ಅಸ್ಥಿಪಂಜರಗಳ ಕತೆ

ಚೀನಾದ ಬೀಜಿಂಗ್‌ನಲ್ಲಿ ಒಂದೇ ಕಡೆ ೯೭ ಅಸ್ಥಿಪಂಜರಗಳು ಅದು ಸಣ್ಣ ಮನೆಯಲ್ಲಿ ಸಿಕ್ಕಿವೆ….! ಅಲ್ಲಿಯ ಜನರೇನು ಪುರಾತತ್ವ ಶಾಸ್ತ್ರಜ್ಞರು ದಂಗು ಬಡಿದು ಹೋಗಿರುವರು.

ಈ ೯೭ ಅಸ್ಥಿಪಂಜರಗಳು ತಮ್ಮ ಕತೆ ವ್ಯಥೆಯನ್ನು ಈಗೀಗ ಅಂದರೆ.. ಆಗಸ್ಟ್ ೨೦೧೫ರಲ್ಲಿ ಹೇಳುತ್ತಿವೆ.

ಈ ೯೭ ಅಸ್ಥಿಪಂಜರಗಳು ಸುಮಾರು ಐದು ಸಾವಿರ ವರ್‍ಷಗಳಷ್ಟು ಹಳೆಯದಾದ ಸಣ್ಣ ಮನೆಯೊಂದರಲ್ಲಿದ್ದವುಗಳನ್ನು ಪುರಾತತ್ವ ಶಾಸ್ತ್ರಜ್ಞರು ಎಲ್ಲವನ್ನು ಹೊರಗೆಳೆದಿರುವರು.

ಇವೆಲ್ಲ ಭಾರಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರನ್ನು ಈಶಾನ್ಯ ಚೀನಾದ ಸಣ್ಣ ಮನೆಯಲ್ಲಿ ಒಟ್ಟಿಗೆ ಮಲಗಿಸಿ ಸುಡುತ್ತಿದ್ದರು. ಅದು ಉಳಿದವರಿಗೆ ಹರಡದಿರಲೆಂದು ಬಾಗಿಲು, ಕಿಟಕಿ, ಗವಾಕ್ಷಿ ಏನೆಲ್ಲ ಮುಚ್ಚಿ ಜಾಗ್ರತೆ ಮಾಡುತ್ತಿದ್ದರೆಂದು ಪುರಾತತ್ವ ಶಾಸ್ತ್ರಜ್ಞರು ವಿವರಿಸಿರುವರು.

ಈ ರೀತಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರಲ್ಲಿ ಹದಿಹರೆಯದವರು ಯುವಕರು-ಮಧ್ಯ ವಯಸ್ಕರು ಬಾಲಕರು ಎಲ್ಲ ರೀತಿಯ ವಯಸ್ಕರು ಇರುತ್ತಿದ್ದರೆಂದು ಅಸ್ಥಿಪಂಜರ ತಲೆಬುರುಡೆ ಇತ್ಯಾದಿಗಳನ್ನು ತೋರಿಸಿ ಅಲ್ಲಿದ್ದವರಿಗೆಲ್ಲ ವಿವರಿಸುತ್ತಿದ್ದರು.

ಈಶಾನ್ಯ ಚೀನಾದ ಈ ಭಾಗದಲ್ಲಿ ಲಿಪಿ ಇಲ್ಲದಾಗ ಇಲ್ಲಿನ ಜನರೆಲ್ಲ ಗುಂಪುಗುಂಪಾಗಿ ಸಣ್ಣ ಸಣ್ಣ ಮನೆಗಳಲ್ಲಿ ನೆಲೆಸಿದ್ದರೆಂಬುದನ್ನು ಸಂಶೋಧನೆಗಳು ಹೊರಗೆಡವಿಯಲ್ಲದೆ, ಆಹಾರಕ್ಕಾಗಿ ಮುಖ್ಯವಾಗಿ ಬೇಟೆಯಾಡುತ್ತಿದ್ದರೆಂಬುದನ್ನು ತಜ್ಞರು ಸಂಶೋಧಿಸಿರುವರು.

– ಹೀಗೆ ಸಂಶೋಧನೆಗಳು ತೀವ್ರಗೊಳ್ಳುತ್ತಾ ಹೋದಂತೆಲ್ಲ ಏನೆಲ್ಲ ರಹಸ್ಯಗಳು ಹೊಸ ಹೊಸ ಆವಿಷ್ಕಾರಗಳು ಹೊರಗೆ ಬೀಳಬಹುದೆಂದು ಕಾದು ನೋಡೋಣವಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?
Next post ಗುಡಿಯಾ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…