತ್ತೆ ಪರಮಾರ್‍ಥವನು, ತಾಯಂದಿರ ಪ್ರಾಣವದು!
ಇಂತು ಹಿರಿಯೊಸಗೆಯಲಿ ಕರುಳೆಲ್ಲ ಬಲಿಯುವವು

ಕವಿಯ ನಾಲ್ವಾತಿನಲಿ ಸಹ ನಮಗೆ ಗೋಚರಿಪ
ಅರ್‍ಥವಿದೆಯೆಂದಲ್ಲ, ಅರ್‍ಥವಿಲ್ಲದೆಯಿಲ್ಲ!
ಪಿಕದಂತೆ ಹಸುಗೂಸಿನಂತೆ ನುಡಿವನು ಕವಿಯು.
ಅದರರ್‍ಥವೆಲ್ಲವನು ಬಲ್ಲವನೆ ತಾ ಬಲ್ಲ!
ತಿಳಿಯಲಿಕೆ, ಕವಿಯಂತೆ ತಾಯಿಯಂತಾಚರಿಪ
ಸರಲ ಹೃದಯವು ಬೇಕು, ಆಗ ಕಾವ್ಯದ ಸವಿಯು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಗನ ಹಕ್ಕಿಯು ಗಾನ ತುಂಬಿತು

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…