ಒಂದು ಸಾವಿನ ಸುತ್ತ

ಪತ್ರಿಕೆಗಳು ಸುದ್ದಿ ಮಾಡಿದವು
ಟಿ.ವಿ.ಛಾನಲ್ಲುಗಳು ಎಡೆಬಿಡದೆ ಬಿತ್ತರಿಸಿದವು
ಬೆಂಗಳೂರು ನಗರವೇ ಬೆಚ್ಚಿ ಬೀಳಿಸುವ ಸುದ್ದಿ
ರಾತ್ರಿ ಕತ್ತಲೆಯಲಿ ನಡದೇ ಹೋಯ್ತು
ಸಾಫ್ಟ್‌ವೇರ್ ಇಂಜೀನಿಯರಳ ಕೊಲೆ
ಬರ್‍ಬರ ಅತ್ಯಾಚಾರ, ಹುಟ್ಟಿಸಿದೆ
ಮೆಟ್ರೋ ಮಹಿಳೆಯರ ಮೈಯಲ್ಲಿ ನಡುಕ.

ಜಾಗತಿಕ ಗ್ರಾಹಕರ ನೇರ ಸಮರ್‍ಪಕ
ಕಾಲ್‌ ಸೆಂಟರ್‌ಗಳ ಲೋಕ ಭಾವನಾತ್ಮಕ
ಹೈಟೆಕ್ ಸಂಸ್ಕೃತಿಗಳ ಹಿಂದೆ ಅಡಗಿರುವ
ನೂರಾರು ಗೈರತ್ತು-ಶಿಸ್ತಿನ ಕೊಕ್ಕುಗಳು
ದಾಟಲಾಗದು ಡೆಡ್‌ಲೈನ್‌ಗಳು
ಜೀವ ಹೋದರೂ ಸರಿಯೇ
ಹೊತ್ತಲ್ಲದ ಹೊತ್ತಿನಲ್ಲಿ ನಿರಂತರ ದುಡಿತ
ಮಾನಸಿಕ ಒತ್ತಡ, ರಕ್ಷಣೆ ಕೇಳಿದರೆ
ಕೆಲಸ ಹೋಗುವ ಭಯ
ದುಡಿಯಲೇಬೇಕಿದೆ ಹೊಟ್ಟೆಪಾಡಿದೆಯಲ್ಲ?
ಸಮಾನತೆಯ ಸೂತ್ರದಲ್ಲಿ ಬಂಧಿಸಿಯಾಗಿಸಿ
ಅವಳನು ಆಪತ್ತಿನ ಬಾಯಿಗೆ ದೂಡುವುದೇಕೆ?
ಜೀವನದಿಯಾಗಿ ತುಂಬಿ ಹರಿದವಳು
ಕರ್‍ಮ ಕಾಂಡಗಳ ಸಹಿಸಿ ಬತ್ತಬೇಕೇಕೆ?
ಸೂರ್‍ಯಶಿಕಾರಿಗೆ ಹೊರಟವಳ
ದಾರಿಗೆ, ಅಡ್ಡಗೋಡೆಗಳ ಒಡ್ಡುವುದೇಕೆ?
ಎಲ್ಲ ಸಾದಿಸಲು ಹೊರಟವಳಿಗೆ
ಇಲ್ಲವಾಗಿಸುವ ಹುನ್ನಾರವೇಕೆ?
ಅವಳ ಶ್ರಮ ಕಂಪನಿಗಳ ಲಾಭಕ್ಕಲ್ಲವೇ?
ಇರಲಿ ನಮ್ಮವನೇ ಚಾಲಕ ನಮ್ಮದೇ ಕಂಪನಿ
ವಿದೇಶಿಯರ ಲಾಭಕ್ಕೆ ಇನ್ನೆಷ್ಟು ಬಲಿಗಳು?
ಕತ್ತಲೆಯ ಗೋರಿಯಿಂದ ಎದ್ದು ಬಾರಮ್ಮ
ಅವರ ಪಾತಕದ ಒಂದೊಂದು ಬಿಲ್ಲೆಯ
ಲೆಕ್ಕವನೂ ಬಿಡದೇ ಕೇಳು ಬಾರಮ್ಮ
ಇಲ್ಲವಾದರೆ ಹೆಣ್ಣಗಳು ಹೇಗೆ ದುಡಿದಾರು?
ಭೂಮಿ ಮೇಲೆ ತಮ್ಮ ತುತ್ತನ್ನು
ತಾವು ಹೇಗೆ ಗಳಿಸಿಯಾರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ಲೋರೋ ಕಾರ್‍ಬನ್ ಹೊಸ ರಕ್ತ
Next post ಕಡಲಿದಿರು

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…