Home / ಲೇಖನ / ಇತರೆ / ಅಸ್ಥಿಪಂಜರಗಳ ಕತೆ

ಅಸ್ಥಿಪಂಜರಗಳ ಕತೆ

ಚೀನಾದ ಬೀಜಿಂಗ್‌ನಲ್ಲಿ ಒಂದೇ ಕಡೆ ೯೭ ಅಸ್ಥಿಪಂಜರಗಳು ಅದು ಸಣ್ಣ ಮನೆಯಲ್ಲಿ ಸಿಕ್ಕಿವೆ….! ಅಲ್ಲಿಯ ಜನರೇನು ಪುರಾತತ್ವ ಶಾಸ್ತ್ರಜ್ಞರು ದಂಗು ಬಡಿದು ಹೋಗಿರುವರು.

ಈ ೯೭ ಅಸ್ಥಿಪಂಜರಗಳು ತಮ್ಮ ಕತೆ ವ್ಯಥೆಯನ್ನು ಈಗೀಗ ಅಂದರೆ.. ಆಗಸ್ಟ್ ೨೦೧೫ರಲ್ಲಿ ಹೇಳುತ್ತಿವೆ.

ಈ ೯೭ ಅಸ್ಥಿಪಂಜರಗಳು ಸುಮಾರು ಐದು ಸಾವಿರ ವರ್‍ಷಗಳಷ್ಟು ಹಳೆಯದಾದ ಸಣ್ಣ ಮನೆಯೊಂದರಲ್ಲಿದ್ದವುಗಳನ್ನು ಪುರಾತತ್ವ ಶಾಸ್ತ್ರಜ್ಞರು ಎಲ್ಲವನ್ನು ಹೊರಗೆಳೆದಿರುವರು.

ಇವೆಲ್ಲ ಭಾರಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರನ್ನು ಈಶಾನ್ಯ ಚೀನಾದ ಸಣ್ಣ ಮನೆಯಲ್ಲಿ ಒಟ್ಟಿಗೆ ಮಲಗಿಸಿ ಸುಡುತ್ತಿದ್ದರು. ಅದು ಉಳಿದವರಿಗೆ ಹರಡದಿರಲೆಂದು ಬಾಗಿಲು, ಕಿಟಕಿ, ಗವಾಕ್ಷಿ ಏನೆಲ್ಲ ಮುಚ್ಚಿ ಜಾಗ್ರತೆ ಮಾಡುತ್ತಿದ್ದರೆಂದು ಪುರಾತತ್ವ ಶಾಸ್ತ್ರಜ್ಞರು ವಿವರಿಸಿರುವರು.

ಈ ರೀತಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರಲ್ಲಿ ಹದಿಹರೆಯದವರು ಯುವಕರು-ಮಧ್ಯ ವಯಸ್ಕರು ಬಾಲಕರು ಎಲ್ಲ ರೀತಿಯ ವಯಸ್ಕರು ಇರುತ್ತಿದ್ದರೆಂದು ಅಸ್ಥಿಪಂಜರ ತಲೆಬುರುಡೆ ಇತ್ಯಾದಿಗಳನ್ನು ತೋರಿಸಿ ಅಲ್ಲಿದ್ದವರಿಗೆಲ್ಲ ವಿವರಿಸುತ್ತಿದ್ದರು.

ಈಶಾನ್ಯ ಚೀನಾದ ಈ ಭಾಗದಲ್ಲಿ ಲಿಪಿ ಇಲ್ಲದಾಗ ಇಲ್ಲಿನ ಜನರೆಲ್ಲ ಗುಂಪುಗುಂಪಾಗಿ ಸಣ್ಣ ಸಣ್ಣ ಮನೆಗಳಲ್ಲಿ ನೆಲೆಸಿದ್ದರೆಂಬುದನ್ನು ಸಂಶೋಧನೆಗಳು ಹೊರಗೆಡವಿಯಲ್ಲದೆ, ಆಹಾರಕ್ಕಾಗಿ ಮುಖ್ಯವಾಗಿ ಬೇಟೆಯಾಡುತ್ತಿದ್ದರೆಂಬುದನ್ನು ತಜ್ಞರು ಸಂಶೋಧಿಸಿರುವರು.

– ಹೀಗೆ ಸಂಶೋಧನೆಗಳು ತೀವ್ರಗೊಳ್ಳುತ್ತಾ ಹೋದಂತೆಲ್ಲ ಏನೆಲ್ಲ ರಹಸ್ಯಗಳು ಹೊಸ ಹೊಸ ಆವಿಷ್ಕಾರಗಳು ಹೊರಗೆ ಬೀಳಬಹುದೆಂದು ಕಾದು ನೋಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...