ಕಡಲಿದಿರು

ಗುಳಿಗೆ ಬಿದ್ದಾರುತಿಹ ಭೂತದಂತೊರಲುತಿದೆ
ನಿಡುಸುಯ್ಯುತೀ ಕಡಲು ತನ್ನ ಬಂಧಿಸುವರೆಯ
ದಡವನಲೆಪಂಜದಿಂ ಪರಚಿ-ಮೇಲೇರಿ ಬರ-
ಲೆಳಸಿ ನಿಮಿನಿಮಿರಿ ಬಿದ್ದೆದ್ದುರುಳಿ ಕೊನೆಗೆ ಈ
ಕರೆಗೆಯೇ ಕೈಚಾಚುತಿದೆ ನೆರವ ಕೋರುತ್ತ.
ದಿಟ ಮಹದ್ವ್ಯಕ್ತಿ ಈ ನೀರನಿಧಿ; ಚಿರವಿದರ
ತಟದೆಲ್ಲೆಯಪಮಾನದಾರ್ತನಿರ್ಘೋಷ. ಇದ
ಸೆರೆಯೊಳಿಟ್ಟಾಳ್ವರಾರ್?-ಯೋ ವೈ ಭೂಮಾ ತತ್
ಸುಖಮೆಂಬ ಋಷಿವಾಣಿ ಅನುಭೂತವಾಗುತಿರೆ
ದಣಿವಿಲ್ಲದಲೆಯುವೀ ಮುನ್ನೀರ ಹರಹ ನಾ
ಕನಿಕರಿಸಿ ನಿಂದಿಹೆನು ಆ ಮಹಾಶಕ್ತಿ ಸಂ-
ಮುಖದಿ ಅದರ ಋತವನು ಸೋಂಕಿ ಅಲ್ಪತೆ ನೀಗಿ-
ಕ್ಷುಬ್ಬ ಜಗದೊಳು ಕ್ಷಾಂತಿಯಂತಿರುವ ಯುಕ್ತನಂತೆ
ಹರಿಯ ನಿಲುವೊಳು ಭವಿಗೆ ಮರುಗುತಿಹ ಭಕ್ತನಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಸಾವಿನ ಸುತ್ತ
Next post ಕೈಗೊಂಬೆ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…