Home / ಕವನ / ಕವಿತೆ / ಗುಡಿಯಾ

ಗುಡಿಯಾ

ಗುಡಿಯಾ ಆಟದ ಗೊಂಬೆಯಲ್ಲ
ರಕ್ತ ಮಾಂಸ ತುಂಬಿದ ಜೀವಂತ ಗೊಂಬೆ
ದುಃಖಕ್ಕೊಂದೇ ಹಕ್ಕು ಪಡೆದವಳು ಗುಡಿಯಾ
ನೋವಿನ ಕಡಲು ಒಡಲಲಿಟ್ಟುಕೊಂಡು
ನಾಪತ್ತೆಯಾದ ಪತಿ ಮರಳಿ ಬರುವ
ಹಾದಿ ಕಾಯ್ದಳು ದೀರ್‍ಘ ಕಾಲದ ತನಕ
ಕನಸು ಹುಸಿಹೋಯ್ತು ರೆಪ್ಪೆ ಭಾರವಾಯ್ತು.
ಹನಿಹನಿ ಉದುರಿಸಿ ಕಣ್ಣ ಕಿಂಡಿ ಬರಿದಾಯ್ತು
ಕೊನೆಗೆ ವಿದಾ ಹೇಳಿ ಮನದ ಕದವಿಟ್ಟುಕೊಂಡಳು.
ಮೌನ ಕಡಲಿಗೆ ಮರುಮಾತಿಲ್ಲದೆ ಶರಣಾದಳು
ಈಜಿದಳು ಭಯಂಕರ ಅಲೆಗಳಿಗೆ ಎದುರಾಗಿ
ನಕ್ಕಿದ್ದೇಷ್ಟೋ! ಬಿಕ್ಕಿದ್ದೆಷ್ಟೋ! ವಿರಹ
ಹಾಡಿದ್ದೇಷ್ಟೋ ಹಲುಬಿದ್ದೇಷ್ಟೋ ಗೀತೆ.

ಹರಿಯರಾಣತಿಯಂತೆ ಮರುಮದುವೆಯಾದಳು
ವಿಧಿಗೆ ತಲೆಬಾಗಿದಳು ಪುಟ್ಟ ಗುಡಿಯಾ
ಹೊತ್ತುನಿಂತಳು ಇವನ ಫಲಭಾರ
ಹೊಸ ಬದುಕಿನ ಬಾಗಿಲಲ್ಲಿ ಗಸ್ತುನಿಂತಳು.
ಮರಳಿ ಬಂದಿದ್ದ ಮೊದಲ ಪತಿ ಆರೀಫ್
ಮೈ ಮನಗಳಲ್ಲಿ ತೌಫಿಕನ ಬೆಳಕಿನ ಚುಳಕ
ವಿಧಿಯಾಟಕ್ಕೆ ಬೇಸ್ತು ಬಿದ್ದಳು ಗುಡಿಯಾ
ಸಂಕೀರ್‍ಣ ಬದುಕಿಗೆ ಎರವಾದಳು.

ಮೂಡಿದ ಮಿಡಿಗೆ ಅಗಲಿಕೆಯ ಭಯವೆ?
ಜೇನ ಸುರಿಯುವ ಬೊಚ್ಚು ಬಾಯಿಯ ಕೂಸು
ಹೆತ್ತಮ್ಮನ ಗುರುತಿಸಿ ಕೇಕೆ ಹಾಕುವ ಮುನ್ನ
ಒದ್ದು ಅಮ್ಮನ ಎದೆ ಹಾಲು ಹೆಕ್ಕುವ ಮುನ್ನ
ಜಮಾತಿನ ತೀರ್‍ಮಾನ ಹೊರಬಿತ್ತು
“ಕರುಳ ಬಳ್ಳಿಯನ್ನು ಇವನಿಗೊಪ್ಪಿಸಿ
ಮರಳಿ ಹೋಗಬೇಕು ಅವನಲ್ಲಿಗೆ”
ತೀರ್‍ಮಾನ ಕೇಳಿದ ಮೀನಾರಿನ ಮೈಕು
ಅಲ್ಲಾಹು ಎಂದು ಮೌನವಾಯಿತು.

ಭೂಮಿ ಎದೆ ಬರಿಯುವಂತೆ ರೊದಿಸಿದ
ಗುಡಿಯಾಳ ಆರ್‍ತ ಬಿಕ್ಕುಗಳ ಶಬ್ದ
ತಟ್ಟಲಿಲ್ಲವೆ ಜಮಾತಿನ ಹೃದಯಕೆ?
ಭೂಮಿ-ಆಗಸಕೆ, ತಾಯಿ ಮಗುವಿಗೆ
ಹಾಕಬಹುದೇ ಬಹಿಷ್ಕಾರ?
ಕಂಪಿಸಿದ ಗುಬ್ಬಿ ಹೃದಯ ಹಾಲಹಲ
ಕ್ರೌಂಚ ಪಕ್ಷಿಯ ಮೌನ ರೋದನ
ತಟ್ಟಲಾರದೇ ಜಮಾತಿನ ಕಟ್ಟೆಗೆ?

ಹೆಣ್ಣಿನ ಮಾತೃತ್ವ ಆಟದ ವಸ್ತುವೇನೆ?
ನಿಷೇಧದ ಬೇಲಿಗಳ ಕಿತ್ತೆಸೆದು
ಸೊಕ್ಕಿದ ಕೊಕ್ಕುಗಳ ಕತ್ತರಿಸಿ
ಶಕ್ತಿ ಒಗ್ಗೂಡಿಸಿ ಹೊರಗೆ ಬಾ ಗುಡಿಯಾ
ಬದುಕು ಮಾಧ್ಯಮದ ವಿಷಯವಲ್ಲ
ಚಪ್ಪರಿಸುವ ಸುದ್ದಿಯಲ್ಲ.
ಎದ್ದು ಹೇಳುಬಾ ನಿನ್ನದೇ ನಿರ್‍ಧಾರ.
ಕಿಕ್ಕಿರಿದ ಜಮಾತಿನ ಮಧ್ಯೆ
ಸಿಕ್ಕಲಾರರೇ ಒಬ್ಬರಾದರೂ ಸಂತರು
ನಿನ್ನ ನೋವ ಕರಗಿಸಿ
ಸಂತೈಸುವ ಪೈಗಂಬರರು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...