Home / ಕವನ / ಕವಿತೆ / ಒಂದು ಸಾವಿನ ಸುತ್ತ

ಒಂದು ಸಾವಿನ ಸುತ್ತ

ಪತ್ರಿಕೆಗಳು ಸುದ್ದಿ ಮಾಡಿದವು
ಟಿ.ವಿ.ಛಾನಲ್ಲುಗಳು ಎಡೆಬಿಡದೆ ಬಿತ್ತರಿಸಿದವು
ಬೆಂಗಳೂರು ನಗರವೇ ಬೆಚ್ಚಿ ಬೀಳಿಸುವ ಸುದ್ದಿ
ರಾತ್ರಿ ಕತ್ತಲೆಯಲಿ ನಡದೇ ಹೋಯ್ತು
ಸಾಫ್ಟ್‌ವೇರ್ ಇಂಜೀನಿಯರಳ ಕೊಲೆ
ಬರ್‍ಬರ ಅತ್ಯಾಚಾರ, ಹುಟ್ಟಿಸಿದೆ
ಮೆಟ್ರೋ ಮಹಿಳೆಯರ ಮೈಯಲ್ಲಿ ನಡುಕ.

ಜಾಗತಿಕ ಗ್ರಾಹಕರ ನೇರ ಸಮರ್‍ಪಕ
ಕಾಲ್‌ ಸೆಂಟರ್‌ಗಳ ಲೋಕ ಭಾವನಾತ್ಮಕ
ಹೈಟೆಕ್ ಸಂಸ್ಕೃತಿಗಳ ಹಿಂದೆ ಅಡಗಿರುವ
ನೂರಾರು ಗೈರತ್ತು-ಶಿಸ್ತಿನ ಕೊಕ್ಕುಗಳು
ದಾಟಲಾಗದು ಡೆಡ್‌ಲೈನ್‌ಗಳು
ಜೀವ ಹೋದರೂ ಸರಿಯೇ
ಹೊತ್ತಲ್ಲದ ಹೊತ್ತಿನಲ್ಲಿ ನಿರಂತರ ದುಡಿತ
ಮಾನಸಿಕ ಒತ್ತಡ, ರಕ್ಷಣೆ ಕೇಳಿದರೆ
ಕೆಲಸ ಹೋಗುವ ಭಯ
ದುಡಿಯಲೇಬೇಕಿದೆ ಹೊಟ್ಟೆಪಾಡಿದೆಯಲ್ಲ?
ಸಮಾನತೆಯ ಸೂತ್ರದಲ್ಲಿ ಬಂಧಿಸಿಯಾಗಿಸಿ
ಅವಳನು ಆಪತ್ತಿನ ಬಾಯಿಗೆ ದೂಡುವುದೇಕೆ?
ಜೀವನದಿಯಾಗಿ ತುಂಬಿ ಹರಿದವಳು
ಕರ್‍ಮ ಕಾಂಡಗಳ ಸಹಿಸಿ ಬತ್ತಬೇಕೇಕೆ?
ಸೂರ್‍ಯಶಿಕಾರಿಗೆ ಹೊರಟವಳ
ದಾರಿಗೆ, ಅಡ್ಡಗೋಡೆಗಳ ಒಡ್ಡುವುದೇಕೆ?
ಎಲ್ಲ ಸಾದಿಸಲು ಹೊರಟವಳಿಗೆ
ಇಲ್ಲವಾಗಿಸುವ ಹುನ್ನಾರವೇಕೆ?
ಅವಳ ಶ್ರಮ ಕಂಪನಿಗಳ ಲಾಭಕ್ಕಲ್ಲವೇ?
ಇರಲಿ ನಮ್ಮವನೇ ಚಾಲಕ ನಮ್ಮದೇ ಕಂಪನಿ
ವಿದೇಶಿಯರ ಲಾಭಕ್ಕೆ ಇನ್ನೆಷ್ಟು ಬಲಿಗಳು?
ಕತ್ತಲೆಯ ಗೋರಿಯಿಂದ ಎದ್ದು ಬಾರಮ್ಮ
ಅವರ ಪಾತಕದ ಒಂದೊಂದು ಬಿಲ್ಲೆಯ
ಲೆಕ್ಕವನೂ ಬಿಡದೇ ಕೇಳು ಬಾರಮ್ಮ
ಇಲ್ಲವಾದರೆ ಹೆಣ್ಣಗಳು ಹೇಗೆ ದುಡಿದಾರು?
ಭೂಮಿ ಮೇಲೆ ತಮ್ಮ ತುತ್ತನ್ನು
ತಾವು ಹೇಗೆ ಗಳಿಸಿಯಾರು?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...