ಅಂತರಾರ್‍ಥ

ಒಬ್ಬ ಮಠಾಧೀಶರು ತಮ್ಮ ಶಿಷ್ಯರಿಗೆ ಒಂದು ಪ್ರಶ್ನೆ ಹಾಕಿದರು. ದಾರಿಯಲ್ಲಿ ಗುರುಗಳು ನಿಮಗೆ ಭೇಟಿಯಾದರೆ ನೀವು ಅವರ ಸಮಕ್ಷಮದಲ್ಲಿ ಮಾತನಾಡಬಾರದು, ಮೌನವಾಗಿಯು, ಇರಬಾರದು.

“ಹೇಳಿ, ಆಗ ನೀವೇನು ಮಾಡುತ್ತಿರಿ?”

“ಕಣ್ಣಿನಲ್ಲಿ ದೀಪಾರತಿ ಎತ್ತಿ, ಮುಗುಳು ಮಂದಾರವರಳಿಸಿ ಕೈಜೋಡಿಸುತ್ತೇನೆ.” ಎಂದ ಒಬ್ಬ ಶಿಷ್ಯ. “ಭಲೇ! ಎಂದರು” ಮಠಾಧೀಶರು.

ಮತ್ತೊರ್‍ವ ಶಿಷ್ಯ “ಇದು ಎಲ್ಲರು ಮಾಡುವ ಕಾರ್‍ಯ ಹೆಚ್ಚಳಿಕೆ ಏನೂ ಇಲ್ಲ” ಎಂದ.

“ಹಾಗಾದರೆ ನೀ ಏನು ಮಾಡುತ್ತೀ?” ಎಂದರು ಮಠಾಧೀಶರು.

“ಒಂದು ಕೋಲು ಅಡ್ಡ ಇಟ್ಟು ಅಡ್ಡ ಬೀಳುತ್ತೇನೆ” ಎಂದ ಇನ್ನೊಬ್ಬ ಶಿಷ್ಯ.

“ಇದರ ಅಂತರಾರ್‍ಥವೇನು, ತಿಳಿಯಬಹುದೆ?” ಎಂದರು.

“ಗುರು ನನ್ನ ಆಂತರ್‍ಯದಲ್ಲಿ, ಆಗಲೆ ಇದ್ದಾನೆ. ನಿಮಗೆ ನನ್ನೊಳಗೆ ಸ್ವಾಗತವಿಲ್ಲ” ಎಂದು ಅಡ್ಡ ಬಿಳುವೆ ಎಂದ.

ಭೇಷ್! ಶಿಷ್ಯಾ, ಎಂದು ಮಠಾಧೀಶರು ಬೆನ್ನು ತಟ್ಟಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಮ್ಮನಾಳುವ ಬ್ರಿಟಿಷರ ಶಕ್ತಿ ಮೂಲವಾವುದು ಗೊತ್ತೇ?
Next post ಅಗಮ್ಯ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…